15 ಜನ ಕಾರ್ಯಕರ್ತರ ಬಿಡುಗಡೆಗೊಳಿಸಲು ದಾವಣಗೆರೆಯ ಎನ್ಎಸ್ಯುಐ ಪದಾಧಿಕಾರಿಗಳಿಂದ ಮನವಿ!

ದಾವಣಗೆರೆ : ಎನ್.ಎಸ್.ಯು.ಐ ಮುಖಂಡರು ಹಾಗೂ ಕಾರ್ಯಕರ್ತರು ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ತಿಪಟೂರಿನ ನಿವಾಸದ ಮುಂದೆ ಸಾಂಕೇತಿಕ ಪ್ರತಿಭಟನೆ ಮಾಡುತ್ತಿರಬೇಕಾದರೆ ಮನೆಗೆ ಬೆಂಕಿ ಇಡಲು ಬಂದಿದ್ದಾರೆ ಎಂಬ ನೆಪವೊಡ್ಡಿ 15 ಜನ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಆದಷ್ಟು ಆ ಎಲ್ಲಾ ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕು ಎಂದು ಎನ್ಎಸ್ಯುಐ ದಾವಣಗೆರೆ ಜಿಲ್ಲಾ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
01-06-2022 ರಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ತಿಪಟೂರಿನ ನಿವಾಸದ ಮುಂದೆ ಎನ್.ಎಸ್.ಯು.ಐ ಮುಖಂಡರು ಹಾಗೂ ಕಾರ್ಯಕರ್ತರು ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದು, ಅವರನ್ನು ರಾಜ್ಯ ಸರ್ಕಾರ ಮನೆಗೆ ಬೆಂಕಿ ಇಡಲು ಬಂದಿದ್ದಾರೆ ಎಂಬ ನೆಪವೊಡ್ಡಿ ಬಂಧಿಸಿದ್ದಾರೆ. ಸುಮಾರು 15 ಜನರನ್ನು ಬಂಧಿಸಿ ಈಗಾಗಲೇ 2 ದಿನಗಳು ಕಳೆದಿವೆ, ಅದರಲ್ಲಿ ಪ್ರಮುಖರಾದ NSUI ರಾಜ್ಯಾದ್ಯಕ್ಷ ಕೀರ್ತಿ ಗಣೇಶ್ ದಾವಣಗೆರೆಯ ಜಿಲ್ಲಾಧ್ಯಕ್ಷ ಅಲಿ, ರೆಹಮತ್ ಪೈಲ್ವಾನ್ ಸೇರಿದಂತೆ 15 ಜನ ಕಾರ್ಯಕರ್ತರನ್ನು ಬಂಧಿಸಿ ತುಮಕೂರಿನ ಕಾರಾಗೃಹದಲ್ಲಿ ಇಟ್ಟಿರುವುದು ಖಂಡನೀಯ.
ವಿದ್ಯಾರ್ಥಿಗಳ ನೋವು, ತೊಂದರೆಗಳಲ್ಲಿ ಸದಾ ಮುಂದೆ ನಿಲ್ಲುವ NSUI ಸಂಘಟನೆಯನ್ನು ಈ ಸರ್ಕಾರ ಕಟ್ಟಿಹಾಕಲು ಪ್ರಯತ್ನಿಸುತ್ತಿದ್ದು, ವಿದ್ಯಾಥಿಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲವಾದ ಸರ್ಕಾರದ ಮುಂದೆ ಪ್ರಶ್ನೆ ಮಾಡುವ ಹಕ್ಕನ್ನು ಸಹಿತ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈ ಸರ್ಕಾರ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯವನ್ನು ನೋಡುತ್ತಾ ಕುಳಿತುಕೊಳ್ಳಲು ನಾವು ಸಿದ್ಧರಿಲ್ಲ, ಕೇಸರೀಕರಣವು ನಮ್ಮ ವಿದ್ಯಾರ್ಥಿಗಳು ಮತ್ತು ಅವರ ಶಿಕ್ಷಣದ ಮೇಲೆ ಪರಿಣಾಮ ಬೀರಲು ನಾವು ಬಿಡುವುದಿಲ್ಲ, ಪ್ರತಿಭಟನಾಕಾರರನ್ನು ಬಂಧಿಸಬಹುದು ಆದರೆ ನಿಲ್ಲಿಸಲು ಸಾಧ್ಯವಿಲ್ಲ. ನಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ತಲುಪಿಸಿ, ಬಂಧಿತ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಮನವಿ ಸಲ್ಲಿಸಿದ್ದಾರೆ.
garudavoice21@gmail.com 9740365719