ಸಾಮಾನ್ಯ ಬಿಜೆಪಿ ಕಾರ್ಯಕರ್ತನಿಗೆ ಸಿಗದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನ.! ಶಾಸಕರಿಗೆ ಎರಡು ಸ್ಥಾನ.! ಹೊಳೆಸಿರಿಗೆರೆ ಬಿ.ಹಾಲೇಶಪ್ಪಗೆ ಕೈ ತಪ್ಪುವುದೇ ಅಧ್ಯಕ್ಷ ಸ್ಥಾನ ?

dcc bank haleshappa and sv Ramachandra

ದಾವಣಗೆರೆ : ಶಾಸಕ ರಾಮಚಂದ್ರಪ್ಪಗೆ ಕೋ ಅಪ್ ಮಾಡುವ ಮೂಲಕ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಸ್ಥಳೀಯ ಬಿಜೆಪಿ ಸಾಮಾನ್ಯ ಕಾರ್ಯಕರ್ತರಲ್ಲಿ ಈಗ ಆಕ್ರೋಶ ಉಂಟು ಮಾಡಿದೆ.

ಈ ಸಂಬಂಧ ನಿರ್ದೇಶಕ ಸ್ಥಾನದ ಆಕಾಂಕ್ಷಿ ಕುಂದೂರು ರಾಜಣ್ಣ ಎಂಬುವರು ಪತ್ರಿಕಾಗೋಷ್ಠಿ ನಡೆಸಿ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ವಿ.ರಾಮಚಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಎಸ್‌ವಿಆರ್‌ಗೆ ಈಗಾಗಲೇ ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿದ್ದಾರೆ. ಹೀಗಿದ್ದಾಗಲೂ ನಿರ್ದೇಶಕ ಸ್ಥಾನವನ್ನು ನೀಡಿದ್ದಕ್ಕೆ ಎಂಬ ಪ್ರಶ್ನೆ ಈಗ ಉದ್ಬವಾಗಿದೆ.

ಸಹಜವಾಗಿಯೇ ವಾರ್ಷಿಕ 1500 ಕೋಟಿ ರೂ. ವಹಿವಾಟು ನಡೆಸುವ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಕಾಂಕ್ಷಿಗಳು ಇರುವುದು ಕಾಮನ್. ಸಿದ್ದಾಂತಕ್ಕೆ ಬದ್ದಘಿ, ಒಬ್ಬರಿಗೆ ಒಂದೇ ಹುದ್ದೆ ಎಂದಿರುವ ಬಿಜೆಪಿ, ಶಾಸಕ ಎಸ್.ವಿ.ಆರ್‌ಗೆ ನಿರ್ದೇಶಕರನ್ನಾಗಿ ಮಾಡಿರುವ ಹುನ್ನಾರವೇನು ಎಂಬ ಪ್ರಶ್ನೆ ಉದ್ಬವಿಸಿದೆ. ಅಲ್ಲದೇ ಸಾಮಾನ್ಯ ಕಾರ್ಯಕರ್ತನನ್ನು ಬಿಟ್ಟು ಎಸ್‌ವಿಆರ್‌ರನ್ನು ಕೋ ಅ್ ಮಾಡುವ ಮೂಲಕ ಆಯ್ಕೆ ಮಾಡಿರುವ ಕಾರಣವೇನು ಎಂಬ ಪ್ರಶ್ನೆ ಉದ್ಬವಿಸಿದೆ.

ಜೆ.ಎಸ್. ವೇಣುಗೋಪಾಲ ರೆಡ್ಡಿ ರಾಜೀನಾಮೆ : ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಜಗಳೂರಿನ ಜೆ.ಎಸ್. ವೇಣುಗೋಪಾಲ ರೆಡ್ಡಿ ಡಿ.13ಕ್ಕೆ ರಾಜೀನಾಮೆ ನೀಡಿದ್ದು, ತೆರವಾದ ಸ್ಥಾನಕ್ಕೆ ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ ಅವರನ್ನು ಕೂರಿಸುವ ಲೆಕ್ಕಾಚಾರವೂ ನಡೆದಿದೆ. ಇದೇ 28ಕ್ಕೆ ಅದು ಸ್ವೀಕಾರವಾಗಬೇಕಿದೆ.

