ಮಹಾನಗರ ಪಾಲಿಕೆ ಅಧಿಕಾರಿ ನೌಕರರ ವರ್ಗಾವಣೆ! ಕಂದಾಯಾಧಿಕಾರಿ ಪ್ರಭುಸ್ವಾಮಿಗೆ ಸ್ಥಳ ತೋರಿಸದೆ ವರ್ಗಾವಣೆ.!

ದಾವಣಗೆರೆ: ವಿವಿಧ ಮಹಾನಗರ ಪಾಲಿಕೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ನೌಕರರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಜೂನ್ 2ರ, 2022ರಂದು ಆದೇಶ ಹೊರಡಿಸಿದೆ. ದಾವಣಗೆರೆ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಗಳ ಒಟ್ಟು 7 ಅಧಿಕಾರಿ ನೌಕರರನ್ನು ವರ್ಗಾವಣೆ ಮಾಡಲಾಗಿದ್ದು, ದಾವಣಗೆರೆ ಮಹಾನಗರ ಪಾಲಿಕೆ ಕಂದಾಯಾಧಿಕಾರಿ ವಿ.ಎನ್. ಪ್ರಭುಸ್ವಾಮಿ (ವಲಯ ಕಚೇರಿ-1) ಅವರಿಗೆ ಸ್ಥಳ ತೋರಿಸದೆ ವರ್ಗಾವಣೆ ಮಾಡಿದ್ದು, ಅವರ ಮುಂದಿನ ನಡೆ ಬಗ್ಗೆ ಸ್ಪಷ್ಟತೆ ಇಲ್ಲದಂತಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆಯ ಸಮುದಾಯ ಸಂಘಟನಾಧಿಕಾರಿ ಎಸ್. ಸುನಂದಾ ಇವರನ್ನು ದಾವಣಗೆರೆ ಮಹಾನಗರ ಪಾಲಿಕೆಯ ಕಂದಾಯಾಧಿಕಾರಿ (ವಲಯ ಕಚೇರಿ-2) ಕೆ. ನಾಗರಾಜು ಅವರ ಜಾಗಕ್ಕೆ, ಕಚೇರಿ ಸಹಾಯಕರಾದ (ಆಡಳಿತ) ನಾಗರತ್ನಮ್ಮ ಅವರನ್ನು ದಾವಣಗೆರೆ ಪಾಲಿಕೆ ಕಂದಾಯಾಧಿಕಾರಿ (ವಲಯ ಕಚೇರಿ-1) ವಿ.ಎನ್. ಪ್ರಭುಸ್ವಾಮಿ ಇವರ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಕಿರಿಯ ಅಭಿಯಂತರರಾದ ಧನುಷ್ ಎಂ.ಎಲ್ ಇವರನ್ನು ಮೈಸೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಕಿರಿಯ ಅಭಿಯಂತರರ ಹುದ್ದೆಗೆ, ಶಿವಮೊಗ್ಗ ಮಹಾನಗರ ಪಾಲಿಕೆ ಕಿರಿಯ ಅಭಿಯಂತರರಾದ ಜೆ.ಡಿ. ಶಂಕರ್ ಇವರನ್ನು ಮೈಸೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಕಿರಿಯ ಅಭಿಯಂತರರ ಹುದ್ದೆಗೆ, ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಥಮದರ್ಜೆ ಸಹಾಯಕ ತೇಜ್ ಕುಮಾರ್ ಕೆ. ಇವರನ್ನು ಮೈಸೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಪ್ರಥಮದರ್ಜೆ ಸಹಾಯಕ ಹುದ್ದೆಗೆ, ಶಿವಮೊಗ್ಗ ಮಹಾನಗರ ಪಾಲಿಕೆ ಕರವಸೂಲಿಗಾರರಾದ ನಾಗಲಕ್ಷ್ಮಿ ಎಸ್. ಇವರನ್ನು ಮೈಸೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಕರವಸೂಲಿಗಾರರ ಹುದ್ದೆಗೆ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಸಹಾಯಕ ಕಂದಾಯ ಅಧಿಕಾರಿ ಎಂ.ಎಸ್. ಸಿದ್ದರಾಜು ಇವರನ್ನು ಮೈಸೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಕಚೇರಿ ವ್ಯವಸ್ಥಾಪಕರ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ ದಾವಣಗೆರೆ ಮಹಾನಗರ ಪಾಲಿಕೆ ಕಂದಾಯಾಧಿಕಾರಿ ವಿ.ಎನ್. ಪ್ರಭುಸ್ವಾಮಿ (ವಲಯ ಕಚೇರಿ-1) ಇವರಿಗೆ ಸ್ಥಳ ನಿಯುಕ್ತಿಗೊಳಿಸದೆ ವರ್ಗಾವಣೆ ಮಾಡಿದ್ದು, ಮುಂದಿನ ನಡೆ ಅಸ್ಪಷ್ಟವಾಗಿದೆ.
garudavoice21@gmail.com 9740365719