ಕರ್ನಾಟಕದ ಸಾಲ ಎಷ್ಟು ಗೋತ್ತಾ? ಯಾರ್ಯಾರಿಂದ ಸಾಲ ಪಡೆದಿದ್ದಾರೆ ನೋಡಿ

ದಾವಣಗೆರೆ: ರಾಜ್ಯ ಸರ್ಕಾರ ಯೋಜನೆಗಳ ಅನುಷ್ಠಾನಕ್ಕೆ ಮತ್ತು ಬಂಡವಾಳ ಆಸ್ತಿ ಸೃಜಿಸಲು ವರ್ಷದಿಂದ ವರ್ಷಕ್ಕೆ ಸಾಲ ಮಾಡುತ್ತಲೇ ಇದೆ. ಹಾಗಾದರೆ ರಾಜ್ಯ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ಮಾಡಿರುವ ಸಾಲ ಎಷ್ಟು ಕೋಟಿ ರೂಗಳಿವೆ ಎಂಬುದರ ಬಗ್ಗೆ ಏನಾದರು ಅಂದಾಜಿದೆಯೇ? ಫೆ.24, 2022ರಲ್ಲಿ ಕರ್ನಾಟಕ ವಿಧಾನ ಪರಿಷತ್ತು ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯ ಸರ್ಕಾರ ಸಾಲದ ಬಗ್ಗೆ ಉತ್ತರಿಸಿರುವ ದಾಖಲೆಗಳ ಆಧಾರದ ಮೇಲೆ ಈ ವರದಿ ಪ್ರಕಟಿಸಲಾಗಿದ್ದು, ರಾಜ್ಯ ಸರ್ಕಾರದ ಸಾಲ ಎಷ್ಟಿದೆ ಎಂಬುದರ ಬಗೆಗಿನ ಮಾಹಿತಿ ಇದರಲ್ಲಿದೆ.
ಪ್ರಸ್ತುತ ರಾಜ್ಯ ಸರ್ಕಾರದ ಒಟ್ಟು ಸಾಲ ಎಷ್ಟಿದೆ? ಕಳೆದ ಐದು ವರ್ಷಗಳಿಂದ ಯಾವ್ಯಾವ ಮೂಲಗಳಿಂದ ಸಾಲ ಪಡೆಯಲಾಗಿದೆ ಎಂದು ಅನಿಲ್ ಕುಮಾರ್ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾರ್ಚ್ 2021ರ ಅಂತ್ಯದವರೆಗಿನ ಲೆಕ್ಕದ ಮಾಹಿತಿಯನುಸಾರ ರಾಜ್ಯದ ಈವರೆಗಿನ ಬಾಕಿ ಸಾರ್ವಜನಿಕ ಸಾಲದ ಮೊತ್ತ ರೂ.307757.56 ಕೋಟಿಗಳು.
ಕಳೆದ ಐದು ವರ್ಷದ ಸಾಲಗಳೇಷ್ಟು?:
ಕಳೆದ ಐದು ವರ್ಷದಲ್ಲಿ ಅಂದರೆ 2016-17ರಲ್ಲಿ 31155.92 ಕೋಟಿ, 2017-18ರಲ್ಲಿ 25121.86 ಕೋಟಿ, 2018-19ರಲ್ಲಿ 41914.06 ಕೋಟಿ, 2019-20 ರಲ್ಲಿ 50459.01 ಕೋಟಿ, 2020-21ರಲ್ಲಿ 84527.95 ಕೋಟಿ ರೂಗಳಿವೆ. ಇದರಲ್ಲಿ ಆಂತರಿಕ ಸಾಲ (ಮುಕ್ತ ಮಾರುಕಟ್ಟೆ& ನಬಾರ್ಡ್ ಸಾಲ) 2016-17ರಲ್ಲಿ 29237.98 ಕೋಟಿ, 2017-18ರಲ್ಲಿ23178.62, 2018-19ರಲ್ಲಿ 40469.67, 2019-20ರಲ್ಲಿ 49783.75, 2020-21ರಲ್ಲಿ 70413.87 ಕೋಟಿ ರೂಗಳು.
