ಕ್ರೀಡಾಂಗಣದ ಅಭಿವೃದ್ಧಿಗೆ ಅನುದಾನ ನೀಡಲು ಮನವಿ

ಚಿತ್ರದುರ್ಗ.ಜು.೧೦: ಶ್ರೀ ಜಗದ್ಗುರು ಜಯದೇವ ಮುರುಘಾರಾಜೇಂದ್ರ ಕ್ರೀಡಾಂಗಣದ ಅಭಿವೃದ್ಧಿಗೆ ಅನುದಾನ ನೀಡಬೇಕೆಂದು ರಾಜ್ಯ ಖನಿಜ ನಿಗಮ ಅಧ್ಯಕ್ಷ
ಲಿಂಗಮೂರ್ತಿ.ಎಸ್ ಅವರಿಗೆ ನಗರದ ಜಿತೇಂದ್ರ ಎನ್.ಹುಲಿಕುಂಟೆ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಚಿತ್ರದುರ್ಗ ಹೃದಯಭಾಗದಲ್ಲಿ ಶ್ರೀ ಜಯದೇವ ಸ್ವಾಮಿಗಳ ಆರ್ಥಿಕ ಸಹಾಯದಿಂದ 1962ರಲ್ಲಿ ನಿರ್ಮಾಣವಾದ ಶ್ರೀ ಜಗದ್ಗುರು ಜಯದೇವ ಮುರುಘಾರಾಜೇಂದ್ರ ಕ್ರೀಡಾಂಗಣವು ಚಿತ್ರದುರ್ಗ ನಗರದ ಪ್ರಥಮ ಕ್ರೀಡಾಂಗಣವಾಗಿದ್ದು, ನಗರದ ವಿವಿಧ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಮತ್ತು ಅಂತರ್ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿರುವುದು ತಮಗೆ ತಿಳಿದಿರುವ ವಿಚಾರವಾಗಿದೆ. ಈ ಕ್ರೀಡಾಂಗಣದ ನಿರ್ಮಾಣಕ್ಕೆ ಶ್ರೀ ಜಯವಿಭವ ಸ್ವಾಮಿಗಳು ಸ್ಥಳವನ್ನು ದಾನವಾಗಿ ನೀಡಿರುತ್ತಾರೆ. ಸದರಿ ಕ್ರೀಡಾಂಗಣದ ಅಭಿವೃದ್ಧಿಗಾಗಿ ಸರ್ಕಾರವು 1 ಕೋಟಿಯಷ್ಟು ಅನುದಾನ ನೀಡಿದ್ದು, ಡಾ.ಶಿವಮೂರ್ತಿ ಮುರುಘಾಶರಣರ ಮಾರ್ಗದರ್ಶನದಲ್ಲಿ ಅದರ ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಮುಂದುವರೆದ ಕಾಮಗಾರಿಗಾಗಿ ಹೆಚ್ಚಿನ ಅನುದಾನದ ಅವಶ್ಯಕತೆಯಿರುತ್ತದೆ.
ಪ್ರಯುಕ್ತ ಶ್ರೀಮಠದ ಭಕ್ತರಾದ ತಾವುಗಳು ಖನಿಜ ನಿಗಮದ ವತಿಯಿಂದ ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಗಳಿಗೆ ರೂ.50 ಲಕ್ಷಗಳ ಧನಸಹಾಯವನ್ನು ಬಿಡುಗಡೆ ಮಾಡಿ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.