ಮಳೆಯಿಂದಾಗಿ ಕೆಳಗೆ ಬಿದ್ದ ಐತಿಹಾಸಿಕ ತಂಗುದಾಣ -ಮಳೆ ನಿಲ್ಲುವವರೆಗೂ ಉಚ್ಚಂಗೆಮ್ಮ ದರ್ಶನಕ್ಕೆ ಬರಬೇಡಿ – ಆಡಳಿತಾಧಿಕಾರಿ

ಹರಪನಹಳ್ಳಿ ( ಉಚ್ಚಂಗಿದುರ್ಗ): ನೂರಾರು ವರ್ಷಗಳ ಇತಿಹಾಸ ಹೊಂದಿರುವ ಐತಿಹಾಸಿಕ ತಂಗುದಾಣ ನಿರಂತರವಾಗಿ ಸುರಿದ ಮಳೆಗೆ ಕೆಳಗೆ ಬಿದ್ದಿದೆ ರಾಜರ ಕಾಲದಲ್ಲಿ ಗುಡ್ಡ ಹತ್ತುವಾಗ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸಣ್ಣ ತಂಗುದಾಣವನ್ನು ಮಾಡಲಾಗಿತ್ತು.
ಈ ವೇಳೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಉಚ್ಚoಗೇಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದ ಗುಡ್ಡದ ಮೇಲೆ ನಿರಂತರವಾಗಿ ಮಳೆಯಿಂದಾಗಿ ಮಣ್ಣು ನೆನೆದು ಶಿಖರದ ಮೇಲಿಂದ ಕಲ್ಲುಗಳು ಉರಳುತ್ತಿರುವುದರಿಂದ ಮತ್ತು ಕೋಟೆಯ ಕಲ್ಲುಗಳು ಬೀಳುವ ಸಾಧ್ಯತೆ ಹೆಚ್ಚು ಇರುವುದರಿಂದ ಶ್ರೀ ಉಚ್ಚoಗೆಮ್ಮ ನ ಭಕ್ತರಿಗೆ ತೊಂದರೆಯಾಗಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ಮಳೆ ನಿಲ್ಲುವವರೆಗೂ ದೇವಿಯ ದರ್ಶನಕ್ಕೆ ಆಗಮಿಸದಂತೆ ಮನವಿ ಮಾಡಿದ್ದಾರೆ.