Part 1: ಅಕ್ರಮ ಚಟುವಟಿಕೆಗಳಿಗೆ ಕಾವಲುಗಾರರೇ..! ಕಾವಲುಗಾರರು..! ಮೌನ ಮುರಿಯುತ್ತಾರಾ ಖಡಕ್ ಎಸ್ ಪಿ ರಿಷ್ಯಂತ್..?!!
February 15, 2022
ಸಕ್ರಮದ ಹೆಸರಲ್ಲಿ ಅಕ್ರಮ ಮರಳು ದಂಧೆ ನಡೆಸುವ ಮಧ್ಯವರ್ತಿಗಳು, ಗುತ್ತಿಗೆದಾರರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ, ಮರಳು ಟಾಸ್ಕ್ ಫೊರ್ಸ್ Sand Task Force ಕಮಿಟಿಯಲ್ಲಿರುವ ಇಲಾಖೆಗಳಿಗೆ ಪ್ರಸಾದ ನೀಡಿ ಸರ್ಕಾರದ ನಿಯಮಾವಳಿಗಳನ್ನು Government Guidelines ಗಾಳಿಗೆ ತೂರಿ ಅಕ್ರಮ ಮರಳು ಮಾಫಿಯಾ ಕೋಟಿಗಟ್ಟಲೆ ಸರ್ಕಾರಕ್ಕೆ ಸೇರಬೇಕಾದ ರಾಜಧನವನ್ನು ಸ್ವಾಹ ಮಾಡುತ್ತಿದ್ದಾರೆ.
ದಿನಾಂಕ 27-01-2022, 29-01-2022, 03-02-2022, 05-02-2022 ಹಾಗೂ 14-02-2022, ರಂದು ಒಟ್ಟು 5 ದಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿರುವ ಮರಳು ಬ್ಲಾಕ್ ನಿಂದ ತುಂಗಭದ್ರ ನದಿ ಪಾತ್ರದಲ್ಲಿ ಗುತ್ತಿಗೆ ಪಡೆದ ಎಸ್ ಆರ್ ರಾಜು ಎಂಬುವವರಿಂದ MDP (ಮಿನಿರಲ್ ಡಿಸ್ಪ್ಯಾಚ್ ಪರ್ಮಿಟ್) ನೀಡಿ ಮರಳು ಸಾಗಾಣಿಕೆ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ Mines & Geology ಅಧಿಕಾರಿಗಳು ಅನುಮತಿ ನೀಡಿರುತ್ತಾರೆ. ಆದರೆ ಗುತ್ತಿಗೆದಾರರು ಸರ್ಕಾರದ ಆದೇಶದಂತೆ 10 ಚಕ್ರದ ವಾಹನಕ್ಕೆ 14 ಮೆಟ್ರಿಕ್ ಟನ್ ಮರುಳು ಇರುವ ಪರ್ಮಿಟ್ ನೀಡಿ, 30 ಟನ್ ಮರಳನ್ನ ತುಂಬಿದ್ರೆ. ಇನ್ನೂ 6 ಚಕ್ರದ ವಾಹನಗಳಿಗೆ 10 ಟನ್ ಮರಳಿನ ಪರ್ಮೀಟ್ ನೀಡಿ 15-16 ಮೆಟ್ರಿಕ್ ಟನ್ ಮರಳನ್ನ ತುಂಬಿದ್ದಾರೆ. ಅಂದರೆ ಒಟ್ಟು ಅಂದಾಜು ಒಂದು ವಾಹನದಿಂದ 20 ಮೆ,ಟನ್ ಮರಳಿನ ರಾಜಧನವನ್ನ ಸರ್ಕಾರದ ಬೊಕ್ಕಸಕ್ಕೆ ನೀಡದೆ ತಮ್ಮ ಜೇಬಿಗಿಳಿಸುತ್ತಿದ್ದಾರೆ. ಒಂದು ದಿನಕ್ಕೆ ಸರಾಸರಿ ಇದೇ ರೀತಿಯಾಗಿ ಪಾಸ್ ವಿತರಿಸಿದ ದಿನದಂದು ಒಂದು ಪಾಸ್ ಪಡೆದು ಅದೇ ಪಾಸಿನಲ್ಲಿ ದಾವಣಗೆರೆ ನಗರಕ್ಕೆ ಅಂದಾಜು 25 – 30 ಲಾರಿಗಳು 3 ರಿಂದ 5 ಟ್ರಿಪ್ ನಗರಕ್ಕೆ ಬಂದು ಹೋಗುತ್ತಿವೆ. ಒಟ್ಟಾರೆ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಮರಳಿನ ಹಣ ದುರುಳರ ಪಾಲಾಗುತ್ತಿದೆ. ಇನ್ನು ಇದರ ಲೆಕ್ಕವನ್ನ ಸರಿಯಾದ ರೀತಿಯಲ್ಲಿ ತಾಳೆಹಾಕಿದ್ರೆ ದೇವರು ಕೂಡ ಶಾಕ್ ಆಗೋದು ಗ್ಯಾರಂಟಿ.
