ಹಿರೇ ಮದಕರಿ ನಾಯಕರ ಸಮಾಧಿಯನ್ನು ಅಭಿವೃದ್ಧಿಪಡಿಸಲು ಸಂಸದರಿಂದ ಭರವಸೆ, ಸಂಸದರಿಗೆ ನಾಯಕ ಸಮುದಾಯದ ವತಿಯಿಂದ ಅಭಿನಂದನೆ

ದಾವಣಗೆರೆ: ಅಕ್ಟೋಬರ್ 17 ರಂದು ಜಿಲ್ಲಾಡಳಿತದ ವತಿಯಿಂದ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣಮಂಟಪದಲ್ಲಿ ನಡೆದ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ದಾವಣಗೆರೆಯ ಸಂಸದರಾದ ಡಾ॥ ಪ್ರಭಾ ಮಲ್ಲಿಕಾರ್ಜುನ್‌ರವರು ಮಾಯಕೊಂಡದ ಹಿರೇಮದಕರಿ ನಾಯಕರ ಸಮಾಧಿಯನ್ನು ಜೀರ್ಣೋದ್ಧಾರ ಮಾಡಿ ಅಭಿವೃದ್ಧಿಪಡಿಸಿ ಸುಂದರ ಪ್ರವಾಸಿ ತಾಣವನ್ನಾಗಿಸಲು ದಾವಣಗೆರೆಯ ಜಿಲ್ಲಾ ಉಸ್ತುವಾರಿ ಮಂತ್ರಿಗಳೊಂದಿಗೆ ಶ್ರಮಿಸುವುದಾಗಿ ಘೋಷಿಸಿದ್ದು, ಇದು ಕೇವಲ ದಾವಣಗೆರೆಯ ನಾಯಕ ಸಮುದಾಯಕ್ಕೆ ಮಾತ್ರವಲ್ಲದೆ ನಾಡಿನ ಸಮಸ್ತ ನಾಯಕ ಸಮುದಾಯಕ್ಕೂ ಸಂತಸದ ವಿಚಾರವಾಗಿದ್ದು, ನಾಡಿನ ನಾಯಕ ಸಮುದಾಯದ ಪರವಾಗಿ ಸಂಸದರಾದ ಡಾ॥ ಪ್ರಭಾ ಮಲ್ಲಿಕಾರ್ಜುನ್‌ರವರನ್ನು ಅಭಿನಂದಿಸುತ್ತಿದ್ದೇನೆ.ಹಾಗೂ ಜಿಲ್ಲಾ ನಾಯಕ ಸಮುದಾಯದ ವತಿಯಿಂದ ಶೀಘ್ರವೇ ಅವರನ್ನು ಸನ್ಮಾನಿಸಲಾಗುವುದು ಎಂದು ನಾಯಕ ಸಮುದಾಯದ ಯುವ ಮುಖಂಡರು ತಿಳಿಸಿದ್ದಾರೆ.

ದಶಕಗಳ ಕಾಲ ನಿರಂತರವಾಗಿ ಒತ್ತಾಯಿಸಿದರೂ, ಉಪವಾಸ ಸತ್ಯಾಗ್ರಹ ಮಾಡಿದರೂ ಈ ವಿಚಾರವಾಗಿ ಈ ಹಿಂದಿನ ಸಂಸದರಿಂದ ಮಾಯಕೊಂಡದ ಹಿರೇಮದಕರಿ ನಾಯಕರ ಸಮಾಧಿ ವಿಚಾರವಾಗಿ ಅಭಿವೃದ್ಧಿಯ ಯಾವುದೇ ಉಪಯೋಗವಾಗಲಿಲ್ಲ. ಆದರೆ ಕೇವಲ ಒಂದೇ ಒಂದು ಮನವಿಗೆ ಸ್ಪಂದಿಸಿರುವ ಸಂಸದರಾದ ಡಾ॥ ಪ್ರಭಾ ಮಲ್ಲಿಕಾರ್ಜುನ್‌ರವರು ನಿಜಕ್ಕೂ ಅಭಿನಂದನಾರ್ಹರಾಗಿದ್ದು, ಇಂತಹ ಸಂಸದರು ನಮ್ಮ ಜಿಲ್ಲೆಗೆ ಸಿಕ್ಕಿರುವುದು ನಿಜಕ್ಕೂ ದೀನದಲಿತರಿಗೆ, ಅವಕಾಶ ವಂಚಿತರಿಗೆ ಹೆಮ್ಮೆಯ ವಿಚಾರವಾಗಿದ್ದು, ಮುಂದಿನ ದಿನಗಳಲ್ಲಿ ಇವರು ರಾಜಕಾರಣದಲ್ಲಿ ಇನ್ನೂ ದೊಡ್ಡ ಹುದ್ದೆಗಳನ್ನು ಅಲಂಕರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ದಶಕಗಳ ಸಮುದಾಯದ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿರುವ ಸಂಸದರಿಗೆ ಹೃದಯಪೂರ್ವಕ ಅಭಿನಂದನೆಗಳು ಅಂಜು ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!