ಮಾರಕ ಸೊಳ್ಳೆಗಳಿಗೆ ಅಹ್ವಾನ ನೀಡುತ್ತಿದೆ ಬಸ್ ನಿಲ್ದಾಣದ ಬಳಿಯ ಕಸದ ರಾಶಿ: ಪಾಲಿಕೆ ಪಕ್ಕದಲೇ ಇದ್ದರೂ ಪ್ರಯೋಜನವಿಲ್ಲ.! –

IMG-20210929-WA0004

ದಾವಣಗೆರೆ: ಎಲ್ಲೆಡೆ ಈಗ ವೈರಲ್ ಜ್ವರದ ಸದ್ದು, ಜತೆಗೆ ಡೆಂಗ್ಯೂ, ಚಿಕುಂ ಗುನ್ಯಾ, ಮಲೆರಿಯಾದಂತಹ ಜ್ವರ ಜನರನ್ನು ಬಾಧಿಸುತ್ತಿದೆ. ಇದಕ್ಕೆ ಕಾರಣವಾಗುವ ಸೊಳ್ಳೆಗಳನ್ನು ನಾಶ ಪಡಿಸಲು ಸ್ವಚ್ಛತೆ ಕಾಪಾಡುವುದು ಜನರ ಮತ್ತು ಪಾಲಿಕೆಯ ಮುಖ್ಯ ಕರ್ತವ್ಯ.

ಆದರೆ, ನಗರದ ಪ್ರೌಢಶಾಲಾ ಮೈದಾನದೊಳಗೆ ಪ್ರತಿನಿತ್ಯ ರಾಶಿ ಗಟ್ಟಲೆ ಕಸದ ರಾಶಿ ಬಿದ್ದಿರುತ್ತದೆ. ಕೂಗಳತೆಯ ದೂರದಲ್ಲೆ ಪಾಲಿಕೆ ಇದ್ದರೂ ಸಹ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ದಿನನಿತ್ಯ ಬೀಳುವ ಕಸದ ರಾಶಿಯಿಂದಾಗಿ ನಾನಾ ವಿಧದ ಸೊಳ್ಳೆಗಳು ಸೃಷ್ಟಿಯಾಗಿ ಡೆಂಗ್ಯೂ, ಚಿಕುಂ ಗುನ್ಯ, ಜ್ವರ ಇನ್ನಿತರ ರೋಗಗಳು ನಗರದ ಜನರಿಗೆ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಕೂಡಲೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!