ಸಿಎಂ ಬಸವರಾಜ್ ಬೊಮ್ಮಾಯಿ CM Basavaraj Bommai ಸಾಹೇಬರೇ ತಮ್ಮ ಸ್ವಕ್ಷೇತ್ರದಲ್ಲಿ ಈ ಮಟ್ಟದಲ್ಲಿ ಅಕ್ರಮ ಮರಳು ಮಾಫಿಯಾ ನಡೆಯುತ್ತಿದ್ದು ಸರ್ಕಾರಕ್ಕೆ ಬರಬೇಕಾದ ರಾಜಧನ ಕಳ್ಳರ ಬೊಕ್ಕಸ ಸೇರುತ್ತಿದ್ದರು ತಮ್ಮ ಹಾವೇರಿ ಜಿಲ್ಲೆಯ ಡಿಸಿ, ಎಸ್ ಪಿ, ಕಂದಾಯ ಇಲಾಖೆ ಅಧಿಕಾರಿಗಳು, ಮರಳು ಟಾಸ್ಕ್ ಫೋರ್ಸ್ ರವರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕಂದಾಯ ಅಧಿಕಾರಿಗಳು ಜಿಲ್ಲಾಧಿಕಾರಿಗಳು ತುಟಿಕ್ ಪಿಟಿಕ್ ಎನ್ನದೆ ಮೌನವಹಿಸಿರುವುದು ನೋಡಿದರೆ ಈ ಅಕ್ರಮದಲ್ಲಿ ಪಾಲಿರುವುದು ಸ್ಪಷ್ಟವಾಗಿ ತಿಳಿಯುತ್ತೆ ಅಂತಾರೆ ಸಾರ್ವಜನಿಕರು.
ಏನೋ ಬಿಡಿ ತಿಳಿದಿದ್ದರು ತಾವು ಕ್ರಮಕೈಗೊಳ್ಳ ದಿಕ್ಕೆ ಆಗುವುದಿಲ್ಲ ತಮ್ಮಿಂದ, ತಾವು ಮುಖ್ಯಮಂತ್ರಿ ನೆಪಮಾತ್ರಕ್ಕೆ ಅನ್ನೋ ಸತ್ಯ ಇಡೀ ರಾಜ್ಯಕ್ಕೆ ಗೊತ್ತಿದೆ.
