Night Curfew: ಅಕ್ಟೋಬರ್ 11 ರವರೆಗೆ ರಾತ್ರಿ ಕರ್ಪ್ಯೂ ಮುಂದುವರಿಸಿ ಆದೇಶಿಸಿದ ಜಿಲ್ಲಾಧಿಕಾರಿ: ಸರ್ಕಾರದ ಆದೇಶ ಪಾಲನೆ ಆಗ್ತಿದೆಯಾ.?

ದಾವಣಗೆರೆ: ಕೊರೋನಾ ಸಾಂಕ್ರಾಮಿಕ ರೋಗ ಹರಡುವಿಕೆ ನಿಯಂತ್ರಿಸುವ ಹಾಗೂ ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಜನಜಂಗುಳಿ ತಪ್ಪಿಸಲು ನಿಯಂತ್ರಣ ಕಾರ್ಯ ಕೈಗೊಳ್ಳಲು ಸರ್ಕಾರದ ಸೂಚನೆಯಂತೆ ಸೆಪ್ಟಂಬರ್ 24ರ ನಿರ್ಬಂಧದ ಆದೇಶವನ್ನು ಅಕ್ಟೋಬರ್ 11ರ ಬೆಳಿಗ್ಗೆ 6ರವರೆಗೆ ವಿಸ್ತರಿಸಿ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ.
ತಕ್ಷಣದಿಂದಲೇ ನಗರ, ಜಿಲ್ಲಾದ್ಯಂತ ಜಾರಿಗೆ ಬರುವಂತೆ ಅ.11ರ ಬೆಳಿಗ್ಗೆ 6ರವರೆಗೆ 3.7.2021ರಿಂದ 24.9.2021ರವರೆಗೆ ಸರ್ಕಾರವು ಉಲ್ಲೇಖಿತ ಆದೇಶದೊಂದಿಗೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಜಾರಿಗೊಳಿಸಿ, ವಿಸ್ತರಿಸಿ ಆದೇಶ ನೀಡಿದ್ದಾರೆ. ನಗರ, ಜಿಲ್ಲಾದ್ಯಂತ ಪ್ರತಿದಿನ ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕಫ್ರ್ಯೂ ಜಾರಿಯಲ್ಲಿರುತ್ತದೆ. ಸರ್ಕಾರದ ಮಾರ್ಗಸೂಚಿ, ನಿಬಂಧನೆಗಳನ್ನು ಯಾವುದೇ ವ್ಯಕ್ತಿಗಳು ಉಲ್ಲಂಘಿಸಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, 2005ರ ವಿಭಾಗ 51ರಿಂದ 60ರನ್ವಯ ಮತ್ತು ಐಪಿಸಿ ಸೆಕ್ಷನ್ 188ರಂತೆ ಹಾಗೂ ಕರ್ನಾಟಕ ಸಾಂಕ್ರಾಮಿಕ ಕಾಯ್ದೆ, 2005ರ ವಿಭಾಗ 4, 5 ಮತ್ತು 10ರಂತೆ ಕ್ರಮ ಕೈಗೊಳ್ಳಲಾಗುವುದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.