ಭಾರತದಿಂದ ಕರ್ನಾಟಕ ಸರ್ಕಾರದ ಸಾಲವೆಷ್ಟು?:
2016-17ರಲ್ಲಿ 1917.93 ಕೋಟಿ, 2017-18ರಲ್ಲಿ 1943.25, 2018-19ರಲ್ಲಿ 1444.39, 2019-20ರಲ್ಲಿ 675.26 ಕೋಟಿ, 2020-21ರಲ್ಲಿ 14114.04 ಕೋಟಿ ರೂಗಳಿವೆ.
ವಿದೇಶಿ ಸಂಸ್ಥೆಗಳ ನೆರವಿನಿಂದ ಪಡೆದ ಸಾಲವೆಷ್ಟು?:
2016-17ರಲ್ಲಿ 1917.93, 2017-18ರಲ್ಲಿ 1943.25, 2018-19ರಲ್ಲಿ 1444.39, 2019-20ರಲ್ಲಿ 675.26 ಕೋಟಿ, 2020-21ರಲ್ಲಿ 1402.04 ಕೋಟಿ ರೂಗಳನ್ನು ಕಳೆದ ಐದು ವರ್ಷಗಳಲ್ಲಿ ವಿದೇಶಿ ಸಂಸ್ಥೆಗಳಿ0ದ ಪಡೆಯಲಾಗಿದೆ.
ಎಲ್ಲಾ ಮೂಲಗಳ ಸಾಲಗಳಿಗೆ ಪ್ರತಿ ತಿಂಗಳು ಪಾವತಿಸುತ್ತಿರುವ ಬಡ್ಡಿ ದರವೆಷ್ಟು?:
ರಾಜ್ಯ ಸರ್ಕಾರ ಯೋಜನೆಗಳ ಅನುಷ್ಠಾನಕ್ಕೆ ಮತ್ತು ಬಂಡವಾಳ ಆಸ್ತಿ ಸೃಜಿಸಲು ಸಾಲವನ್ನು ಪಡೆಯಲಾಗುತ್ತದೆ.ವಿವಿಧ ಮೂಲಗಳಿಂದ ಪಡೆಯುವ ಸಾಲದ ಬಡ್ಡಿ ದರ ಬೇರೆ ಬೇರೆಯಾಗಿರುತ್ತದೆ. ಪ್ರಸ್ತುತ ಪಡೆಯುತ್ತಿರುವ ಮುಕ್ತ ಮಾರುಕಟ್ಟೆಯ ಸಾಲದ ಬಡ್ಡಿ ದರ ಶೇ.4.70ರಿಂದ 11ರವರೆಗೆ ಮತ್ತು ನಬಾರ್ಡ್ ಸಾಲದ ಬಡ್ಡಿ ದರ ಶೇ. 2.75 ರಿಂದ 7 ರವರೆಗೆ ಇರುತ್ತದೆ. ಪ್ರತಿ ವರ್ಷ ಆಯವ್ಯಯ ಅಂದಾಜಿನಲ್ಲಿ ಬಡ್ಡಿ ಪಾವತಿಗೆ ಬೇಕಾಗುವ ಮೊತ್ತವನ್ನು ಲೆಕ್ಕ ಹಾಕಿ ಪ್ರಧಾನ ಲೆಕ್ಕ ಶಿರ್ಷಿಕೆ 2049ರಡಿಯಲ್ಲಿ ಅನುದಾನ ಕಲ್ಪಿಸಿಕೊಂಡು ಬಡ್ಡಿಯನ್ನು ಪಾವತಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅನಿಲ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.
garudavoice21@gmal.com 9740365719