ಇಮ್ರಾನ್ ಸಿದ್ದೀಕಿಯ 2 ಎಫ್ ಐ ಆರ್ ರದ್ದು.! ದೂರು ಸಲ್ಲಿಸಲು ವಿಳಂಬ ಅನುಮಾನಕ್ಕೆ ಆಸ್ಪದ – ಹೈಕೋರ್ಟ್

ಬೆಂಗಳೂರು: ಮರಳು ವ್ಯಾಪಾರಸ್ಥರಿಂದ ಸುಲಿಗೆ ಆರೋಪಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸಲು ವಿಳಂಬ ಮಾಡಿರುವುದು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಮೈಸೂರು ಮೂಲದ ಇಮ್ರಾನ್ ಸಿದ್ದೀಕಿ ವಿರುದ್ಧ ದಾಖಲಿಸಿದ್ದ 2 ಎಫ್ಐಆರ್ ರದ್ದುಪಡಿಸಿದೆ.
ತಮ್ಮ ವಿರುದ್ಧ ದಾಖಲಿಸಿರುವ 2 ಎಫ್ಐಆರ್ ಗಳನ್ನು ರದ್ದುಪಡಿಸುವಂತೆ ಕೋರಿ ಇಮ್ರಾನ್ ಸಿದ್ದೀಕಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಎರಡೂ ದೂರುಗಳನ್ನು ರದ್ದುಪಡಿಸಿ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ 1.
ದಾವಣಗೆರೆ ನಗರದ ಮರಳು ವ್ಯಾಪಾರಿ ಮುಬಾರಕ್ ಎಂಬುವವರು ನೀಡಿದ ದೂರಿನಡಿ ಮೈಸೂರು ಮೂಲದ ವ್ಯಕ್ತಿ ಹಾಗೂ ಚಿತ್ರದುರ್ಗ ಮೂಲದ ಓರ್ವ ವ್ಯಕ್ತಿಯನ್ನು Davanagere SP CB Ryshyanth ದಾವಣಗೆರೆ ಎಸ್ ಪಿ ರಿಷ್ಯಂತ್ ನೇತೃತ್ವದ ಡಿ ಸಿ ಆರ್ ಬಿ ತಂಡ DCRB TEAM ಬಂಧಿಸಿ 75 ಲಕ್ಷ 70 ಸಾವಿರ ಹಣವನ್ನು ವಶಪಡಿಸಿಕೊಂಡಿತ್ತು.
ಮುಬಾರಕ್ ಎಂಬುವವರು ನೀಡಿದ ಪ್ರಕಾರ ಕಾನೂನು ಬದ್ಧವಾಗಿ ಪರ್ಮಿಟ್ ಪಡೆದು ಮರಳು ವ್ಯಾಪಾರವನ್ನು ಮಾಡುತ್ತಿದ್ದು, ನನಗೆ ನೀನು ಅಕ್ರಮವಾಗಿ ಮರಳು ದಂಧೆಯನ್ನು Illigal sand mining ಮಾಡುತ್ತಿದ್ದೀಯಾ ನಮಗೆ ನೀನು ಪ್ರತಿ ತಿಂಗಳು 4 ಲಕ್ಷ ಹಣವನ್ನು ನೀಡು ಇಲ್ಲವಾದಲ್ಲಿ ನೀನು ಮರಳು ದಂಧೆಯನ್ನು ಹೇಗೆ ಮಾಡುತ್ತೀಯಾ ಎಂದು ಬೆದರಿಕೆ ಹಾಕಿ ಹಣ ಮಸೂಲಿ ಮಾಡಿಕೊಂಡಿರುತ್ತಾರೆ ಅಂತಾ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಠಾಣಾ ಗುನ್ನೆ ನಂಬರ್ 143/22 ಕಲಂ 420, 384, 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆಯನ್ನ ಕೈಗೊಳ್ಳಲಾಗಿತ್ತು.