ಡಿ.29 ಕ್ಕೆ ನಿರ್ದೇಶಕರ ಸಭೆ : ಡಿ.29ಕ್ಕೆ ನಿರ್ದೇಶಕರ ಸಭೆ ನಡೆಯಲಿದ್ದುಘಿ, ಅಂದು ಚುನಾವಣೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು, ಜ.15ಕ್ಕೆ ಹೊಸ ಅಧ್ಯಕ್ಷ ಆಯ್ಕೆ ಆಗಬೇಕಿರುವುದರಿಂದ ತೆರೆ ಮರೆಯಲ್ಲಿ ಆಟಗಳು ಶುರುವಾಗತೊಡಗಿವೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಪ್ರತಿಷ್ಠೆ ಕಣವಾಗಿರುವುದರಿಂದ ಹಲವರು ಆಕಾಂಕ್ಷಿಗಳಾಗಿದ್ದಾರೆ. ಅದಕ್ಕಾಗಿ ಈಗ ರಾಜಕೀಯ ಚಟುವಟಿಕೆಗಳು ಕೂಡ ನಡೆಯುತ್ತಿವೆ.

ಬಿಜೆಪಿಗೆ ಬಹುಮತವಿದೆ : ಪ್ರತಿಷ್ಠೆಯ ಡಿಸಿಸಿ ಬ್ಯಾಂಕ್ ಆಡಳಿತರೂಡ ಬಿಜೆಪಿ ತೆಕ್ಕೆಯಲ್ಲಿದೆ. 2020ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್‌ನಿಂದ ಆಡಳಿತ ಕಸಿದುಕೊಂಡ ಬಿಜೆಪಿ ರಾಜಕೀಯ ತಂತ್ರಗಾರಿಕೆ ಈಗ ಶುರುವಾಗಿದ್ದುಘಿ, ನಿರ್ದೇಶಕರಾಗಿದ್ದ ಬಿ.ವಿ.ಚಂದ್ರಶೇಖರ್ ನಿಧನದ ಹಿನ್ನೆಲೆಯಲ್ಲಿ ಈಗ ಆ ಸ್ಥಾನಕ್ಕೆ ಎಸ್.ವಿ.ರಾಮಚಂದ್ರಪ್ಪರನ್ನು ತೆಗೆದುಕೊಳ್ಳಲಾಗಿದೆ. ಇನ್ನು ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಸ್ಥಳೀಯ ಬಿಜೆಪಿ ವರಿಷ್ಠರು ಎಸ್.ವಿ. ರಾಮಚಂದ್ರಪ್ಪ ಅವರನ್ನು ಡಿಸಿಸಿ ಬ್ಯಾಂಕ್ ಗದ್ದುಗೆಗೆ ಕೂರಿಸುವ ಲೆಕ್ಕಾಚಾರ ಮಾಡತೊಡಗಿದ್ದಾರೆ. ಮೊದಲ ಹಂತದಲ್ಲಿ ಎಸ್.ವಿ.ಆರ್. ಅವರನ್ನು ಇತರೆ ವರ್ಗ ಸಹಕಾರಿ ಕ್ಷೇತ್ರದಿಂದ ನಿರ್ದೇಶಕರನ್ನಾಗಿ ಮಾಡಿಕೊಳ್ಳಲಾಗಿದೆ. ಜೊತೆಗೆ ರಾಜಕೀಯ ಬಲವರ್ಧನೆಗೆ ಹಾಗೂ ಚುನಾವಣೆ ಸಂದರ್ಭದಲ್ಲಿ ಸಂಪನ್ಮೂಲ ಬಳಕೆಗೂ ಇದು ಸಹಾಯಕವಾಗಲಿದ್ದುಘಿ, ಸಹಕಾರಿ ಸಂಘದ ಮತಗಗಳು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೆಕ್ಕೆಗೆ ಬೀಳಿಸಿಕೊಳ್ಳಲು ಈ ಮಾರ್ಗ ಅನುಸರಿಸಲಾಗಿದೆ ಎಂಬ ಮಾತು ಕೂಡ ಇದೆ. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ವರಿಷ್ಠರು ಪ್ರತಿ ಬಾರಿಯೂ ಡಿಸಿಸಿ ಬ್ಯಾಂಕ್ ಆಡಳಿತ ತಮ್ಮದಾಗಿಸಿಕೊಳ್ಳಲು ಭಗೀರಥ ಪ್ರಯತ್ನ ಪಡುತ್ತಿವೆ.

