Mnarega:ನರೆಗಾ ರಾಜ್ಯದಲ್ಲಿ ಉತ್ತಮ ಕೆಲಸ: 20 ಕೋಟಿ ಹೆಚ್ಚುವರಿ ದಿನ ನೀಡಲು ಕೇಂದ್ರಕ್ಕೆ ಮನವಿ – ಕೆ ಎಸ್ ಈಶ್ವರಪ್ಪ

IMG-20210921-WA0083

ಬೆಂಗಳೂರು: ಅಮೃತ ಗ್ರಾಮ ಪಂಚಾಯತಿ ಯೋಜನೆಯಲ್ಲಿ 750 ಗ್ರಾ.ಪಂ ಆಯ್ಕೆಯಾಗಿದ್ದು, ಈ ಗ್ರಾ.ಪಂಗಳ ಅಭಿವೃದ್ಧಿಗೆ ಹೆಚ್ಚುವರಿ 25 ಲಕ್ಷ ಅನುದಾನ ಬಿಡುಗಡೆ‌ ಮಾಡಲಾಗುತ್ತದೆ ಎಂದು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಬೆಂಗಳೂರಿನ ಹೋಟೆಲ್ ಗೊಲ್ಡ್ ಪಿಂಚ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಅಮೃತ ಗ್ರಾಪಂ ಯೋಜನೆ ಬಗ್ಗೆ ಈಗಾಗಲೇ ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಘೋಷಣೆ ಮಾಡಿದ್ದಾರೆ. ಇದಲ್ಲದೇ, ರಾಜ್ಯದಲ್ಲಿ ಸರ್ಕಾರದ ಅನೇಕ ಯೋಜನೆ ಘೋಷಣೆ ಮಾಡಿದ್ದಾರೆ ಎಂದರು.

ಆಯ್ಕೆಯಾಗಿರುವ ಗ್ರಾಮ ಪಂಚಾಯತಿಗಳು ಕುಡಿಯುವ ‌ನೀರು, ಸ್ವಚ್ಚತೆ ಬಳಸಬಹುದು ಹಣ‌ ಬಳಸಿಕೊಳ್ಳಬಹುದು, ಆಯಾ ಗ್ರಾಮ ಪಂಚಾಯತಿ ಜಿಲ್ಲೆ ಉಸ್ತುವಾರಿ ಸಚಿವರಿಗೆ ನೀಡಲಾಗಿದ್ದು, ನಾಡಿದ್ದು ಬೆಳಗ್ಗೆ ಕಾರ್ಯಕಮ ಉದ್ಘಾಟನೆಯಾಗಲಿದೆ ಎಂದರು.

ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಸಿಎಂ ಬೊಮ್ಮಾಯಿ‌ ಉದ್ಘಾಟನೆ ಮಾಡಲಿದ್ದಾರೆ. ಅಮೃತ ಗ್ರಾಮ ಪಂಚಾಯತಿ ಅಭಿವೃದ್ಧಿಯನ್ನು ಇಡಿ ದೇಶದಲ್ಲಿ ವಿಶೇಷವಾಗಿ ಮಾಡುತ್ತಿದ್ದೇವೆ ಎಂದರು.

ನರೆಗಾ ಯೋಜನೆ ಅಡಿ ಇಡೀ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಲಾಗಿದ್ದು, 13 ಕೋಟಿ ಮಾನವ ದಿನಗಳನ್ನು ಕೇಂದ್ರ ಸರ್ಕಾರ ನೀಡಿತ್ತು. ಅದನ್ನ ಪೂರ್ಣಗೊಳಿಸಿದ್ದೀವಿ. ಮತ್ತೆ 14 ಕೋಟಿ ಮಾನವ ದಿನಗಳನ್ನ ನೀಡಿದ್ದರು, ಸೆಪ್ಟೆಂಬರ್ ‌ಒಳಗೆ ಮಾಡಿ ಮುಗಿಸುತ್ತೇವೆ. ಇನ್ನೂ 20 ಕೋಟಿ ದಿನಕ್ಕೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು‌ ತಿಳಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!