ನೇಣು ಬಿಗಿದ ಸ್ಥಿತಿಯಲ್ಲಿ ಪೊಲೀಸ್‌ ಪೇದೆಯ ಪತ್ನಿಯ ಶವ ಪತ್ತೆ

IMG-20210710-WA0026

ದಾವಣಗೆರೆ: ನೇಣು ಬಿಗಿದ ಸ್ಥಿತಿಯಲ್ಲಿ ಪೊಲೀಸ್ ಪೇದೆಯ ಹೆಂಡತಿ ಶವ ಪತ್ತೆಯಾಗಿರುವ ಘಟನೆ ಕೊಂಡಜ್ಜಿ‌‌- ಉದಯಪುರ ಗ್ರಾಮ ರಸ್ತೆ ಬದಿಯಲ್ಲಿ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿದೆ.

ಹರಿಹರ ತಾಲೂಕಿನ‌ ಕೊಂಡಜ್ಜಿ‌ ಗ್ರಾಮದ ಶಿಂಗ್ರಿಹಳ್ಳಿ ದೊಡ್ಡ ತಾಂಡ ನಿವಾಸಿ ನಿರ್ಮಲಾ ಬಾಯಿ (44) ಮೃತ ಗೃಹಿಣಿಯಾಗಿದ್ದು, ಈಕೆಯ‌ ಪತಿ ಕುಬೇರನಾಯ್ಕ, ಕೆಎಸ್‌ಆರ್‌ಪಿ ಬೆಂಗಳೂರಿನಲ್ಲಿ ಪೊಲೀಸ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ದಂಪತಿಗಳಿಗೆ ವಾಣಿಶ್ರೀ (19), ಚೇತನ್ (16) ಎಂಬ ಇಬ್ಬರು ಮಕ್ಕಳಿದ್ದು, ಶವವನ್ನಹ ಎಲ್ಲಿಂದಲೂ ತಂದು ಹಾಕಿರುವ ಅನುಮಾನ ಮೂಡಿಸಿದೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಪಿಎಸ್ಐ ರವಿಕುಮಾರ್ ಭೇಟಿ, ಪರಿಶೀಲನೆ‌ ನಡೆಸಿದ್ದು, ಹರಿಹರ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!