KSDB PART-1: ಕೊಳಗೇರಿ ಮಂಡಳಿಯಲ್ಲಿ ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲ; ಸೈಟ್‌ ವಿಸಿಟ್ ಸರ್ಟಿಫಿಕೇಟ್ ಗೋಲ್ಮಾಲ್ 

Karnataka slum development board site vosit certificate tender bid rigging exclusive story

ದಾವಣಗೆರೆ: (KSDB EXCLUSIVE) ಟೆಂಡರ್ ಪ್ರಕ್ರಿಯೆಯಲ್ಲಿ ಅಧಿಕ ಷರತ್ತು ವಿಧಿಸಿ ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲ  ಮಾಡಿಕೊಡಲುಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ,ಕೆ ಎಸ್ ಡಿ ಬಿ ದಾವಣಗೆರೆ  ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಗಳು ಕರೆಯುವ ವಿವಿಧ ಉಪ ವಿಭಾಗದ ವ್ಯಾಪ್ತಿಯ ಹಲವು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಕಾರ್ಯಪಾಲಕ ಇಂಜಿನಿಯರ್ ಗಳು ಆಯಾ ಉಪ ವಿಬಾಗದ ಎಇಇ ಅವರಿಂದ ಸ್ಥಳ ಪರಿಶೀಲನಾ ಪ್ರಮಾಣಪತ್ರ ಪಡೆದು ಕೆಪಿಪಿಪಿ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬೇಕು ಎಂಬ ಹೆಚ್ಚುವರಿ ಷರತ್ತು ವಿಧಿಸಲಾಗುತ್ತಿದೆ.

 ಟೆಂಡರ್ ಶೀರ್ಷಿಕೆಯಡಿ ಕರೆಯುವ  ಕಾಮಗಾರಿಯಲ್ಲಿ ಭಾಗವಹಿಸಲು ಕಾನೂನು ಬಾಹಿರವಾಗಿ ಸ್ಥಳ ಪರಿಶೀಲನಾ ವರದಿ ನೀಡುವಂತೆ ಇ ಟೆಂಡರ್ ನಲ್ಲಿ ಭಾಗವಹಿಸುವ ಗುತ್ತಿಗೆದಾರರಿಗೆ ಹೆಚ್ಚುವರಿ ಷರತ್ತು ವಿಧಿಸಿ ಕೆ ಟಿ ಪಿ ಪಿ ಕಾಯ್ದೆಯನ್ನು ಉಲ್ಲಂಘಿಸಲಾಗುತ್ತಿರುವ ವಿಷಯ ಬಯಲಿಗೆ ಬಂದಿದೆ.  ಸರ್ಕಾರದ ಅಧಿಸೂಚನೆಗಳನ್ನು ದಿಕ್ಕರಿಸಿರುವ  ಅಧಿಕಾರಿಗಳು ಪಾರದರ್ಶಕತೆ ಹಾಗೂ ಗೌಪ್ಯತೆ ಕಾಯ್ದೆಗಳನ್ನು ಗಅಳಿಗೆ ತೂರಿ ನಿರ್ದಿಷ್ಟ ಗುತ್ತಿಗೆದಾರರಿಗೆ ಕಾಮಗಾರಿಯ ಗುತ್ತಿಗೆ ನೀಡುವ ಸಲುವಾಗಿ  ಬಿಡ್ ರಿಗ್ಗಿಂಗ್ ನಡೆಸಲಾಗುತ್ತಿದೆ. ಕಾಮಗಾರಿ ಪಡೆಯುವ ಸ್ಫರ್ಧೆಯನ್ನು ಮೊಟಕುಗೊಳಿಸಿ ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಈ ರೀತಿ ಮಾಡಲಾಗುತ್ತದೆ ಎಂದು  ಹಲವು ಇಲಾಖೆಯ ಹಾಲಿ ಹಾಗೂ ನಿವೃತ್ತ ಹಿರಿಯ ಇಂಜಿನಿಯರ್ ಗಳು ಹೇಳುತ್ತಿದ್ದಾರೆ.

 ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, (ಕೆ ಎಸ್ ಡಿ ಬಿ) ದಾವಣಗೆರೆ  ವಿಭಾಗ ವತಿಯಿಂದ ಕೈಗೊಳ್ಳುವ ವಿವಿಧ ಕಾಮಗಾರಿಗಳಿಗೆ 2023-24 ರ ಪ್ರಸಕ್ತ ಸಾಲಿನಲ್ಲಿ ಹಾಗೂ ಇದಕ್ಕೂ ಹಿಂದಿನ ಸಾಲಿನಲ್ಲೂ ಹಾಗೂ ಪ್ರಸ್ಥುತ ಇಲಾಖೆ ವತಿಯಿಂದ ಕರೆಯಲಾಗುವ ಎಲ್ಲಾ ಟೆಂಡರ್ ಗಳಲ್ಲಿ ಭಾಗವಹಿಸಲು ಗುತ್ತಿಗೆದಾರರು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಫೋರ್ಟಲ್ ( ಕೆ ಪಿ ಪಿ ಪಿ) ನಲ್ಲಿನ ಷರತ್ತುಗಳು ( Site Visit Letter Issued by AEE KSDB Davanagere Acknowledge Document as per clause 3.4.2.) ಅರ್ಹತೆಯ ಸಾಮಾನ್ಯ ಷರತ್ತಿನಲ್ಲಿರುವಂತೆ ಹಾಗೂ, ತಾಂತ್ರಿಕ ಆರ್ಹತೆಗೆ ಅನ್ವಯವಾಗುವಂತೆ ಗುತ್ತಿಗೆದಾರರು ದಾಖಲೆ ಸಲ್ಲಿಸಲು  ಷರತ್ತುಗಳನ್ನು ವಿಧಿಸಲಾಗುತ್ತಿರುವ ಅಂಶ ಪತ್ತೆಯಾಗಿದೆ.. ( The Tendere Should visit the proposed construction site and should compulsorily upload the letter issued by Assistant Executive Engineer, KSDB, Davanagere Sub-Division, Pune-Bangalore Highway Right Side, New Banashankari Layout, Davanagere. Addressed ti Executive Engineer, KSDB, Davanagere Division, Davangere along with the Technical Bid failing to comply with these norms will make the tender liable to rejection.)

ಈ ರೀತಿ ಅಸಂಬದ್ಧ ಷರತ್ತುಗಳನ್ನು ಕಲ್ಪಿಸಿ ಪ್ರತಿ ಕಾಮಗಾರಿಯಲ್ಲೂ ಒಬ್ಬ ಗುತ್ತಿಗೆದಾರನಿಗೆ ಮಾತ್ರ ಸ್ಥಳ ಪರಿಶೀಲನಾ ಪ್ರಮಾಣ ಪತ್ರ ನೀಡುವುದು ಅಥವಾ ಬೇಕಾದವರ ಜೊತೆ ಬಿಡ್ ರಿಗ್ಗಿಂಗ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಸ್ಥಳ ಪರಿಶೀಲನಾ ಪ್ರಮಾಣ ಪತ್ರವನ್ನು ಟೆಂಡರ್  ನಲ್ಲಿ ಅಪ್ ಲೋಡ್ ಮಾಡುವಂತೆ ಸಂಗ್ರಹಣಾ ಪ್ರಧಿಕಾರಿಗಳಾದ ಕಾರ್ಯಪಾಲಕ ಆಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಎಇಇ ರವರುಗಳು ಕೆಪಿಪಿಪಿ ಪೋರ್ಟಲ್ ನ ಎನ್ ಐ ಟಿ ಡಾಕ್ಯೂಮೆಂಟ್ ನಲ್ಲಿ ಪ್ರಕಟಣೆ ಹೊರಡಿಸಿ ಕೆಟಿಪಿಪಿ ಕಾಯ್ದೆ ಹಾಗೂ ಬಿಡ್ ಡಾಕ್ಯೂಮೆಂಟ್ 1,2,3,4 ರ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದ್ದಾರೆ

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ನಿಯಮಗಳ ಪ್ರಕಾರ ಸದರಿ ಸೈಟ್ ಪರಿಶೀಲನಾ ವರದಿ ಪಡಯುವುದು/ನೀಡುವುದು ಕಾನೂನು ಬಾಹಿರ ಹಾಗೂ ಟೆಂಡರ್ ಗೌಪ್ಯತಾ ನೀತಿಯನ್ನು ಉಲ್ಲಂಘನೆ ಮಾಡಿ ಕ್ರಿಮಿನಲ್ ಅಪರಾಧವೇಸಗಿ ಸರ್ಕಾರದಿಂದ ರೂಪಿಸಿರುವ ಕಾನೂನುಗಳನ್ನು ಉಲ್ಲಂಘಿಸುತ್ತಿದ್ದಾರೆ, ಅದಾಗ್ಯೂ ಟೆಂಡರ್ ಶೀರ್ಷಿಕೆ ಕಾಮಗಾರಿಯ ಸ್ಥಳ ಪರಿಶೀಲನಾ ಪ್ರಮಾಣಪತ್ರ/ವರದಿ ನೀಡಲು ಅಥವಾ  ಪಡೆಯಲು  ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, (ಕೆ ಎಸ್ ಡಿ ಬಿದಾವಣಗೆರೆ  ವಿಭಾಗ ವತಿಯಿಂದ ಅಥವಾ ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ ಅಥವಾ ಕರ್ನಾಟಕ ಸರ್ಕಾರದಿಂದ ಕಾಲ ಕಾಲಕ್ಕೆ  ಹೊರಡಿಸಿರುವ ಅಧಿಸೂಚನೆ/ಸುತ್ತೋಲೆಗಳ ಆದೇಶದ ಪ್ರತಿಗಳು ಹಾಗೂ ಸದರಿ ಸ್ಥಳ ಪರಶೀಲನೆ ಮಾಡಿರುವ ಬಗ್ಗೆ ಪ್ರಮಾಣ ಪತ್ರ ಪಡೆಯುವಂತೆ ಕೆ ಟಿ ಪಿ ಪಿ  1999 ಕಾಯ್ದೆ (2000) ನಿಯಮಗಳ ಅಡಿಯಲ್ಲಿ ನಮುದಾಗಿರುವ ನಿಯಮಾವಳಿಯ ಪ್ರತಿಗಳನ್ನು ನೀಡಲು ವಿಫಲರಾಗಿರುತ್ತಾರೆ.

