MLA: ಶಿವಗಂಗಾ ಶ್ರೀನಿವಾಸ್ ಹೊನ್ನಾಳಿ MLA ಕ್ಷೇತ್ರಕ್ಕೆ ಸ್ಫರ್ಧೆ.! ರೇಣುಕಾಚಾರ್ಯ ಮಾತಿಗೆ ಕೆರಳಿದ ಶಿವಗಂಗಾ ಬ್ರದರ್ಸ್

ದಾವಣಗೆರೆ (MLA): ಭದ್ರಾ ಬಲದಂಡೆ ಕಾಲುವೆ ಸೀಳಿ ಹೊಸದುರ್ಗ ಹಾಗೂ ಚಿಕ್ಕಮಗಳೂರಿನ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಕಾಮಗಾರಿ ವಿರೋಧಿಸಿ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ರೈತರು ದಾವಣಗೆರೆಯಲ್ಲಿ ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ವಿರುದ್ದ ವೈಯಕ್ತಿಕವಾಗಿ ಟೀಕಿಸಿದ್ದರು, ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಶಿವಗಂಗಾ ಬಸವರಾಜ್ ರೇಣುಕಾಚಾರ್ಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ರೇಣುಕಾಚಾರ್ಯ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿವಗಂಗಾ ಬಸವರಾಜ್, ನಾನು ಕಾನೂನು ಬಾಹಿರವಾಗಿ ಯಾವುದೇ ವ್ಯವಹಾರ ನಡೆಸಿಲ್ಲಬೆಂದು ಚನ್ನಗಿರಿ ತಾಲ್ಲೂಕಿನ ಮಾವಿನಹೊಳೆ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಸಿದ್ದವಿದ್ದೆನೆ, ನೀವು ನನ್ನ ವಿರುದ್ದ ಮಾಡಿರುವ ಆರೋಪಗಳು ಸತ್ಯ ಎಂದು ಪ್ರಮಾಣ ಮಾಡುವಂತೆ ಆಹ್ವಾನ ಮಾಡಿದರು.
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹಿರಿಯ ಸಹೋದರ ಉದ್ಯಮಿ ಶಿವಗಂಗಾ ಶ್ರೀನಿವಾಸ್ ಗರುಡವಾಯ್ಸ್ ಹಾಗೂ ಗರುಡಚರಿತೆ ಸಂಪಾದಕರ ಜೊತೆ ಮಾತನಾಡಿ, ರೇಣುಕಾಚಾರ್ಯ ಸ್ವಾಮಿಗಳು ಅವರನ್ನು ನಾವು ಪೂಜ್ಯರ ಸ್ಥಾನದಲ್ಲಿ ನೋಡುತ್ತೆವೆ ಆದರೆ ನಮ್ಮ ಕುಟುಂಬದ ವಿರುದ್ದ ಅಪಹಾಸ್ಯ ಮಾತುಗಳಿಂದ ನಮಗೆ ನೋವಾಗಿದೆ ಎಂದಿದ್ದಾರೆ.
ಹೊನ್ನಾಳಿಯಲ್ಲಿ ಸ್ಫರ್ಧೆ:
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೊನ್ನಾಳಿ ಕ್ಷೇತ್ರದಿಂದ ನಾನು ಸ್ಫರ್ಧೆ ಮಾಡುತ್ತೆನೆ ಎಂದು ತಿಳಿಸಿದ ಶಿವಗಂಗಾ ಶ್ರೀನಿವಾಸ್, ನಾವು ಕೂಡ ಹೊನ್ನಾಳಿಯಲ್ಲಿ ಹುಟ್ಟಿ ಬೆಳೆದವರು, ನಮ್ಮ ತಾಯಿ ತವರುಮನೆ, ಹಾಗೂ ನಮಗೆ ಅಸಂಖ್ಯಾತ ಅಭಿಮಾನಿಗಳು, ಹಿತೈಷಿಗಳು, ಹೊನ್ನಾಳಿ ಕ್ಷೇತ್ರದಲ್ಲಿ ಇರುವುದರಿಂದ ಮುಂದಿನ ಚುನಾವಣೆಯಲ್ಲಿ ಭಾಗವಹಿಸಲು ತೀರ್ಮಾನಿಸಿದ್ದೆನೆ ಎಂದು ತಿಳಿಸಿದರು.