ಅಂತರರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ದಾವಣಗೆರೆಯ ನಮನ ಅಕಾಡೆಮಿ ನೃತ್ಯ ಪ್ರದರ್ಶನ

ದಾವಣಗೆರೆ: ಏಪ್ರಿಲ್ 25 ನೇ ತಾರೀಕು ಥೈಲ್ಯಾಂಡ್ ನ ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಮೂವತ್ತನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ನಮನ ಅಕಾಡೆಮಿಯ ಗುರುಗಳಾದ ಶ್ರೀಮತಿ ಮಾಧವಿ ಡಿ ಕೆ ಹಾಗೂ ಅವರ ಶಿಷ್ಯಂದಿರಾದ ವಿಭಾ ಎಸ್, ಡಾll ಸಹನ ಕರಣo, ಶ್ರೇಯ ಸಿ ವಿ, ಚಾಣಸ್ಯ ಡಿ, ಜೋಷಿತ ಏನ್ ಎಸ್, ಸುಜಾತಾ ಬಿ, ಶ್ರೇಯ ಜಿ ಎಂ, ಗೌರಿ ಎಸ್, ಚಿನ್ಮಯಿ ಎಸ್ ಎಲ್, ಸಿಂಚನ ಜಿ ಪಿ, ಇವರು ಭರತನಾಟ್ಯ ಮತ್ತು ಲಘು ಶಾಸ್ತ್ರೀಯ ನೃತ್ಯ ಗಳನ್ನು ಪ್ರಸ್ತುತಪಡಿಸಲಿದ್ದಾರೆ.
‘ಇಂಟರ್ನ್ಯಾಷನಲ್ ಕಲ್ಚರಲ್ ಫೆಸ್ಟಿವಲ್ ಆಫ್ ಇಂಡಿಯಾ’ ವತಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಹಲವಾರು ಕಲಾವಿದರು ತಮ್ಮ ಕಲೆಯನ್ನು ಪ್ರವೇಶಿಸಲಿದ್ದು ಅಕಾಡೆಮಿಯ ಪಾರ್ಥ ಜಿ ಜೋಯಿಸ್ ಚಲನಚಿತ್ರ ಗೀತೆಯ ಮೂಲಕ ಪುನೀತ್ ರಾಜಕುಮಾರಿಗೆ ಗಾನ ನಮನ ಸಲ್ಲಿಸಲಿದ್ದಾರೆ, ಹಾಗೆ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಕೆ ಎನ್ ಹನಿಗವನ ವನ್ನು ವಾಚನ ಮಾಡಲಿದ್ದಾರೆ.
ನಮನ ಅಕಾಡೆಮಿಯ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಡಾ ll ಶಾಮನೂರು ಶಿವಶಂಕರಪ್ಪ, ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್, ಗೌರವಾಧ್ಯಕ್ಷರಾದ ಡಾ ll ಎ ಎಂ ಶಿವಕುಮಾರ್, ನಿರ್ದೇಶಕರಾದ ಶ್ರೀ ದಿನೇಶ್ ಕೆ ಶೆಟ್ಟಿ, ಶ್ರೀ ರಾಮನಾಥ್ ಪಿ ಸಿ, ಶ್ರೀ ಅನಿಲ್ ಬಾರಂಗಲ್, ಶ್ರೀ ಕೆ ಎನ್ ಮೂರ್ತಿ, ಶ್ರೀಮತಿ ನಂದಾ ಡಿ ಕುಲಕರ್ಣಿ, ಗುರುಗಳು, ಹಿತೈಷಿಗಳು, ಸದಾ ಸಹಕಾರ ನೀಡುತ್ತಿರುವುದು, ಪೋಷಕರು ಮತ್ತು ಶಿಷ್ಯವೃಂದ ಶುಭಹಾರೈಸಿದ್ದಾರೆ
ಸುದ್ದಿಗಾಗಿ ಸಂಪರ್ಕಿಸಿ: 9740365719
garudavoice21@gmail.com