ದಾವಣಗೆರೆಯ ನಮನ ಅಕಾಡೆಮಿ ವತಿಯಿಂದ ಹರಿಹರದಲ್ಲಿ ನೃತ್ಯ ಕಾರ್ಯಕ್ರಮ

ದಾವಣಗೆರೆ: ಪ್ರಧಾನ ಮಂತ್ರಿಗಳಾದ *ಶ್ರೀ ನರೇಂದ್ರ ಮೋದಿ ಯವರಿಂದ *ಕೇದಾರನಾಥ* ದಲ್ಲಿ ಜೀರ್ಣೋದ್ಧಾರಗೊಳಿಸಿ ದ *ಶ್ರೀ ಆದಿ ಶಂಕರಾಚಾರ್ಯರ* ಬೃಂದಾವನ ಹಾಗೂ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಕರ್ನಾಟಕದಿಂದ ಆಯ್ಕೆಯಾದ 5 ಜಾಗಗಳಲ್ಲಿ ಒಂದಾದ *ಹರಿಹರೇಶ್ವರ ದೇವಸ್ಥಾನದ* ಆವರಣದಲ್ಲಿ *ಜಿಲ್ಲಾಡಳಿತ, ತಾಲೂಕು ಆಡಳಿತ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ* ಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಾವಣಗೆರೆಯ *ನಮನ ಅಕಾಡೆಮಿಯವರು* ಗುರು *ಶ್ರೀಮತಿ ಮಾಧವಿ ಡಿ ಕೆ* ಅವರು ನೃತ್ಯ ಸಂಯೋಜಿಸಿದ ಶ್ರೀ ಶಂಕರಾಚಾರ್ಯರ *ಅರ್ಧನಾರೀಶ್ವರ* ಸ್ತೋತ್ರ

ತ್ಯಾಗರಾಜರ *ಶಂಭೋ ಮಹಾದೇವ* ಸೂತ್ರಕ್ಕೆ ನಮನ ಅಕಾಡೆಮಿಯ ಗುರು ಹಾಗೂ ಶಿಷ್ಯ ವೃಂದದವರು ಭರತನಾಟ್ಯವನ್ನು ಪ್ರಸ್ತುತಪಡಿಸಿದರು.
ಹರಿಹರ ಶಾಸಕರಾದ *ಶ್ರೀಯುತ ರಾಮಪ್ಪ* ಹಾಗೂ ಜಿಲ್ಲಾಧಿಕಾರಿಗಳಾದ *ಶ್ರೀಯುತ ಮಹಾಂತೇಶ್ ಬೀಳಗಿ* ಗುರುಗಳನ್ನು ಸನ್ಮಾನಿಸಿದರು.