ಜುಂಜೇಶ್ವರನ ಹುಂಡಿಯಲ್ಲಿ 73 ಸಾವಿರ – ಆಡಳಿತಾಧಿಕಾರಿ ಶ್ರೀಧರ್
ಹರಪನಹಳ್ಳಿ: ತಾಲ್ಲೂಕಿನ ಮಿನಿ ಕುಕ್ಕೆ ಸುಬ್ರಹ್ಮಣ್ಯ ಎಂದು ಹೆಸರು ಪಡೆದು ಕೊಂಡಿರುವ ಸತ್ತೂರು-ಗೊಲ್ಲರಹಟ್ಟಿ ಗೆ ವಿಷ ಜಂತುಗಳು ಕಡಿದಾಗ ಗ್ರಾಮಕ್ಕೆ ಬಂದು ಜುಂಜೇಶ್ವರನ ದರ್ಶನಕ್ಕೆ ಪಡೆದರೆ ಒಳ್ಳೆಯದು ಎನ್ನುವುದು ಭಕ್ತರ ನಂಬಿಕೆಯಾಗಿದೆ.
ಶ್ರೀ ಜುಂಜೇಶ್ವರ ದೇವಸ್ಥಾನದ ಹುಂಡಿ ಎಣಿಕೆ ಇಂದು ಬೆಳೆಗ್ಗೆ ಊರಿನ ಗ್ರಾಮಸ್ಥರು, ಕಂದಾಯ ಇಲಾಖೆ, ಗ್ರಾಮ ಲೆಕ್ಕದಿಕಾರಿಗಳು ಸಮ್ಮುಖದಲ್ಲಿ ಇಂದು ಬೆಳಗ್ಗೆ ನಡೆಯಿತು.
ಕಳೆದ ಕೆಲವು ವರ್ಷಗಳಿಂದ ಮುಜುರಾಯಿ ಇಲಾಖೆ ವ್ಯಾಪ್ತಿಯಲ್ಲಿ ದೇವಸ್ಥಾನವಿದ್ದು ಆದಾಯ ಕಡಿಮೆ ಇದ್ದು ಗ್ರಾಮಸ್ಥರೆ ಆಡಳಿತ ಮಂಡಳಿಯ ಮೂಲಕ ದೇವಸ್ಥಾನವನ್ನು ನಡೆಸುತ್ತಿದ್ದರು.
ಶ್ರಾವಣ ಮಾಸದಲ್ಲಿ ತಹಶೀಲ್ದಾರ್ ನಂದೀಶ್ ನೇತೃತ್ವದಲ್ಲಿ ಮುಜುರಾಯಿ ಇಲಾಖೆ ವ್ಯಾಪ್ತಿಗೆ ಈ ದೇವಸ್ಥಾನವನ್ನು ಅಧಿಕೃತವಾಗಿ ತಗೆದುಕೊಂಡು ಆಡಳಿತಾಧಿಕಾರಿ ಯಾಗಿ ಅರಸೀಕೆರೆ ಕಂದಾಯ ನಿರೀಕ್ಷಕ ಶ್ರೀಧರ್ ರನ್ನು ನೇಮಿಸಿ ಆದೇಶ ಹೊರಡಿಸಿದ್ದರು.
ಮೊದಲ ಬಾರಿ ಹುಂಡಿ ಎಣಿಕೆಯಾಗಿದ್ದು ಹುಂಡಿಯಲ್ಲಿ 73,266 ರೂ ಹಣವಿದ್ದು ಈ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಂಗ್ರಿಹಳ್ಳಿಯ ದೇವಸ್ಥಾನದ ಖಾತೆಗೆ ಜಮಾ ಮಾಡಲಾಗಿದೆ ಎಂದು ಆಡಳಿತಾಧಿಕಾರಿ ಶ್ರೀಧರ್ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಉತ್ಸವಾಂಭ ದೇವಸ್ಥಾನದ ಗುಮಾಸ್ತ ರಮೇಶ್,ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಮ್ಯಾನೇಜರ್ ಪ್ರವೀಣ್ ಕುಮಾರ್,ಗ್ರಾಮ ಲೆಕ್ಕದಿಗಳಾದ ಮಂಜುನಾಥ್, ಶ್ರೀ ಕಾಂತ್,ರವಿಕುಮಾರ್,ನಾನ್ಯಾ ಸಬ್, ಪೊಲೀಸ ಇಲಾಖೆ ಮಂಜುನಾಥ್,ಗೃಹ ರಕ್ಷಕ ದಳದ ಗೋವಿಂದರಾಜ ಹಾಗೂ ಮುಜುರಾಯಿ ಇಲಾಖೆ,ಕಂದಾಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು..