ಹೊನ್ನಾಳಿ: ಆಕಸ್ಮಿಕ ಬೆಂಕಿಗೆ ಬೆಂಕಿಗಾಹುತಿಯಾದ ಬಣವೆ

ದಾವಣಗೆರೆ: ಹೊನ್ನಾಳಿ ತಾಲೂಕಿನ ಬಲಮುರಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಬಣವೆ ಬೆಂಕಿಗಾಹುತಿಯಾಗಿದ್ದು, ದನಕರುಗಳಿಗಾಗಿ ಶೇಖರಿಸಿಟ್ಟ ಹುಲ್ಲು ಸುಟ್ಟು ಕರಕಲಾಗಿದೆ. ತಾಲೂಕಿನ ಬಲಮುರಿ ಗ್ರಾಮದ ರೈತ ಶೇಖರಪ್ಪ ಎಂಬುವರಿಗೆ ಸೇರಿದ್ದ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಶೇಕರಪ್ಪ ಅವರ ಬಣವೆಗೆ ಬೆಂಕಿ ತಗುಲಿರುವ ವಿಚಾರ ತಿಳಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ರೈತನಿಗೆ ಸಾಂತ್ವಾನ ಹೇಳಿದರು. ಅಷ್ಟೇಅಲ್ಲದ ಬಣವೆ ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.
garudavoice21@gmail.com 9740365719