ಜಗಳೂರು ತಹಶೀಲ್ದಾರ್ ಕಚೇರಿಗೆ ಲೋಕಾಯುಕ್ತ ಎಸ್ಪಿ ಭೇಟಿ.! ಅಧಿಕಾರಿಗಳಿಗೆ ಚಳಿಬಿಡಿಸಿದ ಎಸ್ ಪಿ ಕೌಲಾಪುರ

ದಾವಣಗೆರೆ (ಜಗಳೂರು): ದಾವಣಗೆರೆ ಜಿಲ್ಲೆಯ ಲೋಕಾಯುಕ್ತ ಎಸ್. ಪಿ. ಎಂ ಎಸ್ ಕೌಲಾಪುರ ಹಾಗೂ ಅವರ ತಂಡ ಮಂಗಳವಾರ ಜಗಳೂರು ಪಟ್ಟಣದ ತಹಶೀಲ್ದಾರ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಹಶೀಲ್ದಾರ್ ಕಚೇರಿಯ ಆಹಾರ ವಿಭಾಗ, ಮುಜರಾಯಿ, ವೃದ್ಧಾಪ್ಯ ವೇತನ ವಿಭಾಗ, ಆಧಾರ್ ನೋಂದಣಿ, ಭೂ ಮಾಪನ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಕೊಠಡಿಯಲ್ಲಿ ಅರ್ಜಿಗಳ ಸ್ವೀಕೃತಿ ಕಡತ ಹಾಗೂ ಇತ್ಯರ್ಥ ಪಡಿಸಿದ ಅರ್ಜಿಗಳ ವಿವರದ ಕಡತಗಳನ್ನ ಇಂಚಿಂಚೂ ಪರಿಶೀಲನೆ ನಡೆಸಿದರು.
ಜಮೀನಿನ ಸರ್ವೆ ಮಾಡಲು ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಇದುವರೆಗೂ ಸರ್ವೆ ಕಾರ್ಯ ಕೈಗೊಂಡಿಲ್ಲ. ಹಣಕ್ಕೆ ಬೇಡಿಕೆ ಇಡುತ್ತಿದ್ದು, ವಿನಾಕಾರಣ ಸತಾಯಿಸುತ್ತಿದ್ದಾರೆ’ ಎಂದು ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮದ ಪೂಜಾರಿ ತಿಮ್ಮಪ್ಪ ಅವರು, ಇದಕ್ಕೆ ಗರಂ ಆದ ಎಸ್ ಪಿ ಅವರು ಸಂಬಂದಿಸಿದ ಕೆಸ್ ವರ್ಕ್ ಗೆ ಕ್ಲಾಸ್ ತೆಗೆದುಕೊಂಡರು. ಇನ್ನೂ ಅನೇಕರು ಇದೇ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.
“ಸರ್ಕಾರದ ಸೇವೆಯಲ್ಲಿರುವ ಅಧಿಕಾರಿಗಳು ನಿಗದಿತ ಸಮಯದಲ್ಲಿ ಸಾರ್ವಜನಿಕರ ಕೆಲಸಮಾಡಿಕೊಡದ ಜನರನ್ನು ಪೀಡಿಸುವುದು ಸರಿಯಲ್ಲ ಹಣ ಪಡೆಯುವ ದೂರು ಬಂದರೆ ಅಥವಾ ವಿಳಂಬ ಮಾಡಿದರೆ ನಿಮ್ಮ ವಿರುದ್ಧ ದೂರು ದಾಖಲು ಮಾಡಲಾಗುವುದು’ ಎಂದು ಲೋಕಾಯುಕ್ತ ಎಸ್ ಪಿ ಎಚ್ಚರಿಸಿದರು”
ಮಧ್ಯವರ್ತಿಗಳ ಅಧಿಕೃತ ಮಾಹಿತಿ ಕೊಟ್ಟಲ್ಲಿ ಕ್ರಮ ಕೈಗೊಳ್ಳಲಾಗುವುದು. ಉಥತಮ ಆಡಳಿತದ ಮೂಲಕ ಸಾರ್ವಜನಿಕರಿಗೆ ನ್ಯಾಯ ಒದಗಿಸುವುದು ನಮ್ಮ ನಿಮ್ಮ ಕರ್ತವ್ಯ ಯಾವುದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.
ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಕೌಲಾಪುರ, ಇನ್ಸ್ಪೆಕ್ಟರ್ ಅಂಜನೇಯ, ಹಾಗೂ ಸಿಬ್ಬಂದಿ ತಂಡದಲ್ಲಿ ಇದ್ದರು ಇದೇ ವೇಳೆಯಲ್ಲಿ ತಹಸೀಲ್ದಾರ್ ಸಂತೋಷ ಕುಮಾರ್ ಇದ್ದರು.