ಮಲೇಬೆನ್ನೂರು ಪೊಲೀಸರಿಂದ ಅಂತರ್ ಜಿಲ್ಲೆಯ ಮೂವರು ಕಳ್ಳರ ಬಂಧನ, 3 ಜನ ಆರೋಪಿತರು ಸೇರಿ 10 ಲಕ್ಷ ಸ್ವತ್ತು ವಶ

ಮಲೇಬೆನ್ನೂರು: ಮಲೇಬೆನ್ನೂರು ಪೊಲೀಸರು 03 ಜನ ಆರೋಪಿತರನ್ನು ಬಂಧಿಸಿ, ಆರೋಪಿತರಿಂದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪೊಲೀಸ್ ಠಾಣೆಯ 09 ಪ್ರಕರಣಗಳು, ದಾವಣಗೆರೆ ನಗರದ ಕೆ.ಟಿ.ಜೆ ನಗರದ 04 ಪ್ರಕರಣಗಳು, ಹೊನ್ನಾಳಿ ಪೊಲೀಸ್ ಠಾಣೆಯ 02 ಪ್ರಕರಣಗಳು ಹಾಗೂ ದಾವಣಗೆರೆ ನಗರದ ಬಡಾವಣೆ ಠಾಣೆ, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಪೊಲೀಸ್ ಠಾಣೆಯ ತಲಾ 01 ಪ್ರಕರಣದಂತೆ ಒಟ್ಟು 18 ಪ್ರಕರಣಗಳನ್ನು ಭೇದಿಸಿ, 7,41,500/- ರೂ ಬೆಲೆ ಬಾಳುವ 14 ಬೈಕುಗಳನ್ನು ಮತ್ತು 2,00,000/- ರೂ ಬೆಲೆ ಬಾಳುವ 01 ಓಮ್ನ ವ್ಯಾನ್ ಹಾಗೂ 66,500/ ರೂ ನಗದು ಹಣ (ಒಟ್ಟು 10,08,000/-) ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಪತ್ತೆ ಕಾರ್ಯವನ್ನು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಾನ್ಯ ಶ್ರೀ ಸಿ.ಬಿ ರಿಷ್ಯಂತ್ ಐ.ಪಿ.ಎಸ್ ಇವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರರಾದ ಮಾನ್ಯ ಶ್ರೀ ಆರ್.ಬಿ ಬಸರಗಿ ಇವರ ಮಾರ್ಗದರ್ಶನದಲ್ಲಿ, ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಮಾನ್ಯ ಶ್ರೀ ಬಿ.ಎಸ್. ಬಸವರಾಜ್ ರವರ ನೇತೃತ್ವದಲ್ಲಿ, ಹರಿಹರ ವೃತ್ತ ನಿರೀಕ್ಷಕರಾದ ಶ್ರೀ ಸತೀಶಕುಮಾರ್. ಯು. ಮತ್ತು ಪಿ.ಎಸ್.ಐ ರವರಾದ ಶ್ರೀ ರವಿಕುಮಾರ್, ಶ್ರೀ ಶಂಕರಗೌಡ ಪಾಟೀಲ್ ಸಿಬ್ಬಂದಿಯವರಾದ ಪ್ರೊ.ಪಿ.ಎಸ್.ಐ ಶ್ರೀ ಶ್ರೀಪತಿ ಗಿನ್ನಿ, ಎ.ಎಸ್.ಐ ರವರಾದ ಶ್ರೀ ಬಸವರಾಜ್, ಪಾಲಾಕ್ಷಿ ಡಿ.ಟಿ, ಡಿ.ಟಿ ಶ್ರೀನಿವಾಸ, ಶಿವಕುಮಾರ್, ವೆಂಕಟೇಶ್, ಫೈರೋಜ್ ಖಾನ್ ಎಂ, ವೆಂಕಟರಮಣ, ಲಕ್ಷ್ಮಣ, ರಾಜಪ್ಪ ಎಸ್.ಬಿ, ವಿನಾಯಕ, ಸತೀಶಕುಮಾರ್, ರಾಘವೇಂದ್ರ ಬಂಡಾರಿ, ರಾಜಶೇಖರ್, ಸಂತೋಷಕುಮಾರ್, ನಾಗಪ್ಪ, ಶಿವಕುಮಾರ್, ಹನುಮಂತರೆಡ್ಡಿ, ರಂಗಪ್ಪ, ಗುತ್ತೆಪ್ಪ, ಮಲ್ಲಿಕಾರ್ಜುನ, ಮೂರ್ತಿ, ರಾಜಪ್ಪ ಮುರುಳಿಧರ್ ತಾಂತ್ರಿಕ ವಿಭಾಗದ ರಾಘವೇಂದ್ರ, ಶಾಂತರಾಜ್, ಉಮೇಶ್ ಇವರ ತಂಡ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಪತ್ತೆ ಕಾರ್ಯ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.