ಗ್ರೈಂಡರ್ ಗೇ ಮೂಲಕ ಅಮಾಯಕರಿಗೆ ವಂಚನೆ.! ಆರೋಪಿಗಳಿಗೆ ರಕ್ಷಣೆ ನೀಡಿದ್ದ ಕೆ ಆರ್ ಎಸ್ ಪಕ್ಷದ ಯುವ ಘಟಕ ಅಧ್ಯಕ್ಷ ಖಾಕಿ ವಶಕ್ಕೆ.!

Heart shaped hole torn through paper, showing satin texture of flag of LGBT. Isolated on white background
ದಾವಣಗೆರೆ: ಗ್ರೆಂಡರ್ ಗೇ ಆಪ್ ಮೂಲಕ ಅಮಾಯಕರನ್ನು ವಂಚಿಸಿ ದರೊಡೆ ಮಾಡುತ್ತಿದ್ದ ಆರೋಪಿಗಳಿಗೆ ದಾವಣಗೆರೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಆರೋಪಿಗಳಿಗೆ ಸಹಾಯ ಮಾಡುತ್ತಿದ್ದ ಕೆ ಆರ್ ಎಸ್ ಪಕ್ಷದ ದಾವಣಗೆರೆ ಯುವ ಘಟಕ ಅಧ್ಯಕ್ಷ ಮಾಲತೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಗ್ರೈಂಡರ್ ಗೆ (ಸಲಿಂಗ ಕಾಮಿ) ಆಪ್ ಮೂಲಕ ಪರಿಚಯಿಸಿಕೊಂಡು ಅವರನ್ನು ಕುಂದುವಾಡ ಚಾನೆಲ್ ಹತ್ತಿರ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಹಲ್ಲೆ ಮಾಡಿ ಕಳ್ಳತನ ಮಾಡುತ್ತಿದ್ದರು. ಅಲ್ಲೇ ಮಾಡಿದ ಬಳಿಕ ಆರೋಪಿಗಳು ವ್ಯಕ್ತಿಯ ಬಳಿ ಇದ್ದ ಮೊಬೈಲ್ ಫೋನ್ 25 ಗ್ರಾಂ ನ ಬಂಗಾರದ ಸರ, 2000 ನಗದು ಹಣ ಹಾಗೂ ಎಟಿಎಂ ಕಾರ್ಡ್ ಪಡೆದು ಪಾಸ್ವರ್ಡ್ ತಿಳಿದುಕೊಂಡು 16,000 ಹಣವನ್ನು ವಿತ್ ಡ್ರಾ ಮಾಡಿಕೊಂಡು ಹಲ್ಲೆ ಮಾಡಿದ್ದಾರೆಂದು ವಿದ್ಯಾ ನಗರ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ದರೋಡೆ ಮಾಡತ್ತಿದ್ದ ಗ್ಯಾಂಗ್ನ ಸದಸ್ಯ ಶ್ರೀನಿವಾಸ ಮತ್ತು ಮತ್ತೋರ್ವ ಬಾಲಕನ ಜೊತೆ ಸೇರಿ ದರೋಡೆ ಗ್ಯಾಂಗಿನ ಆರೋಪಿಗಳಿಗೆ ಆಶ್ರಯ ನೀಡಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಮಾಲತೇಶ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.ದಾವಣಗೆರೆ ಕೆ ಆರ್ ಎಸ್ ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಈ ಮಾಲತೇಶ್
ಪ್ರಕರಣ ಸಂಬಂಧ ದರೋಡೆ ಮಾಡಿದ್ದ ಮೊಬೈಲ್ ಫೋನ್ ಮತ್ತು ದರೋಡೆ ಮಾಡಲು ಬಳಸುತ್ತಿದ್ದ ಎರಡು ಮೊಬೈಲ್ ಫೋನ್ ಗಳು ಒಂದು ಆಟೋ ರಿಕ್ಷವನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.