ಹೊಲದಲ್ಲಿ ಲೇಔಟ್ ಆಗುವುದನ್ನು ತಡೆಯಲು ಹೊರಟಿದ್ದೀರಿ.! ನಗರದಲ್ಲಿ ಲೇಔಟ್ ಗಳೇ ಹೋಲಗಳಾಗುತ್ತಿವೆ ಸರಿಪಡಿಸಿ.

ದಾವಣಗೆರೆ: ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರ ರೆವೆನ್ಯೂ ಜಾಗದಲ್ಲಿ ಲೇಔಟ್ ಮಾಡಲಾಗುತ್ತಿದೆ ಎಂದು ಅಂತಹ ಲೇಔಟ್ ಗಳ ತೆರವಿಗೆ ಹೊರಟಿದೆ ಆದರೆ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆದು ನಿರ್ಮಿಸಿರುವ ಲೇಔಟ್ ಗಳಲ್ಲಿಯೇ ಮೂಲಭೂತ ಸೌಕರ್ಯಗಳಿಲ್ಲದೆ ಸಾರ್ವಜನಿಕರು ಶಪಿಸುತ್ತಿರುವುದನ್ನು ನೋಡಿದರೆ, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ, ನಗರಪಾಲಿಕೆಗೆ ಶುಲ್ಕ, ಕಂದಾಯ ಕಟ್ಟುವುದಾದರೂ ಏಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಬರದೇ ಇರದು.
ಇದಕ್ಕೆ ತಾಜಾ ಉದಾಹರಣೆ ಎಸ್.ಎಸ್. ಲೇಔಟ್ ಎ ಬ್ಲಾಕ್, ಕರ್ನಾಟಕ ಬ್ಯಾಂಕ್ ನಿಂದ ಎಂಬಿಎ ಕಾಲೇಜ್ ರಸ್ತೆಗಳು ಪೂರ್ಣ ಗುಂಡಿಯಿಂದ ತುಂಬಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು ಓಡಾಡುವುದೇ ಕಷ್ಟವಾಗಿದೆ, ಸಾವಿರಾರು ವಿದ್ಯಾರ್ಥಿಗಳು ಪ್ರತಿದಿನ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸಾರ್ವಜನಿಕರಿಂದ ಆದಾಯ ಸಂಗ್ರಹ ಮಾಡುತ್ತಿರುವ ಸರ್ಕಾರಕ್ಕೇ ಹಾಗೂ ಜನಪ್ರತಿನಿಧಿಗಳಿಗೆ, ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲವೇ ?????
ಕೆ.ಎಲ್.ಹರೀಶ್ ಬಸಾಪುರ