“ಒಂದು ರಾಷ್ಟ್ರ ಒಂದು ಪಡಿತರ ಯೋಜನೆ” ಪಡಿತರ ಪಡೆಯುವ ಮಾಹಿತಿ ಬಗ್ಗೆ ವಿವರಿಸಿದ್ದಾರೆ, ಆಹಾರ ಇಲಾಖೆ ಆಯುಕ್ತ ಡಾ. ಶಾಮ್ಯಾ ಇಕ್ವಾಲ್

Food department aahara rice

 

“ಒಂದು ರಾಷ್ಟ್ರ ಒಂದು ಪಡಿತರ ಯೋಜನೆ”
ಪಡಿತರ ಪಡೆಯುವ ಮಾಹಿತಿ ಬಗ್ಗೆ ವಿವರಿಸಿದ್ದಾರೆ
ಆಹಾರ ಇಲಾಖೆ ಆಯುಕ್ತ ಡಾ. ಶಾಮ್ಯಾ ಇಕ್ವಾಲ್.

ಹೆಚ್ ಎಂ ಪಿ ಕುಮಾರ್.

ಬೆಂಗಳೂರು: ಉದ್ಯೋಗ ಮತ್ತು ಇತರೆ ಜೀವನೋಪಾಯಕ್ಕಾಗಿ ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ವಲಸೆ ಹೋಗುವ ದೇಶವಾಸಿಗಳಿಗೆ ಆಹಾರ ಭದ್ರತೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳುರೂ ಪಿಸಿರುವ ಯೋಜನೆ “ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ, ರಾಷ್ಟ್ರದ ಯಾವುದೇ ರಾಜ್ಯದಲ್ಲಿ ಅಂತ್ಯೋದಯ ಅನ್ನ ಅಥವಾ ಆದ್ಯತಾ ಚೀಟಿ ಹೊಂದಿರುವವರು ರಾಷ್ಟ್ರದ ಯಾವುದೇ ರಾಜ್ಯದ ಯಾವುದೇ ಭಾಗದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಈ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯ ಮುಖ್ಯಾಂಶಗಳು:

1. ರಾಜ್ಯದೊಳಗೆ ಎಲ್ಲಾದರೂ ಪಡಿತರ ಪಡೆಯಬಹುದು:
ಕರ್ನಾಟಕ ರಾಜ್ಯದ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿ ಸಂಖ್ಯೆ/ಆಧಾರ್ ಸಂಖ್ಯೆ ನೀಡಿ ಹೆಬ್ಬೆರಳಿನ ಜೀವಮುದ್ರೆ ನೀಡಿ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ
ಪಡೆಯಬಹುದು.

2. ಯಾವುದೇ ರಾಜ್ಯದವರು ಯಾವುದೇ ರಾಜ್ಯದಲ್ಲಿ ಪಡಿತರ ಪಡೆಯಬಹುದು:
ರಾಷ್ಟ್ರದ ಯಾವುದೇ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿದ್ದರೂ ಅಂಥವರು ಯಾವುದೇ ರಾಜ್ಯದಲ್ಲಾದರೂ ಪಡಿತರ ಚೀಟಿ ಸಂಖ್ಯೆ/ಆಧಾರ್ ಸಂಖ್ಯೆ ನೀಡಿ ಹೆಬ್ಬೆರಳಿನ ಮುದ್ರೆ ಮೂಲಕ ಪಡಿತರ ಪಡೆಯಬಹುದು.

3. ಪಡಿತರ ಚೀಟಿದಾರರ ನೊಂದಣಿ:
ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯ
ಲಾಭ ಪಡೆಯಲು ಬಯಸುವ ಪಡಿತರ ಚೀಟಿದಾರರು ಭಾರತ ಸರ್ಕಾರದ ಮೇರಾ ರೇಷನ್ ಆಪ್ ಅಥವಾ ಸಹಾಯವಾಣಿ ಸಂಖ್ಯೆ: 14445 ಕ್ಕೆ ಕರೆಮಾಡಿ ಒಂದುನಿರ್ದಿಷ್ಟ ರಾಜ್ಯ/ಜಿಲ್ಲೆ/ಸ್ಥಳದಲ್ಲಿ ಪಡಿತರ ಪಡೆಯುವ ಬಗ್ಗೆ ನೊಂದಾಯಿಸಿಕೊಳ್ಳಬಹುದು.

