ಎಂ.ಪಿ. ರೇಣುಕಾಚಾರ್ಯ ಅವರ ಪ್ರವಾಸ ಕಾರ್ಯಕ್ರಮ

ದಾವಣಗೆರೆ : ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರು. ಮಾ.31 ರಿಂದ 04 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ರೇಣುಕಾಚಾರ್ಯ ಅವರು ಮಾ.31 ರಂದು ಹೊನ್ನಾಳಿಯಿಂದ ಹೊರಟು ಬೆ.10ಕ್ಕೆ ಅರಬಗಟ್ಟೆ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ ನೆರವೇರಿಸುವರು. ಬೆ.11ಕ್ಕೆ ನ್ಯಾಮತಿ ಶ್ರೀ ಮ.ನಿ.ಪ್ರ ಜಗದ್ಗುರು ಅಭಿನವ ಗವಿಸಿದ್ದೇಶ್ವರ ಮಹಸ್ವಮಿಗಳವರು, ಸಂಸ್ಥಾನ ಗವಿಮಠ, ಕೊಪ್ಪಳ ಇವರ ದಿವ್ಯಸನಿದ್ಯದಲ್ಲಿ ನಡೆಯುವ ಸಿದ್ದಗಂಗಾ-ಹೊನ್ನಾಳಿ ಹಿರೇಕಲ್ಮಠ ಹಾಗೂ ರಾಂಪುರ ಶ್ರೀಗಳವರ ಪುಣ್ಯ ಸ್ಮರಣೆ ಕಾರ್ಯಕ್ರಮ ಹಾಗೂ ಶ್ರೀ ಪೇಟೆ ಬಸವೇಶ್ವರ ಸಮುದಾಯ ಭವನ ಕಟ್ಟಡ ಕಾರ್ಯದ ಬಲವರ್ಧನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.01ಕ್ಕೆ ಹೊನ್ನಾಳಿ ತಾಲ್ಲೂಕು ಕಛೇರಿಯಲ್ಲಿ ಬಾಬು ಜಗಜೀವನ್ ರಾಮ್ ಹಾಗೂ ಡಾ.ಬಿ,ಆರ್. ಅಂಬೇಡ್ಕರ್ ಜಯಂತಿ ಆಚರಣೆ ಕುರಿತು ಸಭೆ ನಡೆಸುವರು. ಅದೇ ದಿನ ಸ.06ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.
ರೇಣುಕಾಚಾರ್ಯ ಅವರು ಏ.01 ರಂದು ಬೆಂಗಳೂರಿನಿಂದ ಹೊರಟು ಬೆ.10ಕ್ಕೆ ತುಮಕೂರು ಪದ್ಮಭೂಷಣ ,ಕರ್ನಟಕ ರತ್ನ , ಬಸವಶ್ರೀ ಪ್ರಶಸ್ತಿ ಪುರಸ್ಕøತರು, ತ್ರಿವಿದ ದಾಸೋಹಿಗಳು ಶೀ ಮ.ನಿ.ಪ್ರ. ಸ್ವರೂಪಿ ಡಾ.ಶಿವಕುಮಾರ ಮಹಾಶಿವಯೋಗಿಯವರ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅದೇ ದಿನ ರಾತ್ರಿ 07ಕ್ಕೆ ಹೊನ್ನಳಿಗೆ ಪ್ರಯಾಣ ಮತ್ತು ವಾಸ್ತವ್ಯ ಮಾಡುವರು.
ಏ.02 ರಂದು ಹೊನ್ನಾಳಿಯಿದ ಹೊರಟು ಬೆ.11 ರಿಂದ ಸ.07ರ ವರೆಗೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಗಳ ಗ್ರಾಮಗಳಗೆ ಭೇಟಿ ನೀಡುವುದು, ನಂತರ ಹೊನ್ನಾಳಿ ಪ್ರಯಾಣ ಮತ್ತು ವಾಸ್ತವ್ಯ ಮಾಡುವರು. ಏ.03 ರಂದು ಹೊನ್ನಾಳಿಯಿಂದ ಹೊರಟು ಬೆ.11ಕ್ಕೆ ಬೀರಗೊಂಡನಹಳ್ಳಿ ಗ್ರಾಮದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆ.11.30 ರಿಂದ ಸ.04 ರವರೆಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಗಳ ಗ್ರಾಮಗಳಿಗೆ ಬೇಟಿ ನೀಡುವರು. ಸ.5ಕ್ಕೆ ಕುಂಕುವಾ ಗ್ರಾಮದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸ.07ಕ್ಕೆ ಶಿಕಾರಿಪುರದ ಗ್ರಾಮದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾ.8.30ಕ್ಕೆ ಹೊನ್ನಾಳಿ ಪ್ರಯಾಣ ಮತ್ತು ವಾಸ್ತವ್ಯ.
ಏ.04 ರಂದು ಹೊನ್ನಾಳಿಯಿಂದ ಹೊರಟು ಬೆ.11ಕ್ಕೆ ಹೊನ್ನಾಳಿಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮತ್ತು ಅವರ ಅವಲಂಬಿತರ ಆರೋಗ್ಯ ತಪಾಸಣೆ ಶಿಬಿರದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆ.11.30ಕ್ಕೆ ಹತ್ತೂರು ಗ್ರಮದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಸಂಕುಸ್ಥಾಪನೆ ನೆರವೇರಿಸುವರು. ಮ.12.30ಕ್ಕೆ ಮಾದೇನಹಳ್ಳಿ ಗ್ರಾಮದಲ್ಲಿ ಅಂಗನವಾಡಿ, ಪಶುಆಸ್ಪತ್ರೆ ಉದ್ಘಾಟನೆ ಮತ್ತು ಪರಿಶಿಷ್ಟ ಜಾತಿ ಜನಾಂಗದ ಕಾಲೋನಿಯಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸುವರು. ಮ.1.15ಕ್ಕೆ ಮಾದನಬಾವಿ ಗ್ರಾಮದಲ್ಲಿ ರಂಗಮಂದಿರ ಉದ್ಘಾಟನೆ ಮತ್ತು ಸಿ.ಸಿ ರಸ್ತೆ ಕಾಮಗರಿಯ ಶಂಕುಸ್ಥಾಪನೆ ನೆರವೇರಿಸುವರು.
ಮ.02ಕ್ಕೆ ಬಸವನಹಳ್ಳಿ ಗ್ರಾಮದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಸಂಕುಸ್ಥಾಪನೆ ನೆರವೇರಿಸುವರು. ಮ.2.45ಕ್ಕೆ ಅರಬಗಟ್ಟೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನಾಂಗದ ಕಾಲೋನಿಯಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸುವರು. ಮ.03ಕ್ಕೆ ಹೊನ್ನಾಳಿಗೆ ಪ್ರಯಾಣ ಮತ್ತು ಸಾರ್ವಜನಿಕರ ಕುಂದುಕೊರತೆಗಳ ಆಹ್ವಾಲುಗಳನ್ನು ಸ್ವೀಕರಿಸುವರು. ಅದೇ ದಿನ ರಾ.09ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.