ಚಿರಂತನ ಸಂಸ್ಥೆಯ ದೀಪಾ ರಾವ್ ರವರಿಗೆ ಇನ್ನೋವೇಟಿವ್ ಎಜುಕೇಟರ್ ಪ್ರಶಸ್ತಿ

ದಾವಣಗೆರೆ: ದಾವಣಗೆರೆಯ ಚಿರಂತನದ ಸಂಸ್ಥಾಪಕ ರಾದ ದೀಪ ರಾವ್ ರವರಿಗೆ ಇನ್ನೋವೇಟಿವ್ ಎಜುಕೇಟರ್ ಎಂಬ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನೀಡಿ ಗೌರವಿಸಲಾಯಿತು. ಗ್ಲೋಬಲ್ ಟ್ರಯಂಪ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಅಲೋಫ್ಟ್ ಮ್ಯಾರಿಯಾಟ್ ಸಭಾಂಗಣದಲ್ಲಿ ನಡೆದ ಎಜುಕೇಶನ್ ಇನ್ನೋವೇಶನ್ ಸಮ್ಮೇಳನ 2023
ದಲ್ಲಿ ದೀಪಾ ರವರ ಶಿಕ್ಷಣ ಕ್ಷೇತ್ರದ ಸೇವೆ ಯನ್ನು ಗುರುತಿಸಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಮಲ್ಟಿಪಲ್ ಇಂಟಲಿಜೆನ್ಸ್ ಮತ್ತು ಬ್ಲೂಮ್ಸ್ ಟ್ಯಾಕ್ಸೋನಮಿ ಯಂತಹ ಅಂತರಾಷ್ಟ್ರೀಯ ಪರಿಕಲ್ಪನೆಗಳನ್ನು ಅಳವಡಿಸಿ ಮಕ್ಕಳಿಗೆ ಪರಿಣಾಮಕಾರಿಯಾಗಿ ಶಿಕ್ಷಣವನ್ನು ದೀಪ ನೀಡುತ್ತಾ ಬಂದಿದ್ದಾರೆ.ಚಟುವಟಿಕೆಗಳ ಮುಖಾಂತರ ಪ್ರತಿಯೊಂದು ಪಾಠವನ್ನು ಮನದಟ್ಟು ಮಾಡಿಸುವುದು ಈ ಪರಿಕಲ್ಪನೆಗಳ ತಳಹದಿ. ಒಮ್ಮೆ ತರಗತಿಯಲ್ಲಿ ಮಕ್ಕಳು ವಿಷಯವನ್ನು ಸರಿಯಾಗಿ ಅರಿತುಕೊಂಡಲ್ಲಿ, ಅವರಿಗೆ ಪರೀಕ್ಷೆಗಳನ್ನು ಎದುರಿಸುವುದು ಸುಲಭವಾಗುತ್ತದೆ ಹಾಗೂ ಕಲಿತ ಪಾಠಗಳು ಅವರಿಗೆ ಸದಾ ನೆನಪಿನಲ್ಲಿ ಇರುತ್ತವೆ. ಕಳೆದ 15 ವರ್ಷಗಳಿಂದ ಶಿಕ್ಷಣ ತಜ್ಞೆಯಾಗಿ, ಶಿಕ್ಷಕರ ತರಬೇತುದಾರರಾಗಿ ದೀಪ ಕೆಲಸವನ್ನು ಮಾಡುತ್ತಿದ್ದು, ಗೋಲ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಿರ್ದೇಶಕಿಯಾಗಿ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ ಪ್ರಗತಿಯೊಂದಿಗೆ ಜೀವನಕ್ಕೆ ಬಹು ಮುಖ್ಯವಾಗಿ ಬೇಕಾದ ಆತ್ಮವಿಶ್ವಾಸ, ನಿರ್ಭಯವಾಗಿ ಇತರರೊಂದಿಗೆ ವಿಷಯಗಳನ್ನು ಮಂಡಿಸುವುದು, ನಾಯಕತ್ವದ ಗುಣಗಳನ್ನು ಬೆಳೆಸುವುದರ ಜೊತೆಗೆ ಜೀವನದ ಮೌಲ್ಯಗಳಿಗೂ ಕೂಡ ಮಹತ್ವವನ್ನು ನೀಡಿ ಮಾನವೀಯ ಮೌಲ್ಯಗಳನ್ನು ಕಲಿಸು ವಂತಹ 10 ಹಲವಾರು ಚಟುವಟಿಕೆಗಳ ರೂಪು ರೇಷೆಯನ್ನು ಮಾಡಿ ಪರಿಣಾಮಕಾರಿಯಾಗಿ 640 ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.ಈ ಎಲ್ಲಾ ಸಾಧನೆಗಳನ್ನು ಗಮನಿಸಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದ್ದು ಚಿರಂತನದ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಪೋಷಕರು ಅಭಿನಂದನೆಗಳನ್ನು ತಿಳಿಸಿದ್ದಾರೆ.