ನಗರಕ್ಕೆ ನಾಳೆ ಸಚಿವ ಮುರುಗೇಶ ಆರ್.ನಿರಾಣಿ ಭೇಟಿ

ದಾವಣಗೆರೆ,ಜು.4: ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರದ ಡಾ.ಮುರುಗೇಶ ಆರ್.ನಿರಾಣಿ ಜು. 5 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ನಾಳೆ ಸಂಜೆ 5.45 ಕ್ಕೆ ದಾವಣಗೆರೆಗೆ ಆಗಮಿಸಿ ಇಲ್ಲಿಯ ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು.
ಜು.6 ರ ಬೆಳಿಗ್ಗೆ 9 ಗಂಟೆಗೆ ದಾವಣಗೆರೆಯಿಂದ ರಸ್ತೆ ಮೂಲಕ ಹರಿಹರ, ಹರಪನಹಳ್ಳಿ ಮಾರ್ಗವಾಗಿ ಹೊರಟು ಸುಬ್ಬರಾಯನಹಳ್ಳಿಗೆ ಪ್ರಯಾಣಿಸುವರು ಎಂದು ಅವರ ಆಪ್ತ ಕಾರ್ಯದರ್ಶಿ ಡಾ.ಪ್ರಕಾಶ ಎಂ ಸೊಬರದ ತಿಳಿಸಿದ್ದಾರೆ.