ಕಾನೂನು ಸುವ್ಯವಸ್ಥೆಗೆ ಸೈಕಲ್ ಸವಾರಿ; ಇದು ಶಿವಮೊಗ್ಗ ಖಾಕಿ ಗಮ್ಮತ್ತು

H M P Kumar
ಶಿವಮೊಗ್ಗ: ಕೋವಿಡ್ ಎರಡನೇ ಅಲೆ ಕರುನಾಡಿನಲ್ಲಿ ವ್ಯಾಪಾಕವಾಗಿ ತನ್ನ ಅಟ್ಟಹಾಸ ತೋರುತ್ತಿದೆ. ಇದರ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ಲಾಕ್ಡೌನ್ ಘೋಷಿಸಿ ಜಾರಿಗೊಳಿಸಿದೆ.

ಜನರ ಸಂಚಾರ ನಿಯಂತ್ರಣಕ್ಕೆ ವಾಹನಗಳನ್ನು ರಸ್ತೆಗಿಳಿಸದೆ ಅಗತ್ಯ ವಸ್ತುಗಳ ಖರೀದಿಗೆ ಕಾಲ್ನಡಿಗೆಯಲ್ಲೇ ಸಂಚರಿಸಿ ಎಂಬ ಆದೇಶವನ್ನು ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜನರ ರಕ್ಷಿಸುವ ಖಾಕಿ ಪಡೆ ಬೈಕ್, ಜೀಪ್ಗಳನ್ನು ಬಿಟ್ಟು ಸೈಕಲ್ನಲ್ಲಿ ಸಂಚರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ ಶಿವಮೊಗ್ಗ ಪೊಲೀಸರು.
ವಿನೋಬನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಉಮೇಶ್ ಕುಮಾರ್ ಅವರು ಸೈಕಲ್ ಸವಾರಿಗೆ ಮೊರೆ ಹೋಗಿದ್ದಾರೆ. ಮುಂಜಾನೆ ಎದ್ದು ಸೈಕಲ್ಲ್ಲಿ ತಮ್ಮ ಲಿಮಿಟ್ಸ್ ರೌಂಡ್ ಹೊಡೀತಾರೆ. ಲಾಕ್ಡೌನ್ ಸಮಯದಲ್ಲಿ ಯೂನಿಫಾರ್ಮ್ನಲ್ಲೇ ಸೈಕಲ್ ಸವಾರಿ. ದೂರ ಹೋಗಬೇಕಾದರೆ ಮಾತ್ರ ಅವರ ಗಾಡಿ ಬಳಕೆ ಮಾಡುತ್ತಾರೆ. ಸೈಕಲ್ ಪೊಲೀಸ್ ತಪಾಸಣಾ ಸ್ಥಳದಲ್ಲಿ ನಿಂತಿರುತ್ತೇ. ಅವರ ಠಾಣೆ ವ್ಯಾಪ್ತಿಯಲ್ಲಿ ಬೈಕ್, ಜೀಪ್ಗಳಿಗಿಂತ ಹೆಚ್ಚಾಗಿ ಸೈಕಲ್ಗಳೇ ಕಣ್ಣಿಗೆ ಕಾಣುತ್ತವೆ.