ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಪತ್ರಕರ್ತರು

ದಾವಣಗೆರೆ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ದಿನಾಂಕ 27-02-2022 ರಂದು 2022-2025 ರ ಅವಧಿಗೆ ರಾಜ್ಯ ಘಟಕ ಮತ್ತು ಜಿಲ್ಲಾ ಘಟಕಗಳ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ದಿನಾಂಕ 14-02-2022 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಹಿನ್ನೆಲೆ ಒಟ್ಟು 50 ಕ್ಕೂ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾದವು. ದಾವಣಗೆರೆ ಜಿಲ್ಲೆಯಲ್ಲಿ ಸ್ಪರ್ಧಾ ಆಕಾಂಕ್ಷಿಗಳು ತಮ್ಮ ಉಮೇದುವಾರಿಕೆಯನ್ನು ದಾವಣಗೆರೆ ವಾರ್ತಾಭವನ ದಲ್ಲಿ ಚುನಾವಣಾಧಿಕಾರಿ ಹಿರಿಯ ಪತ್ರಕರ್ತ ಶಿವಶರಣಪ್ಪನವರಿಗೆ ಮತ್ತು ಉಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಇಲಾಖೆಯಲ್ಲಿ ಸೇವೆಸಲ್ಲಿಸಿ ನಿವೃತ್ತಿಯಾದ ಉಜ್ಜಿನಪ್ಪ ನವರಿಗೆ ನಾಮಪತ್ರಗಳನ್ನ ಸಲ್ಲಿಸಿದರು.
ದಾವಣಗೆರೆ ಜಿಲ್ಲೆಯಿಂದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನಕ್ಕೆ ಪವಿತ್ರಪ್ರಜಾ ದಿನಪತ್ರಿಕೆ ಸಂಪದಕರಾದ ಎಸ್.ಕೆ.ಒಡೆಯರ್. ಮತ್ತು ಕರ್ನಾಟಕ ಎಕ್ಸ್ ಪ್ರೆಸ್ ಪತ್ರಿಕೆ ಸಂಪಾದಕರಾದ ಕೆ.ಚಂದ್ರಣ್ಣ, ನಾಮಪತ್ರ ಸಲ್ಕಿಸಿದರು.
ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಜನತಾವಾಣಿ ದಿನಪತ್ರಿಕೆಯ ಮಂಜುನಾಥ್ ಈ ಎಂ, ಹಾಗೂ ದಾವಣಗೆರೆ ಕನ್ನಡಿಗ ದಿನಪತ್ರಿಕೆ ಸಂಪಾದಕರಾದ ರವಿ.ಆರ್ ನಾಮಪತ್ರ ಸಲ್ಲಿಸಿದರು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯುಷ್ ಟಿವಿ ಜಿಲ್ಲಾ ವರದಿಗಾರ ಮಾಗನೂರು ಮಂಜಪ್ಪ ಹಾಗೂ ದಾವಣಗೆರೆ ಇಮೇಜ್ ದಿನಪತ್ರಿಕೆಯ ಸಂಪಾದಕರಾದ ಎ.ಫಕೃದ್ದೀನ್ ನಾಮಪತ್ರ ಸಲ್ಲಿಸಿದ್ರು. ಖಜಾಂಚಿ ಸ್ಥಾನಕ್ಕೆ ಗರುಡಚರಿತೆ ಪತ್ರಿಕೆಯ ಸಂಪಾದಕರಾದ ಹೆಚ್ ಎಂ ಪಿ ಕುಮಾರ್ ಹಾಗೂ ವಾರ್ತಾ ವಿಹಾರ ಪತ್ರಿಕೆಯ ಬದರಿನಾಥ್ ತಮ್ಮ ನಾಮಪತ್ರ ಸಲ್ಲಿಸಿದರು.
ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಹರಿಹರ ನಗರವಾಣಿ ದಿನಪತ್ರಿಕೆ ಸಂಪಾದಕರಾದ ಸುರೇಶ್. ಪ್ರಜಾವಾಣಿ ಜಗಳೂರು ವರದಿಗಾರರಾದ ಡಿ.ಶ್ರೀನಿವಾಸ್, ವಾರ್ತಾಭಾರತಿ ದಿನಪತ್ರಿಕೆಯ ಜಿಲ್ಲಾ ವರದಿಗಾರರಾದ ಹೆಚ್,ಎನ್.ಪ್ರಕಾಶ್, ವಿಜಯವಾಣಿ ದಿನಪತ್ರಿಕೆಯ ವರದಿಗಾರರಾದ ಟಿ.ಶ್ರೀನಿವಾಸ್, ಜನಮಿಡಿತ ದಿನಪತ್ರಿಕೆಯ ವರದಿಗಾರರಾದ ಆರ್.ಎಸ್.ತಿಪ್ಪೇಸ್ವಾಮಿ, ಕಾರ್ಯದರ್ಶಿ ಸ್ಥಾನಕ್ಕೆ ಕ್ರಾಂತಿಕೇಸರಿ ದಿನಪತ್ರಿಕೆ ವರದಿಗಾರರಾದ ಜಿ.ಆರ್.ನಿಂಗೋಜಿರಾವ್, ಸ್ಟಾರ್ ಆಫ್ ದಾವಣಗೆರೆ ಸಂಪಾದಕರಾದ ಈಶ್ವರ್.ಎನ್,ಈ ಸಂಜೆ ದಿನಪತ್ರಿಕೆ ವರದಿಗಾರರಾದ ಎಸ್.ಹನುಮಂತಪ್ಪ ಹಾಲಿವಾಣ, ಪ್ರಜಾಪ್ರಗತಿ ವರದಿಗಾರರಾದ ಬಿ.ಚನ್ನವೀರಯ್ಯ, ದಾವಣಗೆರೆ ಟೈಮ್ಸ್ ದಿನಪತ್ರಿಕೆ ಸಂಪಾದಕರಾದ ಜೆ.ಎಸ್.ವಿರೇಶ್, ನಾಮಪತ್ರ ಸಲ್ಲಿಸಿದರು.
ಜಿಲ್ಲಾಕಾರ್ಯಕಾರಿಸಮಿತಿಗೆ ಜಿಲ್ಲೆ ಸಮಾಚಾರ ಪತ್ರಿಕೆಯ ಉಪಸಂಪಾದಕ ಹೆಚ್.ವೆಂಕಟೇಶ್, ದಾವಣಗೆರೆ ಶಿವ ದಿನಪತ್ರಿಕೆಯ ವರದಿಗಾರ ನಂದನ್ ಕುಮಾರ್ ಮತ್ತು ಕರ್ನಾಟಕ ಎಕ್ಸ್ ಪ್ರೆಸ್ ಪತ್ರಿಕೆ ವದಿಗಾರರಾದ ಸಿ.ಸತೀಶ್ ಜನಸ್ಪಂದನ ದಿನಪತ್ರಿಕೆ ಸಂಪಾದಕರಾದ ಉಮೇಶ್ ಹಾಗೂ ಮುದ್ದಪ್ಪ,ಎನ್.ಆರ್.ರವಿ, ರಾಜಶೇಖರ್ ಹೆಚ್.ಎಂ, ಅಂಜನೇಯ ಹೊನ್ನಾಳಿ ಎಸ್.ಕೆ.ಮಹಮದ್ ತಾರೀಖ್, ಬಿ.ರುದ್ರಪ್ಪ, ಹರೀಶ್.ಸಿ, ಇಂದುಶೇಖರ್ ಎನ್.ಎಮ್, ರಾಮಪ್ರಸಾದ್,ಶ್ರೀಕುಮಾರ್ ಆನೆಕೊಂಡ, ಚಿದಾನಂದ ಎಮ್, ಅನಿಲ್ ಕುಮಾರ್ ಬಿ.ವಿ, ಜಗದೀಶ್.ಜಿ, ಪ್ರಕಾಶ್ ಎ.ಕೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಇಂದಿನ ಸುದ್ದಿ ದಿನಪತ್ರಿಕೆಯ ಸಂಪಾದಕರಾದ ವೀರಪ್ಪ ಬಾವಿ, ಜನತಾ ವಾಣಿ ಪತ್ರಿಕೆಯ ಜಗಳೂರು ವರದಿಗಾರ ಸುಭಾನ್, ಪ್ರಜಾವಾಣಿ ದಿನಪತ್ರಿಕೆಯ ಜಗಳೂರು ವರದಿಗಾರ ಶ್ರೀನಿವಾಸ್,ಸೇರಿದಂತೆ ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.