ಸೂಲಿಬೆಲೆಯನ್ನು ಸಾಹಿತಿ ಅನ್ನೋದ್ರಲ್ಲಿ ತಪ್ಪಿಲ್ಲ ಎಂಬ ಜಗದೀಶ್ ಶೆಟ್ಟರ್ ಹೇಳಿಕೆ ಹಾಸ್ಯಾಸ್ಪದ : ಶಶಿಧರ್ ಪಾಟೀಲ್

shashidhar paatil

ದಾವಣಗೆರೆ : ಭಾರತ ಕಂಡ ಶ್ರೇಷ್ಠ ಹೆಂಗ್ ಪುಂಗ್ಲಿ ಖ್ಯಾತಿಯ, ಚಿನ್ನದ ರಸ್ತೆ ಪಿತಾಮಹ ಸೂಲಿಬೆಲೆಯನ್ನು ಸಾಹಿತಿ ಎಂದಿರುವ ಜಗದೀಶ್ ಶೆಟ್ಟರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಎನ್.ಎಸ್.ಯು.ಐ ಮುಖಂಡ ಶಶಿಧರ್ ಪಾಟೀಲ್ ವ್ಯಂಗ್ಯವಾಡಿದ್ದಾರೆ.

ಸುಳ್ಳೇ ಮನೆದೇವರು, ಸುಳ್ಳಿನ ಸರದಾರ, ಸುಳ್ಳಿನ ಚಕ್ರವರ್ತಿ, ಸುಳ್ಳೇ ಸಂಸ್ಕಾರ,ಸುಳ್ಳಿನ ಸಂಸ್ಕತಿ, ಸುಳ್ಳುಗಳ ಸರಪಳಿ (ರೈಲು), ಸುಳ್ಳಿನಿಂದ ಸಾಧನೆ ಸುಳ್ಳು ಆಡು ಸಾಧಿಸಿ ನೋಡು. ಇವೆಲ್ಲ ಸೂಲಿಬೆಲೆ ಚಕ್ರವರ್ತಿಯ ಸಾಹಿತ್ಯಗಳೆ ಎಂದು ಪ್ರಶ್ನಿಸಿದ್ದಾರೆ. ಸುಳ್ಳು ಹೇಳಿ, ಸುಳ್ಳು ಬರೆದು ಜನರನ್ನ ದಿಕ್ಕು ತಪ್ಪಿಸುವ ವ್ಯಕ್ತಿಯನ್ನು ಸಾಹಿತಿ ಅಂತ ಹೇಳಿರುವುದು ನಿಮ್ಮ ರಾಜಕೀಯ ದುರಂತವೆ ಸರಿ ಸೂಲಿಬೆಲೆ ಅವರನ್ನು ಸುಳ್ಳಿನ ಸಾಹಿತ್ಯ ಬರೆದಿರುವ ವಿಶೇಷ ಸಾಹಿತಿ ಎಂದು ಕರೆದರೆ ತಪ್ಪಾಗಲಾರದು. ಇತಿಹಾಸ ತಿರಚಿ ಇಂತಹ ಫುಳ್ ಹೇಳಿಕೆ ಕೊಡುವುದನ್ನು ನಿಲ್ಲಿಸಿ ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸುವ ಕಡೆ ಗಮನ ಹರಿಸಿ ಎಂದು ಆಗ್ರಹಿಸಿದ್ದಾರೆ.

 

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!