ದಾವಣಗೆರೆ ಕ್ರಿಕೆಟ್ ಅಕಾಡೆಮಿ ವತಿಯಿಂದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರದ ಉದ್ಘಾಟನೆ

ದಾವಣಗೆರೆ: ದಾವಣಗೆರೆ ಕ್ರಿಕೆಟ್ ಅಕ್ಯಾಡೆಮಿಯು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ನಡೆಸುತ್ತಿರುವ 21ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ಮಾಜಿ ಕಾರ್ಪೊರೇಟರ್, ಜಿಲ್ಲಾ ಕ್ರೀಡಾ ಸಂಘದ ಅಧ್ಯಕ್ಷರು, ಕ್ರೀಡಾಪಟುಗಳಾದ ಶ್ರೀ ದಿನೇಶ್ ಕೆ ಶೆಟ್ಟಿ ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮೊದಲು ರಾಜ್ಯ ಕ್ರಿಕೆಟ್ ತಂಡದಲ್ಲಿ ಕೇವಲ ಬೆಂಗಳೂರು ಮೈಸೂರಿನ ಕ್ರೀಡಾಪಟುಗಳು ಇರುತ್ತಿದ್ದರು ಆದರೆ ಈಗ ಬೇರೆ ವಲಯದ ಕ್ರೀಡಾಪಟುಗಳು ಕೂಡ ಆಯ್ಕೆ ಕೊಳ್ಳುತ್ತಿದ್ದಾರೆ, ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ತರಬೇತಿ ದೊರೆಯುತ್ತಿದ್ದು ದಾವಣಗೆರೆಯ ಕ್ರೀಡಾಪಟುಗಳು ಇದನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಮಟ್ಟಕ್ಕೆ ತಲುಪಬೇಕು, ಇದರೊಂದಿಗೆ ಓದಿಗೂ ಪ್ರಾಮುಖ್ಯತೆ ನೀಡಬೇಕು ಆಗ ಮಾತ್ರ ಪೋಷಕರು ಆಡಲು ಬೆಂಬಲಿಸುತ್ತಾರೆ ಎಂದರು.
38ನೇ ವಾರ್ಡಿನ ಕಾರ್ಪೊರೇಟರ್ ಶ್ರೀ ಮಂಜುನಾಥ ಗಡಿಗುಡಾಳ್ ರವರು ಮಾತನಾಡಿ ಕೊರೋನಾ ನಂತರ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ಬಂದಿದ್ದು ಎಲ್ಲರೂ ಕ್ರೀಡೆಯಲ್ಲಿ ತೊಡಗುವುದರಿಂದ ತಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದರು. ಮಾಜಿ ದೂಡಾ ಅಧ್ಯಕ್ಷರಾದ ಅಯೂಬ್ ಖಾನ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಹೆಚ್ಚು ಪ್ರಚಲಿತವಿರುವ ಆಟವಾಗಿದ್ದು ಇದರಲ್ಲಿ ನಮ್ಮ ಊರಿಗೆ ಹಾಗೂ ನಮ್ಮ ದೇಶಕ್ಕೆ ಗೌರವ ತರಬೇಕು ಎಂದರು. ಇದೇ ಸಂದರ್ಭದಲ್ಲಿ ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ಸೀನಿಯರ್ ಆದಂತ ಶ್ರೀ ಗುರು ಅಂಬರ್ಕರ್, ಹಿರಿಯ ಕ್ರಿಕೆಟ್ ಆಟಗಾರ ವಸಂತ್ ಕುಮಾರ್, ಬಿ. ಸಿ. ಸಿ. ಐ. ಕೋಚ್ ಶ್ರೀ ಗೋಪಾಲಕೃಷ್ಣ ಕೆ ಎನ್, ಕೆ ಎಸ್ ಸಿ ಎ ಕೋಚ್ ಶ್ರೀ ತಿಮ್ಮೇಶ್, ಸರ್ಟಿಫೈಡ್ ಕೋಚ್ ಶ್ರೀ ಕುಮಾರ್, ಹಿರಿಯ ಕ್ರೀಡಾಪಟುಗಳಾದ ವೆಂಕಟೇಶ್, ಚೇತನ್, ಮುಂತಾದವರಿದ್ದರು.
ಮೇ 5ರ ವರೆಗೆ ನಡೆಯುವ ಈ ಕ್ರಿಕೆಟ್ ತರಬೇತಿ ಶಿಬಿರದಲ್ಲಿ ದಾವಣಗೆರೆ ಹಾಗೂ ಸುತ್ತಮುತ್ತಲಿನ ಆಸಕ್ತರು ಕಲಿಯುತ್ತಿದ್ದು ಮೇ 15ರವರೆಗೆ ತರಬೇತಿ ನಡೆಯಲಿದ್ದು ಆಸಕ್ತರು ಸೇರಿಕೊಳ್ಳಬಹುದಾಗಿದೆ.
ಸುದ್ದಿಗಾಗಿ ಸಂಪರ್ಕಿಸಿ: 9740365719
garudavoice21@gmail.com