ಕೊವಿಡ್ ಲಾಕ್ ಡೌನ್ ಹಿನ್ನೆಲೆ, ದಾವಣಗೆರೆಯಲ್ಲಿ ಸರಳವಾಗಿ ಮಹಾವೀರ ಜಯಂತಿ ಆಚರಣೆ

ದಾವಣಗೆರೆ: ಇಂದು ಮಹಾವೀರ್ ಜಯಂತಿ ಹಿನ್ನೆಲೆ, ದಾವಣಗೆರೆ ನಗರದ ನರಸರಾಜ ರಸ್ತೆ ಯಲ್ಲಿರುವ ಪಾರ್ಶ್ವನಾಥ್ ದಿಗಂಬರ ಜೈನ್ ಮಂದಿರದಲ್ಲಿ ಅಹಿಂಸೆಯೆ ಪರಮಧರ್ಮ ಎಂದು ಜಗತ್ತಿಗೇ ಶಾಂತಿ ಸಾರಿದ ಭಗವಾನ್ ಮಹಾವೀರ 2620ನೇ ಜನ್ಮ ಕಲ್ಯಾಣದ ಕಾರ್ಯಕ್ರಮವನ್ನು ಸರಳವಾಗಿ ಸ್ವಾಮಿ ಗೆ ಅಭಿಷೇಕ, ನಾಮಕರಣ, ಹಾಗೂ ಮಂದಿರದಲ್ಲಿ ಪಲ್ಲಕ್ಕಿ ಉತ್ಸವವನ್ನು ಇಂದು ಮುಂಜಾನೆ ನೆರವೇರಿಸಲಾಯಿತು. ಕಾರ್ಯಕ್ರಮ ವನ್ನು ದಿಗಂಬರ ಜೈನ ಸಮಾಜದ ಮಹಾವೀರ ಯುವ ಮಂಚ್ ನ ಅಧ್ಯಕ್ಷರಾದ ಜಿತೇಂದ್ರ ಬೇತೂರ್,ಜಿನೇಶ್, ಮಹೇಂದ್ರ ಹೂಳಲು, ಸಂತೋಷ್ ಮಂಗಾಜ್, ವಿಜಯ್ ಕುಮಾರ್ ಎಸ್,ಬಿ,(ಜೈನ್ ) ಹಾಗೂ ಶ್ರವಕ ಶ್ರವಕಿಯರು ಹಾಜರಿದ್ದರು.