ಹೊಳೆಸಿರಿಗೆರೆ ಹಾಲೇಶಪ್ಪ ಆಕಾಂಕ್ಷಿ.! : ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಹೊಳೆಸಿರಿಗೆರೆ ಹಾಲೇಶಪ್ಪ ಆಕಾಂಕ್ಷಿ ಎಂದು ಹೇಳಲಾಗುತ್ತಿದೆ. ಆದರೆ ಎಸ್‌ವಿಆರ್ ಬಂದರೆ ಇವರಿಗೆ ಅಧಿಕಾರ ಸಿಗುವುದು ಕಷ್ಟಸಾಧ್ಯವಾಗಿದೆ. ಮೂಲ ಬಿಜೆಪಿಗ ಹೊಳೆಸಿರಿಗೆ ಹಾಲೇಶಪ್ಪ ಉಳಿದ 10 ತಿಂಗಳ ಅವಧಿಗೆ ಅಧ್ಯಕ್ಷರಾಗಬೇಕೆಂದು ಈ ಹಿಂದೆ ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದುಘಿ, ಈ ಸ್ಥಾನ ಅವರಿಗೆ ತಪ್ಪುವ ಆತಂಕ ಕೂಡ ಇದೆ.

ಕಾಂಗ್ರೆಸ್ ಕೈ ತಪ್ಪಿದ ಆಡಳಿತ : 2018-19ರಲ್ಲಿ ಒಟ್ಟು 9 ಚುನಾಯಿತ ನಿರ್ದೇಶಕರಲ್ಲಿ 7 ಕಾಂಗ್ರೆಸ್ ನಿರ್ದೇಶಕರಿದ್ದು
ಜೆ.ಆರ್. ಷಣ್ಮುಖಪ್ಪ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಆಡಳಿತವನ್ನು 2020ರ ಡಿಸೆಂಬರ್‌ನಲ್ಲಿ ಬಿಜೆಪಿ ಅನಾಮತ್ತಾಗಿ
ತನ್ನದಾಗಿಸಿಕೊಂಡಿತ್ತು. ಶ್ರೀನಿವಾಸ್ ಶೆಟ್ರು, ಜೆ.ಆರ್. ಷಣ್ಮುಖಪ್ಪ ಹಾಗೂ ಬಿ.ವಿ. ಚಂದ್ರಶೇಖರಪ್ಪ ಅವರನ್ನು ಹೊರತುಪಡಿಸಿ ಉಳಿದ ನಾಲ್ಕು ನಿರ್ದೇಶಕರು ಬಿಜೆಪಿಗೆ ಜಿಗಿದರು. ಜೆ.ಆರ್. ಷಣ್ಮುಖಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಸಲು ಬಿ.ವಿ. ಚಂದ್ರಶೇಖರ್ ಸಹ ತೆರೆಮರೆಯಲ್ಲಿ ಬಿಜೆಪಿಗೆ ಬೆಂಬಲಿಸಿದ್ದರು ಎಂಬ ಮಾತು ಕೂಡ ಕೇಳಿಬಂದಿದೆ. ಹೀಗಾಗಿ ಜಗಳೂರಿನ ವೇಣುಗೋಪಾಲ ರೆಡ್ಡಿ ಅಧ್ಯಕ್ಷರಾದರು ಎಂದು ಹೇಳಲಾಗುತ್ತಿದೆ.

ಪ್ರಬಲ ನಾಯಕ : ಹರಿಹರ ಹಾಗೂ ಮಲೇಬೆನ್ನೂರು ಭಾಗದಲ್ಲಿ ಬಿಜೆಪಿಯ ಪ್ರಬಲ ನಾಯಕರಾಗಿರುವ ಹಾಲೇಶಪ್ಪನಿಗೆ ಅಧ್ಯಕ್ಷ ಗಾದಿ ಕೊಡಬೇಕೆಂಬುದು ಮಾಜಿ ಶಾಸಕ ಬಿ.ಪಿ. ಹರೀಶ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವಿರೇಶ್ ಅವರದ್ದಾಗಿದೆ. ಹಾಲೇಶಪ್ಪ ಚುನಾಯಿತ ನಿರ್ದೇಶಕರಾಗಿದ್ದು, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಒಟ್ಟಾರೆ ಸಾಮಾನ್ಯ ಕಾರ್ಯಕರ್ತನಿಗೆ ಬಿಟ್ಟುಘಿ, ಕೋ ಅ್ ಮೂಲಕ ನಿರ್ದೇಶಕರಾಗಿ ಎಸ್‌ವಿಆರ್‌ರನ್ನು ನೇಮಕ ಮಾಡಿಕೊಂಡಿರುವುದು ಎಷ್ಟು ಸರಿ ಎಂದು ಹೆಸರು ಹೇಳಲಿಚ್ಛಿಸದ ಕಾರ್ಯಕರ್ತ ಪ್ರಶ್ನಿಸಿದ್ದಾನೆ
—–
ನಿರ್ದೇಶಕರ ಬಲಾ-ಬಲ
ಬಿಜೆಪಿ-7
ಕಾಂಗ್ರೆಸ್-2
ನಾಮನಿರ್ದೇಶಿತ-4
———-
ಕಾಂಗ್ರೆಸ್ ನಿರ್ದೇಶಕರು
ಶ್ರೀನಿವಾಸ ಶೆಟ್ರು
ಜೆ.ಆರ್. ಷಣ್ಮುಖಪ್ಪ