ಸದರಿ ಪ್ರಕರಣದ ಆರೋಪಿತರನ್ನು ಪತ್ತೆ ಮಾಡಲು ಮಾನ್ಯ ಪೊಲೀಸ್ ಅಧೀಕ್ಷಕರವರು ದಾವಣಗೆರೆ ಜಿಲ್ಲೆ ರವರು ಶ್ರೀ ರು. ಎಸ್. ಬಸವರಾಜ್, ಪೊಲೀಸ್ ಉಪಾಧೀಕ್ಷಕರು ಡಿಸಿಆರ್ಬಿ ಘಟಕ, ಶ್ರೀ ಮಿಥುನ್, ಹೆಚ್.ಎನ್, ಐಪಿಎಸ್ (ಪ್ರೊಬೆಷನರಿ) ಶ್ರೀ ಲಿಂಗನಗೌಡ ನೆಗಳೂರು ಪಿ.ಐ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿದ್ದು, ಸದರಿ ತಂಡವು ಮೇಲ್ಕಂಡ ಪ್ರಕರಣದಲ್ಲಿ ಆರೋಪಿತರಾದ Imran Siddiqee ಮೈಸೂರು ಮೂಲದ ‘ಇಮ್ರಾನ್ ಸಿದ್ದೀಕಿ’ ಅವರಿಂದ 75 ಲಕ್ಷ ನಗದು ಹಣ 02 ಮೊಬೈಲ್, ಹಾಗೂ Ashok Jymmy ಚಿತ್ರದುರ್ಗ Chitradurga ಮೂಲದ ‘ಆಶೋಕ ಅಲಿಯಾಸ್ ಜಿಮ್ಮಿ’ ಇವರಿಂದ 70 ಸಾವಿರ ನಗದು ಹಣ ಸೇರಿ ಇಬ್ಬರು ಆರೋಪಿತರನ್ನು ಬಂಧಿಸಿ ಜೈಲಿಗೆ ಕಳಿಸಿತ್ತು.
ಆರೋಪಿತರು ಮರಳು ದಂಧೆ ಮಾಡುವವರ ಬಳಿ ಸಂಗ್ರಹಿಸಿದ್ದ ಒಟ್ಟು 75,70,000/- (ಎಪ್ಪತ್ತೈದು ಲಕ್ಷದ ಎಪ್ಪತ್ತು ಸಾವಿರ) ನಗದು ಹಣ, 02 ಮೊಬೈಲ್ ಫೋನ್ಗಳನ್ನು ಅಮಾನತ್ತು ಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿರುತ್ತದೆ ಎಂದು ದಾವಣಗೆರೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಪ್ರಕರಣದ ಹಿನ್ನೆಲೆ 2.
ಜೀವ ಬೆದರಿಕೆ Life Threat ಹಾಕಿ ಮರಳು ಲೀಸ್ ಪಾಯಿಂಟ್ Sand Mining Lease Point ಮ್ಯಾನೆಜ್ಮೆಂಟ್ ನೋಡಿಕೊಳ್ಳುತ್ತಿದ್ದ ವ್ಯಕ್ತಿಯಿಂದ 8 Lakhs Amount 8 ಲಕ್ಷ ಹಣ ಪಡೆದು, ಇನ್ನೂ ಹಣ ನೀಡುವಂತೆ ಬೆದರಿಕೆ ಒಡ್ಡುತ್ತಿರುವ ಆರೋಪದಡಿ Imran Siddiqee ಇಮ್ರಾನ್ ಸಿದ್ದಿಕ್ ಮತ್ತು ಜೂಲ್ಫಿಕರ್ Julfikhar ಎಂಬುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ Harihara Rural Police Station FIR ಹರಿಹರದ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿತ್ತು.
ದಾವಣಗೆರೆ ನಿವಾಸಿ ಅಶೋಕ ಎಸ್ ಎಂಬುವವರು ಮರಳಿನ ಬ್ಯುಸಿನೆಸ್ ನಡೆಸಿಕೊಂಡು ಜೀವನ ಸಾಗಿಸುತ್ತಿರುತ್ತಾರೆ, ಇವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದ ಇಮಾಮ್ ಸಾಬ್ ಬಾಗಲಕೋಟೆ ಎಂಬುವವರಿಗೆ ಸೇರಿದ ಮರಳಿನಲ್ಲಿ ಲೀಜ್ ಪಾಯಿಂಟ್ ನಲ್ಲಿ ಮ್ಯಾನೇಜ್ ಮೆಂಟ್ ಕೆಲಸ ಮಾಡಿಕೊಂಡಿದ್ದರು.