ಸರ್ಕಾರಿ ಅಧಿಕಾರಿಗಳು ಚಾಪೆ ಕೆಳಗೆ ನುಸುಳಿದರೆ ಅಕ್ರಮ ಮರಳು ಮಾಫಿಯಾದವರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ, ಹಾವೇರಿ ಜಿಲ್ಲೆಯ ಮುದೇನೂರು ಗ್ರಾಮದ ಮರುಳು ಪಾಯಿಂಟ್ ನಿಂದ ಹರಿಹರ, ದಾವಣಗೆರೆ ಮಾರ್ಗವಾಗಿ ತುಮಕೂರಿಗೆ ರೂಟ್ ಪರ್ಮಿಟ್ ಪಡೆದು ದಾವಣಗೆರೆಯಲ್ಲಿ ಮರಳನ್ನು ಮಾರಾಟ ಮಾಡುತ್ತಿದ್ದಾರೆ. ಕೆಲವರು ತಮ್ಮ ಖಾಲಿ ನಿವೇಶನಗಳಲ್ಲಿ ಮರಳನ್ನು ಸ್ಟಾಕ್ ಮಾಡಿಕೊಳ್ಳುತ್ತಿದ್ದಾರೆ. 10 ಚಕ್ರದ ವಾಹನ ದಲ್ಲಿ ಬರುವ 26 ಮೆಟ್ರಿಕ್ ಟನ್ ಓವರ್ ಲೋಡ್ ( ಫುಲ್ ಲೋಡ್ ) ಮರಳಿನ ಬೆಲೆ 31,000 ರೂಪಾಯಿ ಕೊಟ್ಟು ತಂದು ಈ ಖದೀಮರು ಕಟ್ಟಡ ಗಳಿಗೆ 52,000 ರೂಪಾಯಿಗಳಿಗೆ ಮಾರಿಕೊಳ್ಳುತ್ತಿದ್ದಾರೆ. 52000 ರೂಪಾಯಿಗಳಲ್ಲಿ 31000 ರೂಪಾಯಿ ಕಳೆದರೆ ಬರೋಬ್ಬರಿ 21000 ಸಾವಿರ ರೂಪಾಯಿ ಉಳಿಯುತ್ತದೆ. ಒಂದು ದಿನಕ್ಕೆ 4-5 ಟ್ರಿಪ್ ಮಾಡಿದರೆ 1,24,000 ಸಾವಿರ ರೂಪಾಯಿಗಳು ಒಂದು ದಿನದ ಕಮಾಯಿ ಆಗುತ್ತದೆ ನೋಡಿ. ಇನ್ನು 6 ಚಕ್ರದ ವಾಹನದಲ್ಲಿ ಬರುವ ಮರಳಿನ ಬೆಲೆ 31 ಸಾವಿರ ರೂಪಾಯಿ ಗಳಂತೆ ಕಾಮಗಾರಿ ನಡೆಯುತ್ತಿರುವ ಕಟ್ಟಡಗಳಿಗೆ ಮಾರಾಟ ಮಾಡುತ್ತಿದ್ದಾರೆ. ಅಂದರೆ ತಾವೇ ಸ್ವತಃ ಅಂದಾಜು ಲೆಕ್ಕ ಮಾಡಿ ಗೊತ್ತಾಗುತ್ತದೆ ಒಂದು ದಿನಕ್ಕೆ ಎಷ್ಟು ಹಣ ಲಪಟಾಯಿಸಿದ್ದಾರೆ ಅಂತಾ ತಿಳಿಯುತ್ತದೆ.
