ಗ್ರಾಮ ಪಂಚಾಯ್ತಿ ನೌಕರರು ಮೃತರಾದರೆ ಶವ ಸಂಸ್ಕಾರಕ್ಕೆ ರೂ.10 ಸಾವಿರ

ದಾವಣಗೆರೆ: ಗ್ರಾಮ ಪಂಚಾಯ್ತಿ ನೌಕರರು ಸೇವೆಯಲ್ಲಿರುವಾಗಲೇ ಮೃತರಾದರೆ ಅವರ ಶವ ಸಂಸ್ಕಾರಕ್ಕೆ ರೂ.10 ಸಾವಿರಗಳನ್ನು ಮಂಜೂರು ಮಾಡುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಎಂ. ರಾಜು ಮೇ. 6ರ 2022ರಂದು ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದ ಗ್ರಾಮ ಪಂಚಾಯ್ತಿಗಳಲ್ಲಿ ಬಿಲ್ಕಲೆಕ್ಟರ್, ಕ್ಲರ್ಕ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ವಾಟರ್ ಆಪರೇಟರ್, ಅಟೆಂಡೆ0ಟ್ ಮತ್ತು ಕ್ಲೀನರ್ ಅವರು ಕಾರ್ಯನಿರ್ವಹಿಸುತ್ತಿರುತ್ತಾರೆ.
ಏಪ್ರಿಲ್ 5, 2022ರಂದು ಗ್ರಾಮ ಪಂಚಾಯ್ತಿ ನೌಕರರ ಬೇಡಿಕೆಗಳ ಬಗ್ಗೆ ನಡೆದ ಸಭೆಯಲ್ಲಿ ಗ್ರಾಮ ಪಂಚಾಯ್ತಿ ನೌಕರರು ಸೇವೆಯಲ್ಲಿರುವಾಗಲೇ ಮೃತರಾದರೆ ಅವರ ಶವಸಂಸ್ಕಾರಕ್ಕೆ ರೂ. 10 ಸಾವಿರಗಳನ್ನು ಗ್ರಾಮ ಪಂಚಾಯ್ತಿ ಸಂಪನ್ಮೂಲದಿ0ದ ಭರಿಸಲು ಆದೇಶ ಹೊರಡಿಸುವಂತೆ ತೀರ್ಮಾನಿಸಲಾಗಿದೆ. ಅದರಂತೆ ಗ್ರಾಮ ಪಂಚಾಯ್ತಿ ನೌಕರರು ಸೇವೆಯಲ್ಲಿರುವಾಗಲೇ ಮೃತರಾದರೆ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಶವಸಂಸ್ಕಾರಕ್ಕೆ ರೂ. 10 ಸಾವಿರಗಳನ್ನು ಗ್ರಾಮ ಪಂಚಾಯ್ತಿ ಸಂಪನ್ಮೂಲದಿ0ದ ಭರಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.