ತೀರ್ಥ ಲಿಂಗೇಶ್ವರ ಸ್ವಾಮಿ ಬನ್ನಿ ಉತ್ಸವ ಪ್ರಯುಕ್ತ ಜಂಗಿ ಕುಸ್ತಿ

ದಾವಣಗೆರೆ: ಜಿಲ್ಲೆಯ ಅವಳಿ ತಾಲೂಕುಗಳಾದ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದ ಶ್ರೀ ತೀರ್ಥ ಲಿಂಗೇಶ್ವರ ಸ್ವಾಮಿ ಬನ್ನಿ ಉತ್ಸವದ ಪ್ರಯುಕ್ತ ಬಯಲು ಜಂಗಿ ಕುಸ್ತಿ ಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಬನ್ನಿ ಉತ್ಸವವು ಐದು ದಿನಗಳುವಿಜ್ರಂಭಣೆಯಿಂದ ಆಚರಿಸಲಾಗುತಿದು.
ಈ ವಿಶೇಷ ಸಂದರ್ಭದಲ್ಲಿ ಭಾರತೀಯ ಕಲೆಯಾದ ಬಯಲು ಜಂಗಿ ಕುಸ್ತಿ ಯನ್ನು ಏರ್ಪಡಿಸಲಾಗಿತ್ತು.ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಬಾರಿ ಜಾತ್ರೆಯನ್ನು ರದ್ದುಗೊಳಿಸಲಾಗಿತ್ತು
ದಾವಣಗೆರೆ ಶಿವಮೊಗ್ಗ ಹಾವೇರಿ ಹುಬ್ಬಳ್ಳಿ ಸುತ್ತಮುತ್ತಲ ಜಿಲ್ಲೆಗಳಿಂದ ಕುಸ್ತಿ ಪಟುಗಳು ಭಾಗವಹಿಸಿದ್ದರು.
ಈ ಜಂಗಿಕುಸ್ತಿ ಅನ್ನು ಮಾಜಿ ಶಾಸಕರಾದ ಡಿಜಿ ಶಾಂತನಗೌಡರ ಆಗಮಿಸಿ ಕುಸ್ತಿಪಟುಗಳಿಗೆ ಪ್ರೋತ್ಸಾಹಿಸಿದರು ಕುಸ್ತಿಯಲ್ಲಿ ಗೆದ್ದಂತಹ ಕುಸ್ತಿಪಟುಗಳಿಗೆ ಬಹುಮಾನ ವಿತರಿಸಿ ಸೋತಂತಹ ಕುಸ್ತಿಪಟುಗಳಿಗೆ ಆತ್ಮಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಈ ಕುಸ್ತಿಯನ್ನು ಪ್ರೋತ್ಸಾಹಿಸಿದರು