ನಗರದ ವಿವಿಧ ವೃತ್ತಕ್ಕೆ ಗಣ್ಯರ ಹೆಸರು ನಾಮಕರಣ

ದಾವಣಗೆರೆ: ದಾವಣಗೆರೆ ನಗರಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಹೆಚ್.ಎಂ. ಸೋಮನಾಥಯ್ಯ ಅವರ ಹೆಸರನ್ನು ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಮುಂಭಾಗದ ವೃತ್ತಕ್ಕೆ, ಹಿರೇಮಠದ ಸ್ಥಿರಪಟ್ಟಾಧ್ಯಕ್ಷರಾದ ಶ್ರೀ ಸದ್ಯೋಜ್ಯಾತ ಶಿವಾಚಾರ್ಯ ಮಹಾಸ್ವಾಮೀಜಿಯವರ ಹೆಸರನ್ನು ಮಠದ ಬಳಿ ಇರುವ ವೃತ್ತಕ್ಕೆ ಮತ್ತು ಪಿ.ಜೆ. ಬಡಾವಣೆಯ ಮೋದಿ ರಸ್ತೆಯಿಂದ ಶಿವಪ್ಪಯ್ಯ ವೃತ್ತದ ವರೆಗಿನ ರಸ್ತೆಗೆ ಶ್ರೀ ಸ್ವಾಮಿ ವಿವೇಕಾನಂದರ ಹೆಸರನ್ನು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ರಾಮಕೃಷ್ಣಹೆಗಡೆ ಅವರ ಹೆಸರನ್ನು ಶಾಂತಿ ನಗರದ ದ್ವಿಪಥ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಮಹಿಳಾ ವಿದ್ಯಾರ್ಥಿ ನಿಯಲದ ಮುಂಭಾಗದ ವೃತ್ತಕ್ಕೆ ನಾಮಕರಣದ ನಾಮಫಲಕಗಳ ಅನಾವರಣ ಮಾಡಲಾಯಿತು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಮುಂಭಾಗದಲ್ಲಿ ಜಿಲ್ಲಾ ಶ್ರೀ ಆದಿಜಗದ್ಗುರು ರೇಣುಕಾಚಾರ್ಯರ ಭಕ್ತರ ಬಳಗದ ವತಿಯಿಂದ ಮಹಾನಗರಪಾಲಿಕೆ ಅಳವಡಿಸಿರುವ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ರಿಂಗ್ ರಸ್ತೆಯ ನಾಮಫಲಕ ಮತ್ತು ರೇಣುಕಾಚಾರ್ಯರ ಮಹಾದ್ವಾರ ಹಾಗೂ ಕಂಚಿನ ಪ್ರತಿಮೆ ಸ್ಥಾಪಿಸುವ ಸ್ಥಳದಲ್ಲಿ ಭೂಮಿ ಪೂಜೆಯನ್ನು ಆವರಗೊಳ್ಳದ ಓಂಕಾರ ಶಿವಚಾರ್ಯ ಸ್ವಾಮೀಜಿ, ನೊಣವಿನ ಕೆರೆಯ ಶ್ರೀ ಕಾಡಸಿದ್ಧೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಉಭಯ ಶಾಸಕರಿಗೆ ತಿಳಿಸಿದರು.
ಇದೇ ವೇಳೆ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯ ಮಹಾದ್ವಾರ ಮತ್ತು ಕಂಚಿನ ಪ್ರತಿಮೆ ಪ್ರತಿಷ್ಠಾಪನೆಯ ಹೊಣೆಯನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಶಾಸಕ ಎಸ್.ಎ. ರವೀಂದ್ರನಾಥ್ ವಹಿಸಿಕೊಂಡು ಆದಷ್ಟೂ ಶೀಘ್ರ ಕಾರ್ಯ ಪೂರ್ಣಗೊಳಿಸಿರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿ ಸ್ವಾಮಿ, ಹೆಚ್.ಎಂ. ರುದ್ರಮುನಿಸ್ವಾಮಿ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ದಾವಣಗೆರೆ ಹರಿಹರ ಅರ್ಬನ್ ಕೋ-ಆಫ್ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್, ಪಾಲಿಕೆ ಸದಸ್ಯ ಕೆ. ಪ್ರಸನ್ನ ಕುಮಾರ್, ಬಿ.ಜಿ. ಅಜಯ್ಕುಮಾರ್, ಎಸ್.ಟಿ. ವೀರೇಶ್ ಮತ್ತಿತರು ಉಪಸ್ಥಿತರಿದ್ದರು.