ಜಲಸಿರಿ ಕಾಮಗಾರಿ- ಪರ್ಯಾಯ ರಸ್ತೆಯಲ್ಲಿ ಸಂಚರಿಸಲು ಪಾಲಿಕೆ ಆಯುಕ್ತರ ಸಲಹೆ

Davanagere corporation

ದಾವಣಗೆರೆ:ಏಷಿಯನ್ ಅಭಿವೃದ್ಧಿ ಬ್ಯಾಂಕ್‌ನ ನೆರವು ಹಾಗೂ ಅಮೃತ್ ಯೋಜನೆಯಡಿ, ಮಹಾನಗರ ಪಾಲಿಕೆ ಹಾಗೂ ಕೆ.ಯು.ಐ.ಡಿ.ಎಫ್.ಸಿ. ಇಲಾಖೆಯ ವತಿಯಿಂದ ಕೈಗೊಂಡಿರುವ ೨೪ ಘಿ ೭ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಯನ್ನು (ಜಲಸಿರಿಯೋಜನೆ) ಹಂತ ಹಂತವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಈ ಯೋಜನೆಯ ಭಾಗವಾಗಿ ದಾವಣಗೆರೆ ನಗರದ ಹಳೇ ತಾಲ್ಲೂಕು ಕಛೇರಿಯ ಆವರಣದಲ್ಲಿರುವ ಮೇಲ್ಮಟದ ಜಲಾಗಾರದ (ಒವರ್ ಹೆಡ್ ಟ್ಯಾಂಕ್) ಸ್ಥಳದಿಂದ ವಸಂತ ಚಿತ್ರಮಂದಿರದ ಮುಖ್ಯ ರಸ್ತೆಯ ಮುಖಾಂತರ ಹಾಯ್ದು ಹೊಂಡದ ಸರ್ಕಲ್ ವರೆಗೆ ಕುಡಿಯುವ ನೀರಿನ ಪೈಪುಗಳನ್ನು ಆಳವಡಿಸುವ ಕಾಮಗಾರಿಯನ್ನು ಡಿ.೨೬ ಮತ್ತು ೨೭ ರಂದು ಹಮ್ಮಿಕೊಳ್ಳಲಾಗಿದೆ.

ಜಲಸಿರಿ ಕಾಮಗಾರಿಯು ಪ್ರತಿದಿನ ಬೆಳಿಗ್ಗೆ ೦೬-೩೦ ರಿಂದ ಆರಂಭಿಸಿ ರಾತ್ರಿ ೦೯-೩೦ ರ ಒಳಗೆ ಮುಗಿಸಲಾಗುವುದು. ಕಾಮಗಾರಿ ನಡೆಸುವ ಸಂದರ್ಭದಲ್ಲಿ ವಿಶೇಷವಾಗಿ ಇತರೆ ಇಲಾಖೆಗಳಿಂದ ಅಳವಡಿಸಿರುವ ಭೂಗತ ಪೈಪುಗಳು ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆಯಲ್ಲಿ ವ್ಯತ್ಯಯವಾದÀಲ್ಲಿ ನಮ್ಮ ಕಾಮಗಾರಿ ತಂಡವು ಸರಿಪಡಿಸುವ ಕೆಲಸವನ್ನು ಆದ್ಯತೆಯ ಮೇರೆಗೆ ರಾತ್ರಿ ಹಾಗೂ ಹಗಲು ವೇಳೆಯಲ್ಲಿಯೂ ಸಹ ಕಾರ್ಯ ನಿರ್ವಹಿಸುತ್ತದೆ.

ಕಾಮಗಾರಿ ಹಮ್ಮಿಕೊಳ್ಳುವ ಸಂದರ್ಭದಲ್ಲಿ ಸಾರ್ವಜನಿಕರ ಮನೆಗಳ, ಅಂಗಡಿ ಮುಂಗಟ್ಟುಗಳ, ಸರ್ಕಾರಿ ಕಛೇರಿಗಳ ಹಾಗೂ ಇನ್ನಿತರೆ ಪ್ರದೇಶದಲ್ಲಿ ಪೈಪುಗಳನ್ನು ಅಳವಡಿಸಲು ನೆಲ ಅಗೆತ ಮಾಡಿರುವ ಪ್ರದೇಶದಲ್ಲಿ ಬ್ಯಾರಿಕೇಡ್ ಹಾಕಲಾಗುವುದು. ಸಂಚಾರ ಸೂಚನಾ ಫಲಕಗಳು ಹಾಗೂ ಇನ್ನಿತರ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ವಿವಿಧ ಅಂಗಡಿ ಮುಂಗಟ್ಟುಗಳ ಮಾಲೀಕರು ತಮ್ಮ ವಾಹನಗಳನ್ನು ಕಾಮಗಾರಿಯನ್ನು ನಿರ್ವಹಿಸುವ ಸಂದರ್ಭದಲ್ಲಿ ಬೇರೆ ಕಡೆಗೆ ನಿಲ್ಲಿಸಿ ಸುಗಮ ಸಂಚಾರ ವ್ಯವಸ್ಥೆಯ ನಿರ್ವಹಣೆಗಾಗಿ ಸಹಕರಿಸಬೇಕು.

ಕಾಮಗಾರಿ ನಡೆಸುವ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಸಂಚಾರಿಸುವ ಸಾರ್ವಜನಿಕರು, ಹಿರಿಯ ನಾಗರೀಕರು ಹಾಗೂ ಶಾಲೆಗಳಿಗೆ ತೆರಳುವ ಮಕ್ಕಳು ತಮ್ಮ ರಸ್ತೆ ಸಂಚಾರ ಹಾಗೂ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕಾಮಗಾರಿ ನಿರ್ವಹಿಸುವ ಸ್ಥಳದಲ್ಲಿ ಸಂಚರಿಸುವ ವಾಹನ ಸವಾರರು ನಾಮಫಕದಲ್ಲಿ ಸೂಚಿಸಿದ ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕೆಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!