ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರ.

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಅಧ್ಯಾಪಕರ ವೇದಿಕೆ ಮತ್ತು ಆರ್ ಜಿ ಇನ್ಸ್ ಟ್ಯೂಟ್ ಆಫ್ ಕಾಮರ್ಸ್&ಮ್ಯಾನೇಜ್ ಮೆಂಟ್ ಸಹಯೋಗದೊಂದಿಗೆ ದಿನಾಂಕ 09/07/2022 ರಂದು ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಅಧ್ಯಾಪಕರ ಒoದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಬಿಕಾಂ ಮತ್ತು ಬಿಬಿಎ ದ್ವಿತೀಯ ಸೆಮಿಸ್ಟರ್ ಪಠ್ಯಕ್ರಮ ಪಠ್ಯ ಪ್ರಶ್ನೆಪತ್ರಿಕೆ ತಯಾರಿಕೆ ಮೌಲ್ಯಮಾಪನ ವಿಧಾನ ಹಾಗೂ ಬದಲಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವುದರ ಕುರಿತು ಎರಡು ತಾಂತ್ರಿಕ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿಷಯಗಳನ್ನು ಪ್ರಸ್ತುತಪಡಿಸುವರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಶಿವಮೊಗ್ಗ ದ ಜಂಟಿ ನಿರ್ದೇಶಕರಾದ ಪ್ರೊ ರಾಜಶೇಖರ್ ಹೆಬ್ಬಾರ್ ಅವರು ಉದ್ಘಾಟಿಸುವರು. ದಾವಣಗೆರೆ ವಿಶ್ವವಿದ್ಯಾನಿಲಯದ ಪರೀಕ್ಷಾ ಕುಲಸಚಿವರಾದ ಪ್ರೊ ಅನಿತಾ ಎಚ್ ಎಸ್ ರವರು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳುವರು. ಪ್ರೊ. ಶಿವಪ್ರಕಾಶ್. ವೇದಿಕೆ ಅಧ್ಯಕ್ಷರಾದ ಡಾ. ಕರಿಬಸಪ್ಪ ಟಿ ಹಾಗೂ ಕಾರ್ಯದರ್ಶಿಗಳಾದ ವೆಂಕಟೇಶ್ ಬಾಬು ಎಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ ಜಿ ಕಾಲೇಜಿನ ನಿರ್ದೇಶಕರಾದ ಶ್ವೇತಾ ಗಾಂಧಿಯವರು ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎರಡು ತಾಂತ್ರಿಕ ಗೋಷ್ಠಿಗಳಲ್ಲಿ ಪ್ರೊ ಶಿವಪ್ಪ ಎಚ್ ಕೆ ಪ್ರೊ ಲಕ್ಷ್ಮೀರಂಗನಾಥ ಪ್ರೊ ನೀಲಾಂಬಿಕಾ ಜಿ ಎಸ್ ಪ್ರೊ ಬಾಬು ಕೆ ಎ ರಾಜಶೇಖರಪ್ಪ ಜಿ ಎಲ್ ಪ್ರೊ ಸುನಿತ ಕೆ ಬಿ ಭಾಗವಹಿಸುವರು. ಮುಕ್ತಾಯ ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ ಮಹೇಂದ್ರ ರವರು ಸಮಾರೋಪ ನುಡಿಗಳನ್ನಾಡುವರು.
ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಎಲ್ಲಾ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಅಧ್ಯಾಪಕರು ಕಾರ್ಯಗಾರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದು ವೇದಿಕೆ ಕಾರ್ಯದರ್ಶಿಗಳಾದ ವೆಂಕಟೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