ಚನ್ನಗಿರಿಯ ನಲ್ಲೂರ್ ನಲ್ಲಿ ಅಕ್ರಮ ಮರಳು ಸಾಗಣಿಕೆ.! ಮೂರು ಲಾರಿಗಳ ವಶ

ದಾವಣಗೆರೆ : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮೂರು ಲಾರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ದಿನಾಂಕ 12-04-2012 ರಂದು ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ರಾತ್ರಿ ಸಾಸ್ಟೆಹಳ್ಳಿ ಕಡೆಯಿಂದ ಮೂರು ಲಾರಿಗಳಲ್ಲಿ ಆಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರುತ್ತಿದ್ದಾರೆ ಎಂದು ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತವಾಗಿದ್ದು, ಲಿಂಗದಹಳ್ಳಿ ಕಡೆಯಿಂದ ೨ ಲಾರಿಗಳಲ್ಲಿ ಮರಳನ್ನು ತುಂಬಿಕೊಂಡು ಬಂದಿದ್ದು, ಆ ಲಾರಿಗಳನ್ನು ತಡೆದು ನಿಲ್ಲಿಸಿ ಅವುಗಳ ಲಾರಿ ಚಾಲಕರುಗಳಲ್ಲಿ ಮರಳು ಸಾಗಾಟದ ಪರವಾನಗಿಯ ಬಗ್ಗೆ ಪರಿಶೀಲಿಸಿದಾಗ ಅವರ ಬಳಿ ಯಾವುದೇ ಪರವಾನಗಿಗಳು ಇರುವುದಿಲ್ಲ ಹಾಗೂ ಪರವಾನಗಿ ನಿಯಮಿತ ವೇಳೆಯೊಳಗೆ ಬರದೇ ಇದ್ದುದರಿಂದ ವಿಚಾರ ಮಾಡಿದಾಗ ಅವರುಗಳು ಅಕ್ರಮವಾಗಿ ಮರಳನ್ನು ಕಳ್ಳತನದಿಂದ ಲೋಡ್ ಮಾಡಿಕೊಂಡು ಬಂದ ಮಾಹಿತಿ ಲಭ್ಯವಾಗಿದೆ.
3 ಜನ ಆರೋಪಿತ ಚಾಲಕರುಗಳನ್ನು ವಶಕ್ಕೆ ಪಡೆದು, ಮರಳು ತುಂಬಿದ 03 ಬಾರಿಗಳನ್ನು ಜಪ್ತು ಪಡಿಸಿಕೊಂಡಿದ್ದು, 3 ಲಾರಿಗಳ ಒಟ್ಟು ಬೆಲೆ: 30 ಲಕ್ಷ ರೂಪಾಯಿಗಳು ಮತ್ತು ಮರಳಿನ ಬೆಲೆ 75,000/-ರೂಗಳಾಗಿದ್ದು ಒಟ್ಟು 10,75,000/- ರೂಗಳಾಗಿರುತ್ತದೆ. ಸದರಿ ಕೃತ್ಯದಲ್ಲಿ ಭಾಗಿಯಾದ, ಆರೋಪಿತರ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 149/2012 ಕಲಂ 379 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.