ಕೃಷಿ ವಿಚಕ್ಷಣ ದಳದಿಂದ 5 ಲಕ್ಷ ಮೌಲ್ಯದ ಅನಧಿಕೃತ ಜೈವಿಕ ಕೀಟನಾಶಕ ವಶ

 

ದೊಡ್ಡಬಳ್ಳಾಪುರ: ಅನಧಿಕೃತ ಜೈವಿಕ ಕೀಟನಾಶಕ ಹಾಗೂ ಜೈವಿಕ ಗೊಬ್ಬರ ಪೋಷಕಾಂಶ ತಯಾರಿಸಿದ್ದ ದೊಡ್ಡಬಳ್ಳಾಪುರದ ಪ್ರಗತಿ ಆರ್ಗ್ಯಾನಿಕ್‌ ಕೇಂದ್ರದ ಮೇಲೆ ಕೃಷಿ ಜಾಗೃತಕೋಶ ದಾಳಿ ನಡೆಸಿದೆ.

ಪ್ರಗತಿ ಅರ್ಗ್ಯಾನಿಕ್ ಕೇಂದ್ರದ ಮೇಲೆ ದಾಳಿ ನಡೆಸಿರುವ ಕೃಷಿ ವಿಚಕ್ಷಣ ದಳ, ಬೆಂಗಳೂರು ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಹಾಗೂ ದೊಡ್ಡಬಳ್ಳಾಪುರ ಎಡಿಎ ಸುಶೀಲಮ್ಮ ಹಾಗೂ ವಿಚಕ್ಷಣಾದಳದ ಎಡಿಎ ಪ್ರಮೋದ್ ದಾಳಿ ನಡೆಸಿ ಸುಮಾರು 5ಲಕ್ಷ ರೂ.ಮೌಲ್ಯದ ಜೈವಿಕ ಕೀಟನಾಶಕ ಮತ್ತು ಜೈವಿಕ ಗೊಬ್ಬರ ಸೂಕ್ಷ್ಮ ಪೋಷಕಾಂಶ ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!