13 ನೇ ಸೆಪ್ಟೆಂಬರ್ 2021 ರಂದು ಶಿವಮೊಗ್ಗ – ಹರಿಹರ ರಸ್ತೆಯ ಡಾಬಾ ಒಂದರಲ್ಲಿ ಊಟ ಮಾಡುತ್ತಿರುವಾಗ ಯಾರೋ ಒಬ್ಬ ವ್ಯಕ್ತಿ ಕಾರಿನಲ್ಲಿ ಬಂದು ನನ್ನನ್ನು ಕರೆದು ನಮ್ಮ ಬಾಸ್ ಕಾರಿನಲ್ಲಿದ್ದಾರೆ ಅವರ ಬಳಿ ಬಂದು ಮಾತನಾಡು ಅಂತಾ ಹೇಳ್ತಾರಂತೆ. ಆಗ ನಾನು ಅವನ ಬಳಿ ನನ್ನದೇನು ಮಾತು ಅಂತಾ ಹೇಳಿದ್ದಕ್ಕೆ ಜುಲ್ಫಿಕರ್ ಎಂಬ ವ್ಯಕ್ತಿ ಅವರು ಶಿವಮೊಗ್ಗ ಹಾಗೂ ಮೈಸೂರ್ ಡಾನ್ ಇಮ್ರಾನ್ ಸಿದ್ದೀಕಿ ಎಂದಾಗ ಹೆದರಿ ಅವರನ್ನ ಮಾತನಾಡಿಸಿದರಂತೆ, ಆಗ ಕಾರಿನಿಂದ ಕೆಳಗೆ ಇಳಿದು ಬಂದ ವ್ಯಕ್ತಿ, ನಾನು ಇಮ್ರಾನ್ ಸಿದ್ದೀಕ್, ನನಗೆ ಎಲ್ಲಾ ಅಧಿಕಾರಿಗಳು ಗೊತ್ತಿದ್ದಾರೆ, ನೀನು ನನ್ನ ಅನುಮತಿ ಇಲ್ಲದೇ ಮರಳಿನ ಲೀಜ್ ನಡೆಸುತ್ತಿರುವೆ ಎಂದು ಹೇಳಿ 10 ಲಕ್ಷ ಹಣವನ್ನು ನೀಡಿದರೆ ಮಾತ್ರ ನಾನು ನಿನಗೆ ಮರಳನ್ನು ಸಾಗಾಣಿಕೆ ಮಾಡಲು ಬಿಡುತ್ತೇನೆಂದು ಹೇಳಿ ಬೆದರಿಕೆ ಹಾಕಿದರಂತೆ. ಆಗ ಅವನಿಗೆ ಹೆದರಿಕೊಂಡು ಅಂದೇ 4 ಲಕ್ಷ ನೀಡಿರುತ್ತಾರಂತೆ. ಈ ರೀತಿ ಯಾಕೆ ನನ್ನ ಮೇಲೆ ದೌರ್ಜನ್ಯ ಮಾಡುತ್ತೀರಿ ಎಂದು ಕೇಳಿದ್ದಕ್ಕೆ ಇಮ್ರಾನ್ ಸಿದ್ದೀಕ್, ಅಶೋಕ್ ಅವರಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಾಡಿದರಂತೆ, ನನಗೆ ಗೊತ್ತಿಲ್ಲದೇ ಬುಸಿನೆಸ್ ಮಾಡಿದ್ರೆ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ, ನಮ್ಮ ಹುಡುಗರಿಗೆ ಹೇಳಿ ನಿನ್ನ ಕೈಕಾಲು ಮುರಿಸುತ್ತೇನೆಂದು ಧಮಿಕಿ ಹಾಕಿದ್ರಂತೆ.
ಒಂದು ತಿಂಗಳ ನಂತರ ಅಂದರೆ 14 ಅಕ್ಟೋಬರ್ 2021 ರಂದು ಶಿವಮೊಗ್ಗ – ಹರಿಹರ ರಸ್ತೆ,ಯಲ್ಲಿ ಜುಲ್ಫಿಕರ್ ಹಾಗೂ ಇಮ್ರಾನ್ ಸಿದ್ಧಿಕ್ ಅಶೋಕ್ ಅವರ ಕಾರಿಗೆ ಅಡ್ಡ ಬಂದು ಉಳಿದ 06 ಲಕ್ಷ ಹಣವೆಲ್ಲಿ ಅಂತಾ ಕೇಳ್ತಾರೆ. ಆಗ ಅವರಿಗೆ ಹೆದರಿ ಅಶೋಕ್ ಅವರ ಕಾರನ್ನು ಅಲ್ಲಿಯೇ ಬಿಟ್ಟು ಬೇರೆ ವಾಹನದಲ್ಲಿ, ಹೋಗಿ 04 ಲಕ್ಷ ಹಣವನ್ನು ಹೊಂದಿಸಿಕೊಂಡು ಬಂದು ಇಮ್ರಾನ್ ಸಿದ್ದಿಕ್ ಗೆ ಒಟ್ಟು 8 ಲಕ್ಷ ಹಣವನ್ನು ನೀಡಿದ್ದಾರೆ. ಇಮ್ರಾನ್ ಸಿದ್ದೀಕ್ ಅಂದು ನನಗೆ ಉಳಿದ 02 ಲಕ್ಷ ಹಣವನ್ನು ಆದಷ್ಟು ಬೇಗ ತಂದು ಕೊಡು ಇಲ್ಲವಾದಲ್ಲಿ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ಅದ್ದರಿಂದ ನನಗೆ ಜೀವ ಬೆದರಿಕೆ ಹಾಕಿ ನನ್ನಿಂದ 08 ಲಕ್ಷ ಹಣ ಪಡೆದು ಇನ್ನೂ ಲಕ್ಷಗಟ್ಟಲೆ ಹಣಕ್ಕೆ ಬೇಡಿಕೆ ಇಟ್ಟಿರುವ ಇಮ್ರಾನ್ ಸಿದ್ದಿಕ್ ಮತ್ತು ಜುಲ್ಫಿಕರ್ ವಿರುದ್ಧ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ಕೊಡಿಸಬೇಕಾ ಹರಿಹರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಆಶೋಕ್.
ಆಶೋಕ್ ನಿಂದ ದೂರು ಪಡೆದ ಹರಿಹರ ಗ್ರಾಮಾಂತರ ಪೋಲಿಸ್ ನವರು ಇಮ್ರಾನ್ ಸಿದ್ದೀಕಿ ವಿರುದ್ದ ಸೆಕ್ಷನ್ IPC 1860 (U/s-384,504,506,34) ರಡಿ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಇಮ್ರಾನ್ ಸಿದ್ದೀಕಿ ವಿರುದ್ದ ದಾವಣಗೆರೆ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಕೂಡ ದೂರು ದಾಖಲಾಗಿದ್ದು ದಾವಣಗೆರೆಯ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು ಬಿಡುಗಡೆಯಾಗಿದ್ದರು.
