ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ‘ಜನತಾವಾಣಿ’ ಇ.ಎಂ. ಮಂಜುನಾಥ್ ಅದ್ಯಕ್ಷರಾಗಿ ಆಯ್ಕೆ

Davanger dist press

ದಾವಣಗೆರೆ: ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ `ಜನತಾವಾಣಿ’ ಉಪ ಸಂಪಾದಕ ಇ.ಎಂ. ಮಂಜುನಾಥ ಚುನಾಯಿತಗೊಂಡಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಇಬ್ಬರಲ್ಲಿ ಮಂಜುನಾಥ ಅವರು ತಮ್ಮ ಪ್ರತಿಸ್ಪರ್ಧಿ ದಾವಣಗೆರೆ ಕನ್ನಡಿಗ ಸಂಪಾದಕ ಆರ್. ರವಿ ಅವರಿಗಿಂತ ಮೂರು ಮತಗಳನ್ನು ಹೆಚ್ಚು ಪಡೆದು ಆಯ್ಕೆಯಾಗಿದ್ದಾರೆ. ಮಂಜುನಾಥ, 118 ಮತಗಳನ್ನು ಗಳಿಸಿದ್ದರೆ, ರವಿ 115 ಮತಗಳನ್ನು ಪಡೆದಿದ್ದರು.

ಪ್ರಧಾನ ಕಾರ್ಯದರ್ಶಿಯಾಗಿ ಎ. ಫಕೃದ್ದೀನ್ ಆಯ್ಕೆಯಾಗಿದ್ದಾರೆ. ಫಕೃದ್ದೀನ್ 114 ಮತಗಳನ್ನು ಗಳಿಸಿದ್ದರೆ ಅವರ ಪ್ರತಿಸ್ಪರ್ಧಿಯಾಗಿದ್ದ ಮಾಗನೂರು ಮಂಜಪ್ಪ 106 ಮತಗಳನ್ನು ಪಡೆದಿದ್ದಾರೆ. ಖಜಾಂಚಿಯಾಗಿ ಎನ್.ವಿ. ಬದರೀನಾಥ್ (116) ಅವರು ಹೆಚ್.ಎಂ.ಪಿ. ಕುಮಾರ್ (100) ಅವರನ್ನು ಪರಾಭವಗೊಳಿಸಿ ಆಯ್ಕೆಯಾಗಿದ್ದಾರೆ.
ಮೂರು ಸ್ಥಾನಗಳ ಉಪಾಧ್ಯಕ್ಷ ಸ್ಥಾನಗಳಿಗೆ ಜಗಳೂರಿನ ಡಿ. ಶ್ರೀನಿವಾಸ್ (187), ಹೆಚ್.ಎಸ್. ಪ್ರಕಾಶ್ (134) ಮತ್ತು ಆರ್.ಎಸ್. ತಿಪ್ಪೇಸ್ವಾಮಿ (127) ಆಯ್ಕೆಯಾಗಿದ್ದಾರೆ. ಅವರ ವಿರುದ್ಧ ಹೊನ್ನಾಳಿಯ ಟಿ. ಶ್ರೀನಿವಾಸ್ (117)ಸ್ಪರ್ಧಿಸಿದ್ದರು.

ಕಾರ್ಯದರ್ಶಿಯ ಮೂರು ಸ್ಥಾನಗಳಿಗೆ  ಐವರು ಸ್ಪರ್ಧಿಸಿದ್ದರು. ಈ ಪೈಕಿ ಜೆ.ಎಸ್. ವೀರೇಶ್ (123), ಬಿ. ಚನ್ನವೀರಯ್ಯ (118) ಹಾಗೂ ಬಿ.ಆರ್. ನಿಂಗೋಜಿ ರಾವ್ (109) ಚುನಾಯಿತಗೊಂಡಿದ್ದು, ಸಿ. ಸತೀಶ್ (103) ಮತ್ತು ಎಸ್. ಹನುಮಂತಪ್ಪ ಹಾಲಿವಾಣ (97) ಪರಾಭವಗೊಂಡಿದ್ದಾರೆ.

ಸಂಘದ ರಾಜ್ಯ ಘಟಕದಲ್ಲಿನ ಕಾರ್ಯಕಾರಿ ಸಮಿತಿ ಸದಸ್ಯರಲ್ಲಿ ಜಿಲ್ಲೆಯ ಒಂದು ಸ್ಥಾನಕ್ಕೆ ಇಬ್ಬರು ಸ್ಪರ್ಧೆ ಮಾಡಿದ್ದರು. `ಕರ್ನಾಟಕ ಎಕ್ಸ್‌ಪ್ರೆಸ್’ ಸಂಪಾದಕ ಕೆ. ಚಂದ್ರಣ್ಣ (119) ಆಯ್ಕೆಯಾಗಿದ್ದಾರೆ. ಅವರ ವಿರುದ್ಧ ಎಸ್.ಕೆ. ಒಡೆಯರ್ (98) ಸ್ಪರ್ಧಿಸಿದ್ದರು.

