‘ಜೋಡೋ ಯಾತ್ರೆಯಿಂದ ಕೈ ಪಾಳಯಕ್ಕೆ ಹೆಚ್ಚೇನೂ ಅನುಕೂಲವಾಗದು’: ಹೀಗೆನ್ನುತ್ತಿದೆ ಸಮೀಕ್ಷೆ

ದೆಹಲಿ: ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದರೂ ಈ ಯಾತ್ರೆಯಿಂದ ಕೈ ಪಾಳಯಕ್ಕೆ ಹೆಚ್ಚೇನೂ ಅನುಕೂಲವಾಗದು. ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ್ಷಟರ ಮಟ್ಟಿಗೆ ಈ ಯಾತ್ರೆ ಯಶಸ್ಸು ಕಾಣಲ್ಲ ಎಂಬ ಸಂಗತಿ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಯಶಸ್ಸು ಮತಗಳಾಗಿ ಪರಿವರ್ತನೆಯಾಗದು ಎಂಬ ಅಭಿಪ್ರಾಯ ‘ಸಿ-ಓಟರ್ ಹಾಗೂ ಇಂಡಿಯಾ ಟುಡೇ’ ನಡೆಸಿರುವ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಸುಮಾರು 3,500 ಕಿ.ಮೀ. ದೂರದ ಪಾದಯಾತ್ರೆಯು ಜನರನ್ನು ಸೇರಿಸಿದರೂ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಗೆ ಇದರಿಂದಾಗಿ ಮತಗಳು ಸಿಗುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯ ಈ ಸಮೀಕ್ಷೆಯ ಹೈಲೈಟ್ಸ್. ಭಾರತ್ ಜೋಡೋ ಯಾತ್ರೆಯಿಂದ ರಾಹುಲ್ ಗಾಂಧಿ ಅವರು ಪ್ರಬಲ ನಾಯಕನ್ನಾಗಿ ಗುರುತಿಸಿಕೊಳ್ಳುವಂತಾಗಿದೆ ಎಂಬುದರಲ್ಲಿ ಸಂಶಯವಿಲ್ಲ ಎಂಬುದು ಗೊತ್ತಾಗಿದೆ.
ಈ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ದೇಶದ ಜನತೆ ಮತ್ತೆ ಬಹುಪರಾಕ್ ಹೇಳಿದ್ದಾರೆ. ತಕ್ಷಣ ಲೋಕಸಭಾ ಚುನಾವಣೆ ನಡೆದರೂ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಬೆಳಕು ಚೆಲ್ಲಿದೆ.
ರಾಜಕೀಯ ಸಮೀಕ್ಷೆಯಲ್ಲಿ ಯಶಸ್ಸು ಕಂಡಿರುವ ‘ಸಿ ಓಟರ್’ ಇಂಡಿಯಾ ಟುಡೇ ಸಹಯೋಗದಲ್ಲಿ ಈ ಸಮೀಕ್ಷೆ ಕೈಗೊಂಡಿದ್ದು, ದೇಶದಲ್ಲಿ ಮೋದಿ ಪ್ರಭಾವ ಹೆಚ್ಚಿರುವತ್ತ ಬೊಟ್ಟು ಮಾಡಿದೆ. ಕೂಡಲೇ ಚುನಾವಣೆ ನಡೆದರೆ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ, ಜೊತೆಗೆ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ಖಚಿತ ಎಂದು ಸಮೀಕ್ಷೆ ಹೇಳಿದೆ.
ಸಮೀಕ್ಷೆಯ ಲೆಕ್ಕಾಚಾರ ಹೀಗಿದೆ:
- ಒಟ್ಟು ಕ್ಷೇತ್ರಗಳ ಸಂಖ್ಯೆ 543
- ಎನ್ಡಿಎ : 298
- ಯುಪಿಎ : 15
- ಇತರರು : 92
ಮೋದಿ ಸರ್ಕಾರ ಬಗ್ಗೆ ಶೇ.67 ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಸಾಧನೆ ಬಗ್ಗೆ ಕಳೆದ ವರ್ಷಕ್ಕಿಂತ ಕಡಿಮೆ ಅಂಕಗಳು ಸಿಕ್ಕಿವೆ. ರಾಮ ಮಂದಿರ ನಿರ್ಮಾಣ ವಿಚಾರ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ. ಸಮಾನ ನಾಗರಿಕ ಸಂಹಿತೆ ವಿಚಾರ ಕೂಡಾ ಬಿಜೆಪಿ ಪಾಲಿಗೆ ವರದಾನವಾಗಲಿದೆ ಎಂದು ಸಮೀಕ್ಷೆಯಿಂದ ವ್ಯಕ್ತವಾಗಿದೆ.