ಬಿಜೆಪಿ ನಿದೇಶಕರು
* ಎಸ್.ವಿ. ರಾಮಚಂದ್ರಪ್ಪ
* ಜಗದೀಶಪ್ಪ ಬಣಕಾರ್
* ಕೆಂಗನಹಳ್ಳಿ ಷಣ್ಮುಖಪ್ಪ
* ವೇಣುಗೋಪಾಲ್ ರೆಡ್ಡಿ
*ದ್ಯಾಮೇನಹಳ್ಳಿ ಶೇಖರಪ್ಪ
* ಹಾಲೇಶಪ್ಪ ಹೊಳೆಸಿರಿಗೆ
* ಜಿ.ಎನ್.ಸ್ವಾಮಿ
——-
ನಾಮ ನಿರ್ದೇಶಿತ ನಿರ್ದೇಶಕರು
* ಗೋಪಾನಾಳ್ ಪಾಲಾಕ್ಷಪ್ಪ
* ಟಿ.ಜಿ. ಜೀವನ್ ಪ್ರಕಾಶ್
* ಮಳಲ್ಕರೆ ಜಿ.ಮುರುಗೇಂದ್ರಪ್ಪ
* ವಕೀಲ ಎಚ್.ದಿವಾರ್ಕ
——–
ಉಳಿದಿರುವ ಅಧಿಕಾರವಾಧಿ
1 ವರ್ಷ, 10 ತಿಂಗಳು

ಎಸ್ಟಿ ಮತ ಸೆಳೆಯುವ ಹುನ್ನಾರ : ಎಸ್.ವಿ.ರಾಮಚಂದ್ರಪ್ಪ ಅವರನ್ನು ಡಿಸಿಸಿ ಬ್ಯಾಂಕ್ ಶಕ್ತಿ ಕೇಂದ್ರಕ್ಕೆ ತರುವ ಮೂಲಕ ಪರಿಶಿಷ್ಟ ಪಂಗಡದ ಮತಗಳನ್ನು ಮುಂಬರುವ ವಿಧಾನ ಸಭೆ ಹಾಗೂ ಲೋಕಸಭೆಯಲ್ಲಿ ಚುನಾವಣೆಯಲ್ಲಿ ಸೆಳೆಯಬೇಕೆಂಬ ತಂತ್ರಗಾರಿಕೆ ವರಿಷ್ಠರು ಮಾಡುತ್ತಿದ್ದಾರೆ. ಈ ಲೆಕ್ಕಾಚಾರವನ್ನು ಒಪ್ಪದ ಕೆಲ ಬಿಜೆಪಿ ಮುಖಂಡರು, ಪಕ್ಷದ ಬೆಳವಣಿಗೆಗೆ ಶ್ರಮಿಸಿದವರಿಗೆ ಈ ಹುದ್ದೆ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಆದರೆ, ಅಂತಿಮವಾಗಿ ಸಂಸದ ಜಿ.ಎಂ. ಸಿದ್ದೇಶ್ವರ್ ಹಾಗೂ ಶಾಸಕ ಎಸ್.ವಿ. ರಾಮಚಂದ್ರಪ್ಪ ನಿರ್ಧಾರ ಒಪ್ಪಿಕೊಳ್ಳುವುದು ಇಲ್ಲಿ ಅನಿವಾರ್ಯವಾಗಲಿದೆ.

17 ಕೋಟಿ ರೂ.ನ ಕೇಂದ್ರ ಕಚೇರಿ:

ಜಿಪಂ ಕಚೇರಿ ಮುಂಭಾಗದ ಸರ್ಕ್ಯೂಟ್ ಹೌಸ್ ಬಳಿ 20
ಗುಂಟೆ ಜಾಗದಲ್ಲಿ 17 ಕೋಟಿ ರೂ. ವೆಚ್ಚದಲ್ಲಿ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಸಹಕಾರಿ ಇಲಾಖೆ ಅನುಮೋದನೆ ದೊರೆತ ತಕ್ಷಣ ಟೆಂಡರ್ ಕರೆಯಲು ಬ್ಯಾಂಕ್ ಮುಂದಾಗಲಿದೆ. ಪ್ರತಿಕ್ರಿಯೆಗೆ ಹಾಲೇಶಪ್ಪನವರು ಸಂಪರ್ಕಿಸುವ ಪ್ರಯತ್ನ ಮಾಡಲಾಯ್ತು ಆದರೆ ಅವರು ಸಿಗಲಿಲ್ಲ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!