ಒಟ್ಟು 15 ಸ್ಥಾನಗಳ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗೆ 25 ಜನರು ಸ್ಪರ್ಧಿಸಿದ್ದರು. ಇವರಲ್ಲಿ ಬಿ.ಪಿ. ಸುಭಾನ್ ಸಾಬ್ (177), ಬಿ.ಎಸ್. ಮುದ್ದಯ್ಯ (144), ಎ.ಪಿ. ಸಂಜಯ್ (134), ಎನ್. ಕೃಷ್ಣೋಜಿರಾವ್ (124), ಎಂ. ಗುರುಮೂರ್ತಿ (123), ಎನ್.ಆರ್. ರವಿ (123), ಹೆಚ್. ಚಂದ್ರಶೇಖರ್ (122), ಎನ್. ನಂದನ್‌ಕುಮಾರ್ (122), ವಿ.ಬಿ. ಅನಿಲ್‌ಕುಮಾರ್ (119), ರಾಮಪ್ರಸಾದ್ (119), ಎನ್.ಕೆ. ಆಂಜನೇಯ (117), ಎನ್.ಎಂ. ಇಂದುಶೇಖರ್ ನಿಶಾನಿಮಠ (117), ಕೆ.ಸಿ. ಮಂಜುನಾಥ್ (114), ಸಿ ವೇದಮೂರ್ತಿ (113) ಮತ್ತು  ಎಸ್.ಎಂ. ಮಂಜುನಾಥ್ (112) ಆಯ್ಕೆಯಾಗಿದ್ದಾರೆ.

ಜಿ.ಎಂ. ಮಂಜುನಾಥ್ (112), ಶ್ರೀಕುಮಾರ್ ಆನೆಕೊಂಡ (112), ಎ.ಕೆ. ಪ್ರಕಾಶ್ (112),  ಎಂ. ಚಿದಾನಂದ (111), ಹೆಚ್.ಎಂ. ರಾಜಶೇಖರ್ (111), ಹೆಚ್. ವೆಂಕಟೇಶ್ (109), ಬಿ. ರುದ್ರಪ್ಪ (100), ಎಸ್.ಎನ್. ಬಾಲಾಜಿ (99), ಮಹ್ಮದ್ ತಾರೀಖ್ ನಕಾಶ (86) ಮತ್ತು ಜಿ. ಜಗದೀಶ್ (31) ಪರಾಭವಗೊಂಡಿದ್ದಾರೆ.

ಕಾರ್ಯಕಾರಿ ಸಮಿತಿಯ 15 ಸ್ಥಾನಗಳಲ್ಲಿ 14 ಜನರು ಅಧಿಕ ಮತಗಳನ್ನು ಗಳಿಸಿ ಚುನಾಯಿತರಾಗಿದ್ದು, ಇನ್ನೊಂದು ಸ್ಥಾನವನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಎ.ಕೆ. ಪ್ರಕಾಶ್, ಜಿ.ಎಂ. ಮಂಜುನಾಥ, ಎಸ್.ಎಂ.ಮಂಜುನಾಥ ಮತ್ತು ಶ್ರೀಕುಮಾರ್ ಆನೆಕೊಂಡ ನಾಲ್ವರೂ ಸಮನಾಗಿ 112 ಮತಗಳನ್ನು ಗಳಿಸಿದ ಕಾರಣ ನಡೆಸಿದ ಲಾಟರಿಯಲ್ಲಿ ಎಸ್.ಎಂ. ಮಂಜುನಾಥ್ ಆಯ್ಕೆಯಾಗಿದ್ದಾರೆ.

ಸಂಘದ ಎಲ್ಲಾ 25 ಪದಾಧಿಕಾರಿಗಳ ಸ್ಥಾನಗಳಗೆ 2022 ಫೆಬ್ರವರಿ 27ರಂದು ಚುನಾವಣೆ ನಡೆದಿತ್ತಾದರೂ, ತಾನು ತಡೆಹಿಡಿದಿದ್ದ ಫಲಿತಾಂಶವನ್ನು ರಾಜ್ಯ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಇಂದು ಪ್ರಕಟಿಸಲಾಯಿತು. ಸದಸ್ಯರಿಬ್ಬರು ಎತ್ತಿದ್ದ ಆಕ್ಷೇಪದ ಹಿನ್ನೆಲೆಯಲ್ಲಿ ಚುನಾವಣೆ ನಡೆಸಿ ಮತಗಳ ಎಣಿಕೆ ಕಾರ್ಯ ಪೂರ್ಣಗೊಳಿಸಿ ರಾಜ್ಯದ ಎಲ್ಲಾ ಜಿಲ್ಲೆಗಳ ಫಲಿತಾಂಶವನ್ನು ಪ್ರಕಟಿಸದಂತೆ ಹೈಕೋರ್ಟ್ ತಡೆಹಿಡಿದಿತ್ತು.

ಹೈಕೋರ್ಟ್ ನಿನ್ನೆ ನೀಡಿದ ಆದೇಶದನ್ವಯ ಜಿಲ್ಲೆಯ ಹಿರಿಯ ಪತ್ರಕರ್ತರೂ ಆದ ಜಿಲ್ಲಾ ಚುನಾವಣಾಧಿಕಾರಿ ಎಂ.ಎಸ್. ಶಿವಶರಣಪ್ಪ ಅವರು ಕುವೆಂಪು ಕನ್ನಡ ಭವನದಲ್ಲಿ ಇಂದು ಸಂಜೆ ಸೇರಿದ್ದ ಎಲ್ಲಾ ಸ್ಪರ್ಧೆಗಳ ಸಮ್ಮುಖದಲ್ಲಿ ಫಲಿತಾಂಶವನ್ನು ಘೋಷಿಸಿದರು. ಎ.ಆರ್. ಉಜ್ಜನಪ್ಪ ಉಪ ಚುನಾವಣಾಧಿಕಾರಿಯಾಗಿ, ಸಿ. ಗಿರೀಶ್ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಸುದ್ದಿಗಾಗಿ ಸಂಪರ್ಕಿಸಿ: 9740365719
garudavoice21@gmail.com

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!