ಈ ಹಿಂದೆ ಡಿಸೆಂಬರ್ ನಲ್ಲಿ ವಿದ್ಯಾನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ವೀಲ್ ವಾಹನದಲ್ಲಿ ಪಾಸಿಂಗ್ ಟನ್ ಗಿಂತ ಹೆಚ್ಚಾಗಿ ಓವರ್ಲೋಡ್ ಮರುಳು ಬರುತ್ತಿದೆ ಎಂದು ಖಚಿತ ಮಾಹಿತಿ ಪಡೆದು ದಾವಣಗೆರೆ ನಗರ ಡಿವೈಎಸ್ಪಿ ನರಸಿಂಹ ವಿ ತಾಮ್ರಧ್ವಜ ಅವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸರು KA06AA4174 ವಾಹನವನ್ನು ಜಪ್ತಿ ಮಾಡಿ ಓವರ್ಲೋಡ್ ಇದೆಯೆಂದು ವಾಹನವನ್ನು ಜಪ್ತಿ ಮಾಡಿ ಮೇಲ್ಕಂಡ ಸಂಖ್ಯೆಯ ವಾಹನವನ್ನು ಅಕ್ರಮ ಮರಳು ದಂಧೆ ನಡೆಸುವ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸದೆ ಬಡಪಾಯಿ ದುಡಿಯಲು ಬಂದ ವಾಹನ ಚಾಲಕನ ಮೇಲೆ ಪ್ರಕರಣವನ್ನು ದಾಖಲಿಸುತ್ತಾರೆ. ನಂತರ ಕಾನೂನಿನ ಪ್ರಕಾರ ಮರಳನ್ನು ವಶಕ್ಕೆ ಪಡೆದು ವಾಹನ ಬಿಡುಗಡೆ ಮಾಡಿರುತ್ತಾರೆ. ಅಲ್ಲಿಂದ ಮತ್ತೆ ಜನವರಿ, ಫೆಬ್ರವರಿ ತಿಂಗಳ ಕೆಲ ದಿನಾಂಕಗಳಲ್ಲಿ ಮತ್ತೆ ಯಥಾವತ್ತಾಗಿ ಓವರ್ ಲೋಡ್ ಮರಳು ನಗರದ ತುಂಬಾ ವಾಹನಗಳು ಮರುಳನ್ನು ಸಾಗಾಣೆ ಮಾಡುತ್ತಿದ್ದಾರೆ. ಇದೆಲ್ಲಾ ಗಮನದಲ್ಲಿದ್ದರೂ ಸಹ ಯಾವುದೇ ವಾಹನಗಳನ್ನು ದಿನಾಂಕ 13 12 2021 ರಂದು ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ಮರಳನ್ನು ವಶಕ್ಕೆ ಪಡೆದಂತೆ, ಮತ್ತೆ ಯಾಕೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಓವರ್ಲೋಡ್ ಆಗಲಿ ಅಥವಾ ಪಾಸ್ ಪರಿಶೀಲಿಸುವ ಗೋಜಿಗೆ ಯಾರೂ ಹೋಗುವುದಿಲ್ಲ ನೋಡಿ, ಇದನ್ನೆಲ್ಲ ಗಮನಿಸಿದ ಪತ್ರಕರ್ತರು ಡಿವೈಎಸ್ಪಿ ನರಸಿಂಹ ವಿ ತಾಮ್ರಧ್ವಜ ಹಾಗೂ ಡಿ ಸಿ ಆರ್ ಬಿ ಡಿವೈಎಸ್ಪಿ ಬಸವರಾಜ್ ಅವರಿಗೆ ದೂರವಾಣಿ ಕರೆ ಮಾಡಿ ಮತ್ತೆ ಓವರ್ಲೋಡ್ ಮರಳು ನಗರ ಪ್ರವೇಶಿಸುತ್ತಿದೆ, ಎಂದು ಮಾಹಿತಿ ನೀಡಿದರೆ ನಾವು ಮೀಟಿಂಗ್ ನಲ್ಲಿ ಇದ್ದೇವೆ ಸಿಬ್ಬಂದಿಗಳನ್ನು ಕಳುಹಿಸಿ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ ಎಂದಿದ್ದರು, ಆದರೂ ಅದ್ಯಾಕೋ ಗೊತ್ತಿಲ್ಲ ಯಾವೊಬ್ಬ ಅಧಿಕಾರಿಗಳಾಗಲಿ ಸಿಬ್ಬಂದಿಗಳಾಗಲಿ ಇತ್ತ ಕಡೆ ತಲೆ ಕೂಡ ಹಾಕುವುದಿಲ್ಲ ಬಿಡಿ, ಶಾಮನೂರು ಸೇತುವೆಯ ಕೂಗಳತೆ ಅಂತರದಲ್ಲೆ ಪೋಲಿಸ್ ಚೆಕ್ ಪೋಸ್ಟ್ ಇದ್ದರೂ ಸಹ ಪೊಲೀಸರು ವಾಹನ ತಡೆದು ಪರಿಶೀಲನೆ ಮಾಡುವುದಿಲ್ಲ, ಕೇವಲ ದ್ವಿಚಕ್ರ ವಾಹನದವರ ದಾಖಲೆಗಳನ್ನ ಮಾತ್ರ ಚೆಕ್ ಮಾಡಲು ಸೀಮಿತವಾಗಿದೆ ಎಂಬಂತೆ ವರ್ತನೆ ಎಷ್ಟರ ಮಟ್ಟಿಗೆ ಸರಿ ಎಂಬಂತಾಗಿದೆ.
