ದಾವಣಗೆರೆ ಬಳಿ ಹಂದಿ ಬಲೆಯಲ್ಲಿ ಬಿದ್ದಿದ್ದ ಚಿರತೆ ಸಾವು!

leopard

ದಾವಣಗೆರೆ: ಹಂದಿ ಹಿಡಿಯಲು ಹಾಕಲಾಗಿದ್ದ ಬಲೆಯಲ್ಲಿ ಬಿದ್ದಿದ್ದ ಚಿರತೆ ಸಾವನ್ನಪ್ಪಿದೆ. ದಾವಣಗೆರೆ ತಾಲೂಕಿನ ಆನಗೋಡು ಅರಣ್ಯ ಪ್ರದೇಶ ವ್ಯಾಪ್ತಿಯ ಹುಳಪಿನಕಟ್ಟೆ ಗ್ರಾಮದಲ್ಲಿ ಚಿರತೆಯೊಂದು ಸೆರೆ ಸಿಕ್ಕಿತ್ತು. ಆದರೆ ಆ ಚಿರತೆ ಇದೀಗ ಸಾವನ್ನಪ್ಪಿದೆ. ಹಂದಿ ಹಿಡಿಯುವ ಸಲುವಾಗಿ ಹಾಕಲಾಗಿದ್ದ ಬಲೆಯಲ್ಲಿ ಚಿರತೆ ಸಿಕ್ಕಿಬಿದ್ದಿತ್ತು ಎಂದು ಹೇಳಲಾಗಿತ್ತು. ಅಷ್ಟೇಅಲ್ಲದೆ ಬಲೆಯಲ್ಲಿ ಬಿದ್ದ ನಂತರ ಬೆನ್ನು ಮತ್ತು ಹೊಟ್ಟೆಯ ಭಾಗಕ್ಕೆ ಬಲೆಯ ತಂತಿ ಬಿಗಿದು ನಿತ್ರಾಣಗೊಂಡಿತ್ತು. ಅರಣ್ಯ ಅಧಿಕಾರಿಗಳು ಅರವಳಿಕೆ ಮದ್ದು ನೀಡುವ ಮುನ್ನ ಓದ್ದಾಡಿ ಸಾವನ್ನಪ್ಪಿದೆ. ನ್ಯಾಯಾಧೀಶರ ಅಪ್ಪಣೆ ಮೇರೆಗೆ ಇಂದು ಸಾವನ್ನಪ್ಪಿದ್ದ ಚಿರತೆಯನ್ನು ಸುಡಲಾಗಿದೆ.

ಚಿರತೆ ಸಾವಿಗೆ ಕಾರಣ ಏನು ಗೊತ್ತಾ?
ಆನಗೋಡು ಅರಣ್ಯ ಪ್ರದೇಶದ ಸುತ್ತಲೂ ತಂತಿಯಿ0ದ ನಿರ್ಮಿಸಲ್ಪಡುವ ಫೆನ್ಸಿಂಗ್ ಹಾಕಲಾಗಿತ್ತು. ಫೆನ್ಸಿಂಗ್ ಮಧ್ಯೆ ಇರುವ ಸ್ಥಳದಲ್ಲಿ ಯಾರೋ ಆಸಾಮಿಗಳು ಹಂದಿಗಾಗಿ ಬಲೆ ಹಾಕಿದ್ದರು. ಬಲೆಗೆ ಬಿದ್ದ ಚಿರತೆ ಸುಮಾರು 10 ರಿಂದ 12 ಗಂಟೆ ಕಿರುಚಾಡಿ, ನೋವನ್ನು ಅನುಭವಿಸಿ ನಿತ್ರಾಣಗೊಂಡಿದೆ. ನಂತರ ಗಮನಿಸಿದ ಸ್ಥಳಿಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಹಂಪೆಯಿ0ದ ಬಂದ ಅರವಳಿಕೆ ತಜ್ಞರು ಚಿರತೆಗೆ ಅರವಳಿಕೆ ನೀಡಿ ಬೋನಿನಲ್ಲಿ ಇರಿಸಿದ್ದರು. ಚಿರತೆಯನ್ನು ಆನಗೋಡು ಮೃಗಾಲಯಕ್ಕೆ ತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಒಂದು ಗಂಟೆಯ ನಂತರ ಸಾವನ್ನಪ್ಪಿದೆ ಎಂದು ಆನಗೋಡು ವಲಯ ಅರಣ್ಯಾಧಿಕಾರಿ ದೇವರಾಜ್ ಗರುಡವಾಯ್ಸ್ ಗೆ ಮಾಹಿತಿ ನೀಡಿದ್ದಾರೆ.

garudavoice21@gmail.com 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!