4. “ಮೇರಾ ರೇಷನ್” ಆಪ್:
ಒಂದು ರಾಷ್ಟ್ರ ಒಂದು ಪಡಿತರ ಯೋಜನೆಯಡಿ ಪಡಿತರ ಪಡೆಯಲು ನೆರವಾಗಲು ಕೇಂದ್ರ ಸರ್ಕಾರವು ಮೇರಾ ರೇಷನ್ ಆಪ್ ಅಭಿವೃದ್ಧಿ ಪಡಿಸಿದೆ. ಈ ಆಪ್ ಗೂಗಲ್ ಪೇ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಆಪ್‌ನ್ನು
ಸಾರ್ವಜನಿಕರು ತಮ್ಮ ಮೊಬೈಲ್‌ಗೆ ಡೌನ್‌ಲೋಡ್ ಮಾಡಿ ಬಳಸಬಹುದು.

5. ಹೊರ ರಾಜ್ಯದ ಪಡಿತರ ಚೀಟಿದಾರರಿಗೆ ಪಡಿತರ ಪ್ರಮಾಣ:
ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ಪಡಿತರ ಪಡೆಯಲು ಬಯಸುವ ಚೀಟಿದಾರರಿಗೆ ಕರ್ನಾಟಕದಲ್ಲಿ ಆಹಾರ ಭದ್ರತಾ ಕಾಯ್ದೆಯಂತೆ ಪ್ರತಿ ಅಂತ್ಯೋದಯ ಅನ್ನ ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿ, ಆದ್ಯತಾ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ತಲಾ 5 ಕೆ.ಜಿ ಅಕ್ಕಿಯನ್ನು ಪ್ರತಿ ಕೆ.ಜಿ ಗೆ ರೂ.3.00 ದರದಲ್ಲಿ ವಿತರಿಸಲಾಗುವುದು.

6. ನ್ಯಾಯಬೆಲೆ ಅಂಗಡಿಗಳು ಪಡಿತರ ನಿರಾಕರಿಸುವಂತಿಲ್ಲ:
ರಾಷ್ಟ್ರದ ಅಥವಾ ರಾಜ್ಯದ ಯಾವುದೇ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಹೋದಾಗ ಮಾಲೀಕರು ಪಡಿತರ ನೀಡಲು ತಿರಸ್ಕರಿಸುವಂತಿಲ್ಲ. ಯಾವುದೇ
ಮಾಲೀಕರು ತಿರಸ್ಕರಿಸಿದರೆ ಸಹಾಯವಾಣಿಗೆ ದೂರು ಸಲ್ಲಿಸಬಹುದು.

7. ಉಚಿತ ಸಹಾಯವಾಣಿಗಳು:
ಒಂದು ರಾಷ್ಟ್ರ ಒಂದು ಪಡಿತರ ಅಥವಾ ಪಡಿತರ
ಪೋರ್ಟಬಿಲಿಟಿ ಯೋಜನೆಯ ಮಾಹಿತಿಗಳಿಗಾಗಿ ಕೇಂದ್ರ ಸರ್ಕಾರದ ಸಹಾಯವಾಣಿ 14445 ಮತ್ತು ರಾಜ್ಯ ಸರ್ಕಾರದ ಉಚಿತ ಸಹಾಯವಾಣಿ 1967 ಉಪಯೋಗಿಸಬಹುದು.

8. ಮಾಹಿತಿ ಪೊರ್ಟಲ್‌ಗಳು:
ಒಂದು ರಾಷ್ಟ್ರ ಒಂದು ಪಡಿತರ ಮತ್ತು ರಾಷ್ಟ್ರೀಯ
ಪೋರ್ಟಬಿಲಿಟಿ ಯೋಜನೆ ಬಗ್ಗೆಪಡಿತರ ಚೀಟಿದಾರರು ಕೇಂದ್ರ ಮತ್ತು ರಾಜ್ಯಸರ್ಕಾರಗಳ ಕೆಳಕಂಡ ವೆಬ್ ಪೋರ್ಟಲ್‌ಗಳಿಂದ ಮಾಹಿತಿ ಪಡೆಯಬಹುದು.

• https://annavitran.nic.in
• https://impds.nic.in/portal
• https://nfsa.gov.in

ಪಡಿತರ ಚೀಟಿದಾರರು “ಒಂದು ರಾಷ್ಟ್ರ ಒಂದು ಪಡಿತರ” ಯೋಜನೆಯ ಲಾಭ ಪಡೆಯಲು ಇಲಾಖೆಯಿಂದ ಕೋರಿದೆ

Leave a Reply

Your email address will not be published. Required fields are marked *

error: Content is protected !!