ಮಳೆಯಿಂದ 500 ಎಕರೆಗೂ ಹೆಚ್ಚು ಹಾನಿ: ಹಾನಿ ಪ್ರದೇಶಗಳಿಗೆ ಶಾಸಕರ ಬೇಟಿ

IMG-20210724-WA0012

 

ಹಾವೇರಿ: ರಾಣೇಬೆನ್ನೂರು ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಅತಿವೃಷ್ಠಿಯಿಂದಾಗಿ 500 ಎಕರೆಗೂ ಹೆಚ್ಚಿನ ಜಮೀನು ಜಲಾವೃತಗೊಂಡಿದ್ದು, ಅಲ್ಲಲ್ಲಿ ಮನೆಗಳು ಕುಸಿದು ಭಾರೀ ನಷ್ಟ ಸಂಭವಿಸಿದೆ.

ರಾಜ್ಯದಲ್ಲಿ ಕಳೆದ ಒಂದಹ ವಾರದಿಂದ ವರುಣಾರ್ಭಟದಿಂದ ತುಂಗಭದ್ರಾ ನದಿ ನೀರಿನ ಮಟ್ಟ ಹೆಚ್ಚಳಗೊಂಡಿದೆ. ಹಲವು ಕಡೆಗಳಲ್ಲಿ ಮನೆಗಳು ಜಖಂಗೊಂಡಿವೆ. ವಿವಿಧೆಡೆ ಪ್ರವಾಹದ ಭೀತಿ ಉಂಟಾಗಿದೆ.

ಇಂದು ರಾಣೆಬೆನ್ನೂರು ಶಾಸಕ ಅರುಣಕುಮಾರ್ ತಮ್ಮ ಮತಕ್ಷೇತ್ರದ ವ್ಯಾಪ್ತಿಯ ನದಿಪಾತ್ರದ ಲಿಂಗದಹಳ್ಳಿ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿಕೊಟ್ಟು, ಅಲ್ಲಿ ಆದಂತಹ ಅನಾನುಕೂಲತೆಗಳ ಬಗ್ಗೆ ಖುದ್ದು ವೀಕ್ಷಿಸಿ, ಅಧಿಕಾರಿಗಳಿಗೆ ಈ ಕೂಡಲೇ ತೊಂದರೆಗೀಡಾದವರಿಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಅಂಕೋಲಾ ದಲ್ಲಿ ಮಳೆಗೆ ಮನೆ ನೆಲಸಮ ವಿಡಿಯೋ ನೋಡಿ

ಅಂಕೋಲಾದ ಒಂದು ಹಳ್ಳಿಯಲ್ಲಿ ಭಾರೀ ಮಳೆಗೆ ಮನೆಯೊಂದು ನೆಲ ಕಚ್ಚಿದ ವಿಡಿಯೋ ಕಂಡು ಮನಸ್ಸು ಮರುಗಿತು. ನಮಗೇ ಹೀಗೆ ಆದರೆ ಬಾಳಿ ಬದುಕಿದ ಮನೆಯೊಂದು ಕಣ್ಣೆದುರೇ ಪುಡಿಯಾದದ್ದನ್ನು ನೋಡಿದ ಮನೆಯವರಿಗೆ ಹೇಗಾಗಿರಬೇಡ? ಈ ಸಲದ ಮಳೆ ಏನೇನು ಅನಾಹುತ ಮಾಡಲಿದೆಯೋ? ಶಿರಸಿಯಲ್ಲಂತೂ ನೀರು ತುಂಬಿದ ಫೋಟೋಗಳನ್ನು ನೋಡಿದರೆ ಭಯವಾಗುತ್ತಿದೆ ಎಂದು ಜನರು ಕಳವಳ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!