ನಾಳೆ ನಾಡಿನ ದೊರೆ ಮಂಡಿಸಲಿರುವ ಬಜೆಟ್ ದಾವಣಗೆರೆ ಜನತೆಗೆ ಸಿಹಿ ಸುದ್ದಿ ನೀಡಲಿ. — ಬಾಡದ ಆನಂದರಾಜ್.

ದಾವಣಗೆರೆ ಮಾ 3 :- ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಲಿರುವ ಬಜೆಟ್ ನಲ್ಲಿ ದಾವಣಗೆರೆ ಜಿಲ್ಲೆಗೆ ಶಾಸಕ ರವೀಂದ್ರನಾಥ್ ಮತ್ತು ಸಂಸದ ಸಿದ್ದಣ್ಣನವರ ಆಶಯದಂತೆ ಸರ್ಕಾರಿ ಮೆಡಿಕಲ್ ಕಾಲೇಜ್.ಬಹುದಿನಗಳ ಕಾಲ ನೆನಗುದಿಗೆ ಬಿದ್ದಿರುವ ಅಶೋಕ ಟಾಕೀಸ್ ಹತ್ತಿರ ರೈಲ್ವೆ ಬ್ರಿಡ್ಜ್ ನ ಪರಿಹಾರ ಮತ್ತು ಮದ್ಯ ಕರ್ನಾಟಕದಲ್ಲೇ ಬಡವರಿಗೆ ಆಶ್ರಯವಾಗಿರುವ ಚಿಗಟೇರಿ ಸರ್ಕಾರಿ ಆಸ್ಪತ್ರೆಗೆ ಆಧುನೀಕರಣಗೊಳಿಸುವಂತೆ ಮತ್ತು ಮಹಾನಗರ ಪಾಲಿಕೆಗೆ ಐನೂರು ಕೋಟಿ ಹಣವನ್ನ ನೀಡುವಂತೆ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಯಿಯವರ ಚೊಚ್ಚಲ ಬಜೆಟ್ಟಿನಲ್ಲಿ ದಾವಣಗೆರೆ ಜನತೆ ನಿರೀಕ್ಷಿಸಲಾಗಿದೆ ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ್ ಮಾಧ್ಯಮಕ್ಕೆ ತಿಳಿಸಿದ್ದಾರೆ.