ಆದರೆ ನೀವೇ ಊಹಿಸಿಕೊಳ್ಳಿ ಪ್ರಸಾದ ಸರಿಯಾದ ಸಮಯಕ್ಕೆ ಅಧಿಕಾರಿಗಳಿಗೆ ತಲುಪುತ್ತಿದೆ ಎಂದು ಪ್ರಸಾದ ಸ್ವೀಕರಿಸುವುದರಿಂದಲೇ ಪಾಪ ಅಧಿಕಾರಿಗಳು ಬಂದು ಓವರ್ಲೋಡ್ ಲಾರಿಗಳನ್ನು ಮುಟ್ಟುವ ಸಾಹಸಕ್ಕೆ ಕೈ ಹಾಕುವುದಿಲ್ಲವೇನೋ..! ನಮ್ಮ ಪತ್ರಿಕೆಗೆ ಬಂದ ಮಾಹಿತಿ ಪ್ರಕಾರ ಮರುಳು ಪಾಸ್ ವಿತರಿಸಿದ ದಿನ ಅಕ್ರಮವಾಗಿ ಓವರ್ಲೋಡ್ ಮರುಳನ್ನು ತರಲು ಒಂದು ವಾಹನಕ್ಕೆ ಒಂದು ದಿನಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹದಿನೈದು ಸಾವಿರ ರೂಪಾಯಿಗಳಂತೆ ಪ್ರಸಾದ ಫಿಕ್ಸ್ ಆಗಿದೆಯಂತೆ, ಎಷ್ಟು ಲಾರಿಗಳು ಸಕ್ರಮದ ಜೊತೆ ಅಕ್ರಮ ನಡೆಸುತ್ತಿವೆ, ಒಟ್ಟು ಎಷ್ಟು ಪ್ರಸಾದ ದಕ್ಷಿಣೆ ಬರುತ್ತಿದೆ ಎಂದು ನೀವೇ ಊಹಿಸಿಕೊಳ್ಳಿ.
