ಯಶಸ್ವಿನಿಗೆ ಮಿಸ್ ಮಂಗಳೂರು ರನ್ನರ್ ಅಪ್ ಪ್ರಶಸ್ತಿ 

ದಾವಣಗೆರೆ: ಈಚೆಗೆ ಮಂಗಳೂರಿನಲ್ಲಿ ಎನ್ ಬಿ ಗ್ರೂಪ್ ವತಿಯಿಂದ ನವೀನ್ ಬಿಲ್ಲವ ಅವರ ನೇತೃತ್ವದಲ್ಲಿ ನಡೆದ ‘ಮಿಸ್ ಮಂಗಳೂರು’ ಸ್ಪರ್ಧೆಯಲ್ಲಿ ದಾವಣಗೆರೆಯ ಕು. ಯಶಸ್ವಿನಿ ಕೆ.ವಿ. ಆಚಾರ್ ಮೊದಲನೇ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಅಂತಿಮ ಹಂತದಲ್ಲಿದ್ದ 32 ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ. ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ಮಾಡುತ್ತಿರುವ ಯಶಸ್ವಿನಿಯವರು ಭರತನಾಟ್ಯ ಕಲಾವಿದರು ಕೂಡ ಹೌದು. ವಿದ್ವಾನ್ ರಾಜಗೋಪಾಲ ಭಾಗವತರು ಹಾಗೂ ವಿದುಷಿ ಪೂರ್ಣಿಮಾ ಭಾಗವತರವರ ಮೆಚ್ಚಿನ  ಶಿಷ್ಯೆಯಾಗಿ ಭರತನಾಟ್ಯದಲ್ಲೂ ವಿದ್ವತ್ ಪದವಿ ಪಡೆದ ಬಹುಮುಖ ಪ್ರತಿಭೆ.


ಯಶಸ್ವಿನಿ ಅವರು ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ವಿಶ್ವನಾಥಾಚಾರ್ ಹಾಗೂ ಜಿ. ಪುಷ್ಪಲತಾ ದಂಪತಿ ಸುಪುತ್ರಿ.

Leave a Reply

Your email address will not be published. Required fields are marked *

error: Content is protected !!