ದಾವಣಗೆರೆಯಲ್ಲಿ 15 ಸಾವಿರ ಮೊತ್ತದ ಗಾಂಜಾ ವಶ – ಆರೋಪಿ ಬಂಧನ

ದಾವಣಗೆರೆ: ಅಬಕಾರಿ ತಂಡ ನಗರದ ಶಾಮನೂರು ರಸ್ತೆಯಲ್ಲಿ ಡಿ.೨೧ ರಂದು ದಾಳಿ ನಡೆಸಿ ದ್ವಿಚಕ್ರ ವಾಹನದಲ್ಲಿ ಮಾರಾಟ ಅನಧಿಕೃತವಾಗಿ ಮಾರಾಟಮಾಡುತ್ತಿದ್ದ ರೂ.೧೫ ಸಾವಿರ ಮೊತ್ತದ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದೆ.
ಸಿದ್ದವೀರಪ್ಪ ಬಡಾವಣೆಯ ಪ್ರಭಾಕರ್ ಬಿನ್ ಚಂದ್ರಪ್ಪ ಎಂಬಾತ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ೧೭೪ ಗ್ರಾಂ ಹೂವು, ಬೀಜ, ಕಡ್ಡಿ ಮಿಶ್ರೀತವಾದ ಒಣ ಗಾಂಜಾವನ್ನು ಮಾರಾಟ ಮಾಡುವ ಸಮಯದಲ್ಲಿ ಪತ್ತೆ ಹಚ್ಚಿ ವಾಹನ ಮತ್ತು ಗಾಂಜಾವನ್ನು ಇಲಾಖಾ ವಶಕ್ಕೆ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಎನ್ ಡಿ ಪಿ ಎಸ್ ಪದಾರ್ಥಗಳ ಅಂದಾಜು ರೂ.೧೫೦೦೦ ಮೊತ್ತದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ, ಅಬಕಾರಿ ಉಪ ಆಯುಕ್ತ ಬಿ. ಶಿವಪ್ರಸಾದ್ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ರವಿ ಎಂ ಮರಿಗೌಡ್ರ, ಅಬಕಾರಿ ನಿರೀಕ್ಷಕರಾದ ಸವಿತಾ.ಹೆಚ್, ಉಪನಿರೀಕ್ಷಕರಾದ ಸಿ.ಆರ್ ರಂಗಸ್ವಾಮಿ ಅವರು ದಾಳಿ ನಡೆಸಿದ್ದರು.