ಸದರಿ ಪ್ರಕರಣದಲ್ಲಿ ಶ್ರೀ.ಐ.ಎಸ್.ಬಸವರಾಜ್ ಪೊಲೀಸ್ ಉಪಾಧೀಕ್ಷಕರು, ಡಿಸಿಆರ್ಬಿ ಘಟಕ, ಶ್ರೀ ವಿಥುನ್ ಐಪಿಎಸ್ (ಪ್ರಭೋಷನರಿ), ಶ್ರೀ ಲಿಂಗನಗೌಡ ನೆಗಳೂರು, ಪಿಐ, ದಾವಣಗೆರೆ ಗ್ರಾಮಾಂತರ, ಹಾಗೂ ಡಿಸಿಆರ್ಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಎಂ, ಅಂಜಿನಪ್ಪ ಎಎಸ್ಐ, ಕೆ.ಸಿ ಮಜೀದ್, ಕೆ.ಆಂಜನೇಯ, ಡಿ.ರಾಘವೇಂದ್ರ ಯು.ಮಾರುತಿ, ಪಿ.ಸುರೇಶ್, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಶ್ರೀ ಗುರುಶಾಂತಯ್ಯ, ಶ್ರೀ ಅರುಣಕುಮಾರ್, ಭಾಗಿಯಾಗಿರುತ್ತಾರೆ. ಇವರ ಕಾರ್ಯವನ್ನು ಶ್ರೀ ಸಿಬಿ ರಿಷ್ಯಂತ್ ಮಾನ್ಯ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ, ದಾವಣಗೆರ ಹಾಗೂ ಹೆಚ್ಚುವರಿ ಎಸ್ಪಿ ದಾವಣಗೆರೆಯವರು ಶ್ಲಾಘಿಸಿದ್ದರು,
ಈ ಎರಡೂ ಎಫ್ಐಆರ್ ಗಳಿಗೆ ಸಂಬಂಧಿಸಿದ ಪ್ರಕರಣ ಗಳನ್ನು ರದ್ದುಪಡಿಸುವಂತ ಕೋರಿ ಇಮ್ರಾನ್ ಸಿದ್ದಿಕಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ತೀರ್ಪು:
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಇಮ್ರಾನ್ ಸಿದ್ದಿಕಿ ವಿರುದ್ಧ ಸುಲಿಗೆ ಆರೋಪ ಮಾಡಲಾಗಿದೆ. ಆದರೆ, ಈ ಕುರಿತಂತೆ ಮುಬಾರಕ್ ದೂರು ಸಲ್ಲಿಸಲು 9 ತಿಂಗಳು ತಡ ಮಾಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಘಟನೆ ನಡೆದ ತಕ್ಷಣವೇ ದೂರು ನೀಡಬೇಕಿರುತ್ತದೆ. ಅನಗತ್ಯ ವಿಳಂಬ ಮಾಡಿದರೆ ದೂರಿನ ಕುರಿತಂತೆಯೇ ಅನುಮಾನಗಳು ಬರುತ್ತವೆ. ದೂರುದಾರರು ಭಯದಿಂದ ದೂರು ನೀಡಲು ವಿಳಂಬ ಮಾಡಿದ್ದಾಗಿ ಹೇಳುತ್ತಾರೆ. ಆದರೆ ಭಯಕ್ಕೆ ಕಾರಣಗಳನ್ನು ವಿವರಿಸಿಲ್ಲ. ಮೇಲ್ನೋಟಕ್ಕೆ ಆರೋಪದಲ್ಲಿ ಹುರುಳಿಲ್ಲವಾದ್ದರಿಂದ ಮುಂದಿನ ಕಾನೂನು ಪ್ರಕ್ರಿಯೆಗೆ ಅವಕಾಶ ನೀಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟು ಎರಡೂ ಎಫ್ಐಆರ್ ಗಳನ್ನು ರದ್ದುಪಡಿಸಿ ಆದೇಶಿಸಿದೆ.
ದಾವಣಗೆರೆ ಪೊಲೀಸ್ ಇಮ್ರಾನ್ ಸಿದ್ದೀಕಿ ವಿರುದ್ದ ಲುಕ್ ಔಟ್ ನೋಟಿಸ್ ಹೊರಡಿಸಿತ್ತು, ಅದನ್ನೂ ಕೂಡ ಮೂರು ವಾರಗಳಲ್ಲಿ ಹಿಂಪಡೆಯಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಒಟ್ಟಾರೆ ದಾವಣಗೆರೆ ಜಿಲ್ಲೆಯ ಪೊಲೀಸ್ ವಲಯದಲ್ಲಿ ಸಂಚಲನ ಮೂಡಿಸಿತ್ತು. ಇದರಿಂದ ದಾವಣಗೆರೆ ಪೊಲೀಸ್ ರಿಗೆ ಸದ್ಯ ಹಿನ್ನಡೆ ಆಗಿದ್ದರೂ ಸಹ ದಾವಣಗೆರೆ ಎಸ್ ಪಿ ರಿಷ್ಯಂತ್ ಹೈಕೋರ್ಟ್ ನಲ್ಲಿ ಮೇಲ್ಮನವಿಯನ್ನು ಸಲ್ಲಿಸಲಿದ್ದೆವೆ ಎಂದಿದ್ದಾರೆ.