ಹಾಡುಹಗಲೇ ಮದುವೆ ನಿಶ್ಚಯವಾಗಿದ್ದ ಯುವತಿಯ ಭೀಕರ ಹತ್ಯೆ.! ಕೊಲೆ ಮಾಡಿ ತಾನು ವಿಷ ಕುಡಿದು ಆಸ್ಪತ್ರೆಯ ಐ ಸಿ ಯು ನಲ್ಲಿ ದಾಖಲು

murder

ದಾವಣಗೆರೆ: ಮದುವೆ ನಿಶ್ಚಯವಾಗಿದ್ದ ಯುವತಿಯನ್ನು ಹಾಡುಹಗಲೇ ದುಷ್ಕರ್ಮಿಯೊಬ್ಬ ಹರಿತವಾದ ಆಯುಧದಿಂದ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಗುರುವಾರ ನಗರದ ಪಿಜೆ ಬಡಾವಣೆಯಲ್ಲಿ ನಡೆದಿದೆ.

ಚಾಂದ್ ಸುಲ್ತಾನ(28)ಹತ್ಯೆಗೀಡಾದ ಮಹಿಳೆ. ವ್ಯಕ್ತಿಯೊಬ್ಬ ಈಕೆಯನ್ನು ಹರಿತವಾದ ಆಯುಧದಿಂದ ಹತ್ತಾರು ಬಾರಿ ಮನಸೋಇಚ್ಛೆ ಇರಿದು ಕೊಲೆ ಮಾಡಿ ಬೈಕಿನಲ್ಲಿ ಪರಾರಿಯಾಗುವ ದೃಶ್ಯ ಸಿಸಿ ಟಿವಿಯಲ್ಲಿ ಸಂಪೂರ್ಣ ದಾಖಲಾಗಿದೆ. ಚಾಂದ್ ಪೀರ್ ಎಂಬ ವ್ಯಕ್ತಿ ಕೊಲೆ ಮಾಡಿ ತಾನು  ವಿಷ ಕುಡಿದು ಸಾವು ನೋವಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾನೆ.

ಮೃತ ಮಹಿಳೆ ವಿನೋಬನಗರದ ವಾಸಿಯಾಗಿದ್ದು, ನಗರದ ಮುಸ್ಲಿಂ ಹಾಸ್ಟೆಲ್‌ನಲ್ಲಿರುವ ಕಚೇರಿಯೊಂದರಲ್ಲಿ ಆಡಿಟಿಂಗ್ ಕೆಲಸ ಮಾಡುತ್ತಿದ್ದರು. ಹರಿಹರದ ಅಯೂಬ್ ಎಂಬ ಯುವಕನ ಜೊತೆ ಇತ್ತೀಗಷ್ಟೇ ಈಕೆಯ ಮದುವೆ ನಿಶ್ಚಯವಾಗಿತ್ತು. ಆದರೆ ಇದ್ದಕ್ಕಿಂದತೆ ಗುರುವಾರ ಬೆಳಿಗ್ಗೆ ಯುವತಿಯನ್ನು ಕೊಲೆ ಗೈಯಲಾಗಿದೆ.
ಚಾಂದ್ ಸುಲ್ತಾನ್ ಅವರು ತನ್ನ (ಕೆಎ 17 ಈಎಸ್ 2632) ಬಿಳಿ ಬಣ್ಣದ ಸ್ಕೂಟಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಬಂದಿರುವ ಹಂತಕ ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಆಕೆ ಸ್ವಲ್ಪ ಪ್ರತಿರೋಧ ತೋರುತ್ತಿದ್ದಂತೆಯೆ ಹಂತಕ ಚಾಕುವಿನ ಇರಿತವನ್ನು ಮತ್ತಷ್ಟು ಚುರುಕುಗೊಳಿಸಿ ಮನಬಂದತೆ ಚುಚ್ಚಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲಿಯೇ ನರಳುತ್ತಾ ಕೊನೆಯುಸಿರೆಳೆದಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!