ಬ್ರಾಸ್ಬ್ಯಾಂಡ್ ಆರ್ಕೆಸ್ಟ್ರಾದಿಂದ ಸಂಗೀತೋತ್ಸವ

ದಾವಣಗೆರೆ: ಶ್ರೀ ರೇಣುಕಾ ಬ್ರಾಸ್ ಬ್ಯಾಂಡ್ ಆರ್ಕೆಸ್ಟ್ರಾ ಹಾಗೂ ಜಾನಪದ ಸಂಗೀತ ಸಾಂಸ್ಕೃತಿಕ ಕಲಾ ಸಂಸ್ಥೆಯ ವತಿಯಿಂದ ಈಚೆಗೆ ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಸಂಗೀತೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಎಸ್ಪಿ ಎನ್. ರುದ್ರಮುನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್. ರವಿಚಂದ್ರ, ಜಾನಪದ ಅಕಾಡೆಮಿ ಸದಸ್ಯೆ ರುದ್ರಾಕ್ಷಿಬಾಯಿ, ಸಂಸ್ಥೆಯ ಸಂಸ್ಥಾಪಕ ಮರುಳಸಿದ್ದಪ್ಪ, ಡಾ, ಜಗನ್ನಾಥ್, ಸಿ. ಜಯಪ್ಪ, ಸಂಸ್ಥೆಯ ಅಧ್ಯಕ್ಷ ಎಂ. ಹಾಲೇಶ್ ಪಾಲ್ಗೊಂಡಿದ್ದರು.