 ಕಾನೂನಡಿ ಹಾಗೂ ಕೆಟಿಪಿಪಿ ಕಾಯ್ದೆಯಲ್ಲಿ ಈ ರೀತಿಯ ಪ್ರಮಾಣಪತ್ರ/ವರದಿ ನೀಡುವುದಕ್ಕೆ ಅವಕಾಶವಿರುವುದಿಲ್ಲ, ಇದು ಕಾನೂನು ಬಾಹಿರವಾಗಿದ್ದು, ಕೆಟಿಪಿಪಿ ಕಾಯ್ದೆಯ ನಿಬಂಧನೆಗಳನ್ವಯ ಅಥವಾ ಅದರ ಅಡಿಯಲ್ಲಿ ರಚಿಸಲಾದ ನಿಯಮಗಳನ್ನು ಉಲ್ಲಂಘಿಸುವವರು ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಗುರಿಯಾಗಬಹುದಾಗಿರುತ್ತದೆ ಮತ್ತು ಐದು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ದಂಡದೊಂದಿಗೆ ಅಪರಾಧವಾಗಿರುತ್ತದೆ ಎಂದು ಕಾಯ್ದೆಯಲ್ಲಿ ಉಲ್ಲೇಖವಿರುತ್ತದೆ. ಬಿಡ್ ಡಾಕ್ಯೂಮೆಂಟ್ ಗಳಲ್ಲಿ ಯಾವುದೇ ಟೆಂಡರ್  ಸಂಗ್ರಹಣಾ ಪ್ರಾಧಿಕಾರಗಳು (Process To Be Confidential) ಗೌಪ್ಯತೆ ಕಾಯ್ದುಕೊಳ್ಳಬೇಕು ಅಂತಾ ಇರುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಕೆ ಎಸ್ ಡಿ ಬಿದಾವಣಗೆರೆ  ವಿಭಾಗ ವತಿಯ  ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿರುವುದು ಬೆಳಕಿಗೆ ಬಂದಿದೆ.

ಕೆಟಿಪಿಪಿ ಕಾಯ್ದೆಯ ಅಧ್ಯಾಯ 3  ರಲ್ಲಿರುವಂತೆ ಗುತ್ತಿಗೆಯನ್ನು ಪ್ರಕಟಿಸುವವರೆಗೆ ಟೆಂಡರ್ ಮೌಲ್ಯಮಾಪನ ಪ್ರಕ್ರಿಯೆಯನ್ನು ರಹಸ್ಯವಾಗಿ ಇಡಬೇಕು,ಟೆಂಡರಿನ ಮೇಲೆ ಆದೇಶಗಳು ಮಂಜೂರಾಗುವವರೆಗೆ ಟೆಂಡರು ಮೌಲ್ಯಮಾಪನದ ಪ್ರಕ್ರಿಯೆಯನ್ನು ಟೆಂಡರು ಆಹ್ವಾನ ಪ್ರಾಧಿಕಾರವು ರಹಸ್ಯವಾಗಿಡಬೇಕು.

ಟೆಂಡರು ತೆರೆದ ನಂತರ ಮತ್ತು ಟೆಂಡರು ಅಧಿಸೂಚನೆಯನ್ನು ಪ್ರಕಟಿಸುವ ಮುನ್ನ ಟೆಂಡರು ಸ್ವೀಕಾರ ಪ್ರಾಧಿಕಾರಟೆಂಡರು ಆಹ್ವಾನ ಪ್ರಾಧಿಕಾರಟೆಂಡರು ತಪಾಸಣಾ ಸಮಿತಿಯೊಂದಿಗೆ ಟೆಂಡರುದಾರ ಅನಧಿಕೃತ ಅಥವಾ ಅನಗತ್ಯ ಸಂಬಂಧವನ್ನು ಹೊಂದಿರಬಾರದುಒಂದು ವೇಳೆ ಟೆಂಡರು ಸ್ವೀಕರಣಾ ಪ್ರಾಧಿಕಾರದ ಮೇಲೆ ಹೆಚ್ಚುವರಿ ಒತ್ತಡ ತಂದಲ್ಲಿ ಅಂತಹ ಟೆಂಡರುದಾರನನ್ನು ಅನರ್ಹಗೊಳಿಸಲು ಇದುವೇ ಸಕಾರಣವಾಗಿರುತ್ತದೆ ಎಂದು ಕಾಯಿದೆಯಲ್ಲಿ ಉಲ್ಲೇಖವಿದೆ.

Leave a Reply

Your email address will not be published. Required fields are marked *

error: Content is protected !!