ಪತ್ರಿಕೆ ಹಾಗೂ ವರದಿಗಾರರು ಪ್ರಕಟಿಸಬಹುದೇ ಹೊರತು ಕಾನೂನು ಕ್ರಮ ಕೈಗೊಳ್ಳಲು ಆಗುತ್ತದೆಯೇ ಕಾನೂನು ಕ್ರಮ ಕೈಗೊಳ್ಳಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆಯ ಅಧಿಕಾರಿಗಳು ತಹಸಿಲ್ದಾರ್ ಪೊಲೀಸರು ಜಿಲ್ಲಾಧಿಕಾರಿಗಳು ಪೊಲೀಸ್ ವರಿಷ್ಠಾಧಿಕಾರಿಗಳು ಜಲ ಸಂಪನ್ಮೂಲ ಅಧಿಕಾರಿಗಳು ಲೋಕೋಪಯೋಗಿ ಇಲಾಖೆ ಜಿಲ್ಲಾ ಪಂಚಾಯಿತಿ ಸಿಇಒ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ 11 ಅಧಿಕಾರಿಗಳ ತಂಡ ಅಕ್ರಮ ಮರಳು ಮಾಫಿಯಾ ನಿಯಂತ್ರಿಸಬಹುದು ಆದರೆ ನಿಯಂತ್ರಿಸಬೇಕಾದ ಅಧಿಕಾರಿಗಳೇ ಈ ಕ್ರಿಮಿಗಳ ನಿಯಂತ್ರಣದಲ್ಲಿರಬೇಕಾದರೆ ನಾವು ನೀವು ಏನು ಮಾಡುವುದಕ್ಕೆ ಆಗುತ್ತದೆ,
ಮಾನ್ಯ ಎಸ್ಪಿ ರಿಷ್ಯಂತ್ sp Ryshyanth ಸಾಹೇಬರೇ ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರು ಸಾಕ್ಷಿ ಸಮೇತ ವರದಿ ಯಾಗುತ್ತಿದ್ದರೂ ಸಹ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ, ಮಾನ್ಯ ಎಸ್ ಪಿ ಸಾಹೇಬ್ರೆ ನಿಮ್ಮ ಇಲಾಖೆಯ ಕೆಲ ಪೇದೆಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಇದರ ಬಗ್ಗೆ ಸಂಪೂರ್ಣ ವಿವರವಿದೆ, ಸ್ಯಾಂಪಲ್ ಆಗಿ ಕೇವಲ ನಮ್ಮ ವರದಿಯಲ್ಲಿ ಪ್ರಕಟಗೊಂಡಿರುವ ಇತ್ತೀಚಿನ ದಿನಾಂಕಗಳ ಸಿಸಿಟಿವಿ ದೃಷ್ಯಾವಳಿಗಳನ್ನ ಗಮನಿಸಿ ಸಾಕು ನಿಮಗೆ ಸಾಕ್ಷಿ ಸಮೇತ ನಿಮ್ಮವರ ಕಳ್ಳಾಟ ಗೊತ್ತಾಗುತ್ತೆ. ತಾವು ಅಧಿಕಾರ ವಹಿಸಿಕೊಂಡ ಕೆಲತಿಂಗಳು ಅಕ್ರಮ ದಂಧೆಕೋರರು ಬಾಲ ಮುದುರಿಕೊಂಡು ಬೋನಿನೊಳಗೆ ನುಸುಳಿದ್ದರು ಆದರೆ ಈಗ ಬೋನಿನಿಂದ ಹೊರಬಂದು ರಾಜಾರೋಷವಾಗಿ ಅಕ್ರಮ ಚಟುವಟಿಕೆಗಳನ್ನ ಯಾರ ಭಯವಿಲ್ಲದೆ ನಡೆಸುತ್ತಿದ್ದಾರೆ ತಮಗೇನಾದರೂ ರಾಜಕೀಯ ನಾಯಕರು ಈ ಅಕ್ರಮವನ್ನು ಕಂಡರೂ ಕಾಣದಂತೆ ಇರುವಂತೆ ಮಂತ್ರಿಗಳ ಪ್ರಭಾವ ಬೀರಿದ್ದಾರಾ..! ತಿಳಿಯುತ್ತಿಲ್ಲ, ಸಾರ್ವಜನಿಕ ವಲಯದಲ್ಲಿ ತಮ್ಮ ಬಗ್ಗೆ ಅಪಾರ ಗೌರವವಿದೆ ತಮ್ಮ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಇದೆ ಈ ಎಲ್ಲಾ ಪ್ರಶ್ನೆಗಳಿಗೆ ತಾವೇ ಉತ್ತರಿಸಬೇಕು, ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರೆ ಪ್ರಯೋಜನವೇನು ಕೊಳ್ಳೆ ಹೊಡೆಯುವುದಕ್ಕಿಂತ ಮುಂಚೆ ತಾವು ಕೋಟೆಬಾಗಿಲು ಹಾಕಬೇಕಿದೆ.