ಯಾವುದೇ ನೋಟಿಸ್ ಬಂದಿಲ್ಲ. ನಮಗೆ ಯಾವ ಕೆಂಪಣ್ಣನೂ ಗೊತ್ತಿಲ್ಲ : ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ

ದಾವಣಗೆರೆ: ನಮಗೆ ನ್ಯಾಯಾಲಯದ ಯಾವುದೇ ನೋಟಿಸ್ ಬಂದಿಲ್ಲ. ನಮಗೆ ಯಾವ ಕೆಂಪಣ್ಣನೂ ಗೊತ್ತಿಲ್ಲ, ಆತ ಎಲ್ಲಿದ್ದಾನೆಂಬುದೂ ಗೊತ್ತಿಲ್ಲ. ಕೆಂಪಣ್ಣನಿಗೂ ಮಹಾಸಭಾಗೂ ಏನು ಸಂಬಂಧ? ಎಂದು ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಪ್ರಶ್ನಿಸಿದರು.
ನಗರದ ಬಾಪೂಜಿ ಸಮುದಾಯ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಕರ್ಯಕಾರಿ ಸಮಿತಿ ಸಭೆಯಲ್ಲಿ ತರ್ಮಾನಿಸಿ, ಬೈಲಾಕ್ಕೆ ತಿದ್ದುಪಡಿ ತಂದು ಮೊದಲಿದ್ದ ಅಖಿಲ ಭಾರತ ವೀರಶೈವ ಮಹಾಸಭಾವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಎಂಬುದಾಗಿ ಹೆಸರು ಬದಲಿಸಿದ್ದೇವೆ. ಎಲ್ಲವನ್ನು ಕಾನೂನಿನಪ್ರಕಾರ ಮಾಡಲಾಗಿದೆ. ಯಾರೋ ಆರೋಪ ಮಾಡಿದ್ದೆಲ್ಲದಕ್ಕೂ ಉತ್ತರ ಕೊಡಲಾಗದು ಎಂದರು.
ನಿವತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮ್ದಾರ್ ಮತ್ತೊಂದು ಲಿಂಗಾಯತರ ಅಧಿವೇಶನ ಮಾಡುವುದಾದರೆ ಮಾಡಲಿ. ನಾವೇನು ಬೇಡ ಅಂದಿಲ್ಲ. ಈಗ ಲಿಂಗಾಯತರ ಬಗ್ಗೆ ಭಾರೀ ಮಾತನಾಡುತ್ತಿರುವವರು ಅಧಿಕಾರದಲ್ಲಿದ್ದಾಗ ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ? ಅವರ ಸಂಬಂಧಿಕರಿಗಾದರೂ ಒಳ್ಳೇದು ಮಾಡಿದ್ದಾರಾ? ಅವರು ಮಾತನಾಡುವುದನ್ನು ನಾವು ತಡೆಯಲು ಆಗುವುದಿಲ್ಲ. ಟೀಕೆ ಹೇಗೆ ಬೇಕಾದರೂ ಮಾಡಬಹುದು. ಸಮಾಜ ಮುಂದುವರೆಯುವುದನ್ನು ನೋಡಬೇಕು. ಒಗ್ಗೂಡಿಸುವ ಕೆಲಸ ಮಾಡಬೇಕೆ ಹೊರತು ಸಮಾಜ ಒಡೆಯುವ ಕೆಲಸ ಮಾಡಬಾರದು. ಒಗ್ಗಟ್ಟು ಇದ್ದರೆ ಮಾತ್ರ ಅಭಿವದ್ಧಿ ಸಾಧ್ಯ ಎಂದು ಶಾಮನೂರು ಶಿವಶಂಕರಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಡಿ.24ರಿಂದ ದಾವಣಗೆರೆಯಲ್ಲಿ ನಡೆಸಲು ಉದ್ದೇಶಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 23ನೇ ರಾಷ್ಟ್ರೀಯ ಮಹಾ ಅಧಿವೇಶನವನ್ನು 2023ರ ೆಬ್ರವರಿಗೆ ಮುಂದೂಡಲಾಗಿದೆ. ನಿಗದಿಯಂತೆ ಡಿ.24, 25 ಮತ್ತು 26ರಂದು ಮಹಾ ಅಧಿವೇಶನ ನಡೆಯಬೇಕಿತ್ತು. ಆದರೆ, ಈಗ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವುದರಿಂದ ಜನಪ್ರತಿನಿಧಿಗಳು ಹಾಗೂ ಉತ್ತರ ರ್ನಾಟಕ ಭಾಗದ ಮಹಾಸಭಾ ಜಿಲ್ಲಾಧ್ಯಕ್ಷರುಗಳು ಸಂಘಟನೆಗೆ ಲಭ್ಯವಾಗದ ಕಾರಣ ಅಧಿವೇಶನವನ್ನು 2023ರ ಫೆಬ್ರವರಿ 11, 12 ಮತ್ತು 13ಕ್ಕೆ ಮುಂದೂಡಲಾಗಿದೆ ಎಂದರು.
ಮಹಾಸಭಾದ ಉಪಾಧ್ಯಕ್ಷ ಅಥಣಿ ವೀರಣ್ಣ ಮಾತನಾಡಿ, ಬೆಂಗಳೂರಿನಲ್ಲಿ ಶಾಮನೂರು ಶಿವಶಂಕರಪ್ಪ ಯಾವುದೇ ರಾಜಕಾಲುವೆ ಒತ್ತುವರಿ ಮಾಡಿಲ್ಲ. ಬಿಡಿಎ, ಬಾಪೂಜಿ ವಿದ್ಯಾಸಂಸ್ಥೆಗೆ ಮಂಜೂರು ಮಾಡಿರುವ ನಿವೇಶನದಲ್ಲಿ ಆಸ್ಪತ್ರೆ ನರ್ಮಿಸಲಾಗಿದೆ. ಜಾಮ್ದಾರ್ ಮಾಡಿರುವ ಆರೋಪದಲ್ಲಿ ಹುರಳಿಲ್ಲ ಎಂದರು. ಮತ್ತರ್ವ ಉಪಾಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ಸಮಾಜಕ್ಕೆ ಮಠಾಧೀಶರ ಕೊಡುಗೆ ಅಪಾರವಾಗಿದೆ. ಆದರೆ, ಇತ್ತೀಚೆಗೆ ಕೆಲ ಮಠಾಧೀಶರಲ್ಲಿ
ಕೆಲ ನ್ಯೂನತೆ ಕಂಡು ಬರುತ್ತಿದೆ. ಮಠಗಳಲ್ಲಿ ಅನಾಚಾರ, ಅಕ್ರಮ ನಡೆದಾಗ ಆಡಳಿತಾಧಿಕಾರಿ ನೇಮಿಸುವ ಅಧಿಕಾರ ಇದೆ. ಈ ವಿಚಾರದಲ್ಲಿ ಮಹಾಸಭಾ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿದರು. ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್, ಮುಖಂಡರಾದ ಎಸ್.ಎಸ್.ಗಣೇಶ್, ರೇಣುಕ ಪ್ರಸನ್ನ, ಬಿ.ಜೆ.ರಮೇಶ್, ಸಂದೀಪ್ ಅಣಬೇರು, ಶುಭ ಐನಳ್ಳಿ, ಐಗೂರು ಚಂದ್ರಶೇಖರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.