ಬಜೆಟ್ ಕುರಿತು ಸಚಿವರಾದ ಕೆ ಎಸ್ ಈಶ್ವರಪ್ಪನವರ ಅಭಿಪ್ರಾಯ ಹಾಗೂ 2022-23ನೇ ಸಾಲಿನ ಕೇಂದ್ರ ಬಜೆಟ್ ಮುಖ್ಯಾಂಶಗಳು.

ಬೆಂಗಳೂರು: ಇಂದು ಮಂಡಿಸಿದ ಬಜೆಟ್ ದೂರದೃಷ್ಠಿ ಬಜೆಟ್ ಆಗಿದ್ದು, ಕೈಗಾರಿಕಾ ಕ್ಷೇತ್ರ, ಮೂಲಭೂತ ಸೌಕರ್ಯ ಮತ್ತು ತಂತ್ರಜ್ಞಾನ ಅಳವಡಿಕೆ ಮೂಲಕ ಎಲ್ಲಾ ವರ್ಗದ ಜನರ ಜೀವನಮಟ್ಟ ಸುಧಾರಣೆಗೆ ಒತ್ತು ನೀಡಲಾಗಿರುವುದನ್ನು ಸ್ವಾಗತಿಸುತ್ತೇನೆ ಮಾನ್ಯ ಗ್ರಾಮೀಣಾಭಿವೃಧ್ದಿ ಮತ್ತು
ಪಂಚಾಯತ್ ರಾಜ್ ಸಚಿವರಾದ
ಶ್ರೀ ಕೆ ಎಸ್ ಈಶ್ವರಪ್ಪರವರು
ತಿಳಿಸಿದ್ದಾರೆ.
2022-23ನೇ ಸಾಲಿನ ಕೇಂದ್ರ ಬಜೆಟ್ ಮುಖಾಂಶಗಳು
* ಪ್ರಸಕ್ತ ಸಾಲಿನ ಆರ್ಥಿಕ ಬೆಳವಣಿಗೆ ದರ 9.02%
* ಕೋವಿಡ್ ಹಿನ್ನೆಲೆಯಲ್ಲಿಯೂ ಸಹ ದೇಶ ಆರ್ಥಿಕ ಚೇತರಿಕೆ ಕಂಡುಕೊAಡಿದೆ. 2021-22ನೇ ಸಾಲಿನಲ್ಲಿ ಬಜೇಟ್ ಗಾತ್ರ 34.83 ಲಕ್ಷ ಕೋಟಿ ಇದ್ದು, 2022-23ಕ್ಕೆ 39.45 ಲಕ್ಷ ಕೋಟಿ ಆಗಿರುವುದೇ ಆರ್ಥಿಕ ಚೇತರಿಕೆಗೆ ಉದಾಹರಣೆ.
* ಬಂಡವಾಳ ಸೃಷ್ಟಿ ಹಾಗೂ ಉದ್ಯೋಗ ಸೃಷ್ಠಿಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೇಕ್ ಇನ್ ಇಂಡಿಯಾ, ಆತ್ಮ ನಿರ್ಬರ್ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಿದೆ. ಇದರಿಂದ 60 ಲಕ್ಷ ಹೊಸ ಉದ್ಯೋಗಗಳು ಸೃಷ್ಠಿಯಾಗುತ್ತಿದೆ.
* ಪ್ರಧಾನ ಮಂತ್ರಿಗಳ ಗತಿಶಕ್ತಿ ಯೋಜನೆಯಡಿ 7 ಪ್ರಮುಖ ಕ್ಷೇತ್ರಗಳ ಅಬಿವೃದ್ಧಿಗೆ ಆಧ್ಯತೆ. ರಸ್ತೆ, ಸಾರಿಗೆ, ವಾಯು ಸಾರಿಗೆ, ರೈಲ್ವೇ, ವಿದ್ಯುತ್ ಇತ್ಯಾಧಿ.
* ಈ ಸಾಲಿನಲ್ಲಿ ಹೊಸದಾಗಿ 400 ವಂದೇ ಮಾತರಂ ರೈಲಗಳು ಸೇರ್ಪಡೆಯಾಗುತ್ತಿದೆ. 2000 ಸಾವಿರ ಕಿ.ಮೀ. ರೈಲ್ವೇ ನೆಟ್ವರ್ಕನ್ನು ಆಧುನೀಕ ತಂತ್ರಜ್ಞಾನ ಬಳಸಿ ಅಬಿವೃದ್ಧಿಪಡಿಸಲಾಗುವುದು.
* ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅತಿ ಹೆಚ್ಚು ಆರ್ಥಿಕ ನೆರವು ನೀಡಲಾಗಿದೆ.
* ರೈತರ ಉತ್ಪನ್ನಗಳಿಗೆ ಎಂದಿನಂತೆ ಉತ್ತೇಜನ ನೀಡಿದ್ದು, ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ (ಎಂ.ಎಸ್.ಪಿ) 2.37 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ.
* ಕಾವೇರಿ ನದಿ ಸೇರಿದಂತೆ 5 ನದಿಗಳ ಜೋಡಣೆಗೆ ಯೋಜನೆ ರೂಪಿಸುವ ಬಗ್ಗೆ ಘೋಷಿಸಿದೆ.
* ಕಳೆದ ಎರಡು ವರ್ಷಗಳು ಶಾಲಾ ಮಕ್ಕಳಿಗೆ ಆಗಿರುವ ನಷ್ಠವನ್ನು ಭರ್ತಿ ಮಾಡಲ ವಿಶೇಷವಾಗಿ ಸರ್ಕಾರಿ ಶಾಲೆಗಳ ಆಧುನೀಕರಣ ಮತ್ತು ಸಪ್ಲಿಮೆಂಟರಿ ಶಿಕ್ಷಣಕ್ಕೆ ತಂತ್ರಜ್ಞಾನ ಬಳಕೆ ಮೂಲಕ ಮಕ್ಕಳ ಕಲಿಕೆ ಹೆಚ್ಚಿಸಲ ಕಾರ್ಯಕ್ರಮ ರೂಪಿಸಿದೆ.
* ಗ್ರಾಮೀಣ ಭಾಗದ 2 ಲಕ್ಷ ಅಂಗನವಾಡಿಗಳನ್ನು ತಂತ್ರಜ್ಞಾನ ಅಳವಡಿಕೆ ಮೂಲಕ ಸ್ಮಾರ್ಟ್ ಅಂಗನವಾಡಿಗಳನ್ನಾಗಿ ಪರಿವರ್ತಿಸಲಾಗುವುದು.
* ಗ್ರಾಮೀಣ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜೆ.ಜೆ.ಎಂ. ಯೋಜನೆಗೆ 2021-22 ಸಾಲಿನಲ್ಲಿ 50 ಸಾವಿರ ಕೋಟಿ ಇದ್ದು, ಅದನ್ನು 2022-23ನೇ ಸಾಲಿನಲ್ಲಿ 60 ಸಾವಿರ ಕೋಟಿಗೆ ಏರಿಸಲಾಗಿದ್ದು, ಹೊಸದಾಗಿ 3.8 ಕೋಟಿ ಮನೆಗಳಿಗೆ ನಳದ ಮೂಲಕ ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ.
* ಸೌರ ವಿದ್ಯುತ್ ಕ್ಷೇತ್ರಕ್ಕೆ 19.500 ಕೋಟಿ ಹಂಚಿಕೆ ಮಾಡಿದ್ದು, ಗ್ರಾಮೀಣ ಭಾಗಕ್ಕೆ ಸೋಲಾರ್ ಅಳವಡಿಕೆಗೆ ಉತ್ತೇಜನ ಕಲ್ಪಿಸಲಾಗಿದೆ.
* ಒಟ್ಟಾರೆ ಇದು ದೂರದೃಷ್ಠಿ ಬಜೆಟ್ ಆಗಿದ್ದು, ಕೈಗಾರಿಕಾ ಕ್ಷೇತ್ರ, ಮೂಲಭೂತ ಸೌಕರ್ಯ ಮತ್ತು ತಂತ್ರಜ್ಞಾನ ಅಳವಡಿಕೆ ಮೂಲಕ ಎಲ್ಲಾ ವರ್ಗದ ಜನರ ಜೀವನಮಟ್ಟ ಸುಧಾರಣೆಗೆ ಒತ್ತು ನೀಡಲಾಗಿರುವುದನ್ನು ಸ್ವಾಗತಿಸುತ್ತೇನೆ.